Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ರಕ್ತ ಸಂಬಂಧಕ್ಕೆ ಚೂರಿ ಏಟು: ಕುಡಿದ ಅಮಲಿನಲ್ಲಿ ಅಣ್ಣನನ್ನೇ ಕೊಲ್ಲಲು ಯತ್ನಿಸಿದ ತಮ್ಮ!

    10 hours ago

    ಹೊಸದಿಗಂತ ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಶಂಕರ ಕಾಲೋನಿಯಲ್ಲಿ ರಕ್ತಸಂಬಂಧವನ್ನೇ ಮರೆತು ತಮ್ಮನೊಬ್ಬ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಮಲ್ಲೇಶ ಪೂಜಾರ (42) ಎಂಬುವವರೇ ತಮ್ಮನ ಕೈಯಿಂದ ಹಲ್ಲೆಗೊಳಗಾದ ದುರ್ದೈವಿ. ಗುರುವಾರ ಬೆಳಿಗ್ಗೆ ಮಲ್ಲೇಶ ಅವರು ತಮ್ಮ ಮನೆಯ ಎದುರು ಕುಳಿತಿದ್ದಾಗ, ಮದ್ಯ ಸೇವಿಸಿ ಬಂದಿದ್ದ ಸಹೋದರ ಪ್ರದೀಪ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಪ್ರದೀಪ ತನ್ನ ಬಳಿಯಿದ್ದ ಚಾಕುವಿನಿಂದ ಅಣ್ಣನಿಗೆ […]

    The post ರಕ್ತ ಸಂಬಂಧಕ್ಕೆ ಚೂರಿ ಏಟು: ಕುಡಿದ ಅಮಲಿನಲ್ಲಿ ಅಣ್ಣನನ್ನೇ ಕೊಲ್ಲಲು ಯತ್ನಿಸಿದ ತಮ್ಮ! appeared first on ONLINE EDITION.



    ಹೊಸದಿಗಂತ ಹುಬ್ಬಳ್ಳಿ:

    ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಶಂಕರ ಕಾಲೋನಿಯಲ್ಲಿ ರಕ್ತಸಂಬಂಧವನ್ನೇ ಮರೆತು ತಮ್ಮನೊಬ್ಬ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ. ಮಲ್ಲೇಶ ಪೂಜಾರ (42) ಎಂಬುವವರೇ ತಮ್ಮನ ಕೈಯಿಂದ ಹಲ್ಲೆಗೊಳಗಾದ ದುರ್ದೈವಿ.

    ಗುರುವಾರ ಬೆಳಿಗ್ಗೆ ಮಲ್ಲೇಶ ಅವರು ತಮ್ಮ ಮನೆಯ ಎದುರು ಕುಳಿತಿದ್ದಾಗ, ಮದ್ಯ ಸೇವಿಸಿ ಬಂದಿದ್ದ ಸಹೋದರ ಪ್ರದೀಪ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾನೆ. ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಪ್ರದೀಪ ತನ್ನ ಬಳಿಯಿದ್ದ ಚಾಕುವಿನಿಂದ ಅಣ್ಣನಿಗೆ ಮನಬಂದಂತೆ ಇರಿದಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲೇಶನನ್ನು ಕಂಡ ಸ್ಥಳೀಯರು ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ನಗರದ ಕಿಮ್ಸ್ (KMCRI) ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನೆಯ ನಂತರ ಆರೋಪಿ ಪ್ರದೀಪ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದ ಕೂಡಲೇ ಹಳೇ ಹುಬ್ಬಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಮಲ್ಲೇಶ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

    The post ರಕ್ತ ಸಂಬಂಧಕ್ಕೆ ಚೂರಿ ಏಟು: ಕುಡಿದ ಅಮಲಿನಲ್ಲಿ ಅಣ್ಣನನ್ನೇ ಕೊಲ್ಲಲು ಯತ್ನಿಸಿದ ತಮ್ಮ! appeared first on ONLINE EDITION.

    Click here to Read More
    Previous Article
    ಪ್ರೀತಿಸಿ ಮದುವೆಯಾದವನೇ ಯಮನಾದ: ಅಪ್ಪ ಜೈಲಿಗೆ, ಅಮ್ಮ ಮಸಣಕ್ಕೆ: ಅನಾಥರಾದ ಮಕ್ಕಳು!
    Next Article
    ಮದುವೆ ಬೇಡ ಎಂದ ಎರಡು ಮಕ್ಕಳ ತಾಯಿಯನ್ನು ಇರಿದು ಹ*ತ್ಯೆ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment