Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    3 ಕೋಟಿ ರೂ. ವೆಚ್ಚದ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ- ಮನವಿ ಪತ್ರ ಬಿಡುಗಡೆ

    1 week ago

    ಉಡುಪಿ: ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರವಾದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು...

    The post 3 ಕೋಟಿ ರೂ. ವೆಚ್ಚದ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ- ಮನವಿ ಪತ್ರ ಬಿಡುಗಡೆ first appeared on Udupi Times.



    ಉಡುಪಿ: ಮೊಗವೀರ ಸಮಾಜದ ಮೂಲ ಧಾರ್ಮಿಕ ಕೇಂದ್ರವಾದ ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದಲ್ಲಿ ಲಭ್ಯವಿರುವ ಲಿಖಿತ ಮಾಹಿತಿಯಂತೆ, ಸುಮಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗುರು ಪರಂಪರೆಯ 9ನೇ ಹಾಗೂ ಕೊನೆಯ ಗುರುಗಳಾದ ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಬ್ರಹತ್ ಕಂಚಿನ ಪುತ್ಥಳಿಯನ್ನು ಅಂದಾಜು 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಸಲುವಾಗಿ ರೂಪಿಸಿದ ಮನವಿ ಪತ್ರ ಹಾಗೂ ರಶೀದಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರದ ಕಚೇರಿಯಲ್ಲಿ ನೆರವೇರಿತು.

    ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಾಡೋಜ ಡಾ.ಜಿ.ಶಂಕರ್ ಅವರು, ಶ್ರೀಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿಯೂ ಗುರುಗಳ ಪುತ್ಥಳಿಯನ್ನು ಉಚ್ಚಿಲದಲ್ಲಿ ವೆಚ್ಚದಲ್ಲಿ ನಿರ್ಮಿಸಬೇಕೆಂಬ ವಿಚಾರ ಪ್ರಸ್ತಾಪವಾಗಿರುವುದನ್ನು ತಿಳಿಸಿದರು. ಸಮಾಜದ ಪ್ರತಿಯೊಂದು ಮನೆಯಿಂದಲೂ ಶಕ್ತ್ಯಾನುಸಾರ ಗುರು ಕಾಣಿಕೆ ರೂಪದಲ್ಲಿ ಗರಿಷ್ಠಮಟ್ಟದಲ್ಲಿ ವಂತಿಗೆಯನ್ನು ಸಲ್ಲಿಸಿ, ಮೊಗವೀರ ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಕೀರ್ತಿಶೇಷ ಶ್ರೀಮಾಧವ ಮಂಗಲ ಪೂಜಾರ್ಯರ ಪುತ್ಥಳಿ ನಿರ್ಮಾಣಕ್ಕೆ ಸಹಕರಿಸ ಬೇಕೆಂದು ಅವರು ಮನವಿ ಮಾಡಿದರು.

    ರಶೀದಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್ ಅವರು, 3 ಕೋಟಿ ರೂಪಾಯಿಗಳಸ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಸಮಾಜದ ಸರ್ವ ಬಂಧುಗಳು ಒಗ್ಗಟ್ಟಿನಿಂದ ಶ್ರಮವಹಿಸಿ ಯಶಸ್ವಿ ಗೊಳಿಸಬೇಕೆಂದು ಕೋರಿದರು.

    ಈ ಸಂದರ್ಭದಲ್ಲಿ ಗಿರಿಧರ್ ಸುವರ್ಣ, ಮೋಹನ್ ಬೆಂಗ್ರೆ, ಮನೋಜ್ ಉಳ್ಳಾಲ, ಪದ್ಮಾಕರ್ ಮಸ್ಕತ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ರಾಜೇಶ್ ಉಳ್ಳಾಲ, ಪವನ್ ಆನಂದ್ ಎರ್ಮಾಳ್, ಕವಿತಾ ಶರತ್, ವಾಸುದೇವ ಸಾಲ್ಯಾನ್, ದಿನೇಶ್ ಎರ್ಮಾಳ್, ಶಿವರಾಮ್ ಕೋಟ, ಶ್ರೀಮತಿ ಸುಗುಣ ಕರ್ಕೇರ, ಸದಾನಂದ ಬಂಗೇರ ಉಳ್ಳಾಲ, ಎಂ.ಎಸ್. ಸಂಜೀವ ಕೋಟ, ಅಶೋಕ್ ಉಪ್ಪಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

    The post 3 ಕೋಟಿ ರೂ. ವೆಚ್ಚದ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ- ಮನವಿ ಪತ್ರ ಬಿಡುಗಡೆ first appeared on Udupi Times.

    Click here to Read More
    Previous Article
    ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಇಂದಿರಾ ಶೇಖರ್ ನಿಧನ
    Next Article
    ಶ್ರೀಕ್ಷೇತ್ರಮಂದಾರಬೈಲು:ಮಾತಾಡುವ ಮಂತ್ರ ದೇವತೆ ಸನ್ನಿಧಾನದಲ್ಲಿ ವಾರ್ಷಿಕ ಉತ್ಸವದ ಸಂಭ್ರಮ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment