Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಹಾರಾಷ್ಟ್ರ | ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಮಾನತ್ತಾದ 12 ಜನ ಕಾಂಗ್ರೆಸ್ ಕೌನ್ಸಿಲರ್‌ ಗಳು ಬಿಜೆಪಿಗೆ ಸೇರ್ಪಡೆ

    1 week ago

    ಚುನಾವಣೆ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ ಅಂಬರ್‌ನಾಥ್‌ ಪುರಸಭೆ 12 ಕೌನ್ಸಿಲರ್‌ಗಳು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್‌ನಾಥ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಂದ್ರ ಚವಾಣ್ ಸಮ್ಮುಖದಲ್ಲಿ ಕಾಂಗ್ರೆಸ್‌ ಕೌನ್ಸಿಲರ್‌ಗಳು ಬಿಜೆಪಿ ಸೇರಿಸಿದ್ದಾರೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ, ಈಗ ಬಿಜೆಪಿಗೆ ಸೇರಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ. ಕೌನ್ಸಿಲರ್‌ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ರವೀಂದ್ರ ಚವಾಣ್, “ಈ ಕೌನ್ಸಿಲರ್‌ಗಳನ್ನು ಜನರು ಆಯ್ಕೆ ಮಾಡಿದ್ದರು. ಆ ಜನರಿಗೆ ಕೌನ್ಸಿಲರ್‌ಗಳು ಅಭಿವೃದ್ಧಿಯ ಭರವಸೆ ನೀಡಿದ್ದರು. ರಾಜ್ಯದಲ್ಲಿ […]

    The post ಮಹಾರಾಷ್ಟ್ರ | ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಮಾನತ್ತಾದ 12 ಜನ ಕಾಂಗ್ರೆಸ್ ಕೌನ್ಸಿಲರ್‌ ಗಳು ಬಿಜೆಪಿಗೆ ಸೇರ್ಪಡೆ appeared first on nudikarnataka.



    ಚುನಾವಣೆ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿದ್ದ ಅಂಬರ್‌ನಾಥ್‌ ಪುರಸಭೆ 12 ಕೌನ್ಸಿಲರ್‌ಗಳು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್‌ನಾಥ್‌ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಂದ್ರ ಚವಾಣ್ ಸಮ್ಮುಖದಲ್ಲಿ ಕಾಂಗ್ರೆಸ್‌ ಕೌನ್ಸಿಲರ್‌ಗಳು ಬಿಜೆಪಿ ಸೇರಿಸಿದ್ದಾರೆ. ಅಭಿವೃದ್ಧಿಯ ಹಿತದೃಷ್ಟಿಯಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ, ಈಗ ಬಿಜೆಪಿಗೆ ಸೇರಿದ್ದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಕೌನ್ಸಿಲರ್‌ಗಳನ್ನು ಪಕ್ಷಕ್ಕೆ ಸ್ವಾಗತಿಸಿದ ರವೀಂದ್ರ ಚವಾಣ್, “ಈ ಕೌನ್ಸಿಲರ್‌ಗಳನ್ನು ಜನರು ಆಯ್ಕೆ ಮಾಡಿದ್ದರು. ಆ ಜನರಿಗೆ ಕೌನ್ಸಿಲರ್‌ಗಳು ಅಭಿವೃದ್ಧಿಯ ಭರವಸೆ ನೀಡಿದ್ದರು. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅರಿತಿರುವ ಕೌನ್ಸಿಲರ್‌ಗಳು, ಜನರಿಗೆ ನ್ಯಾಯ ಮತ್ತು ಅಭಿವೃದ್ಧಿಯನ್ನು ತಲುಪಿಸಲು ನಮ್ಮ ಜೊತೆಗೂಡಿದ್ದಾರೆ” ಎಂದು ಹೇಳಿದ್ದಾರೆ.

    ಡಿಸೆಂಬರ್ 20ರಂದು ನಡೆದ ಸ್ಥಳೀಯ ಚುನಾವಣೆಯಲ್ಲಿ ಅಂಬರ್‌ನಾಥ್‌ ಪುರಸಭೆಯ ಫಲಿತಾಂಶವು ಅತಂತ್ರ ಪುರಸಭೆಯನ್ನು ನಿರ್ಮಿಸಿತ್ತು. ಆ ಸಂದರ್ಭದಲ್ಲಿ 12 ಕಾಂಗ್ರೆಸ್‌ ಕೌನ್ಸಿಲರ್‌ಗಳು ಪಕ್ಷದ ಬದ್ಧ ಎದುರಾಳಿಯಾದ ಬಿಜೆಪಿ ಜೊತೆಗೂಡಿ ‘ಅಂಬರ್‌ನಾಥ್ ವಿಕಾಸ್ ಅಘಾಡಿ’ (AVA) ಬ್ಯಾನರ್ ಅಡಿಯಲ್ಲಿ ಮೈತ್ರಿ ಮಾಡಿಕೊಂಡು, ಆಡಳಿತ ರಚಿಸಿದ್ದರು. ಕಾಂಗ್ರೆಸ್‌ ಕೌನ್ಸಿಲರ್‌ಗಳು ಮಿತ್ರಪಕ್ಷ ಶಿವಸೇನೆ (ಯುಬಿಟಿ)ಯನ್ನೂ ಬದಿಗಿಟ್ಟಿದ್ದರು. ಪರಿಣಾಮ, ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡ ಪಕ್ಷದ ಕೌನ್ಸಿಲರ್‌ಗಳನ್ನು ಕಾಂಗ್ರೆಸ್‌ ಅಮಾನತು ಮಾಡಿತ್ತು. ಈ ಬೆನ್ನಲ್ಲೇ, ಅವರೆಲ್ಲರೂ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ.

    60 ಸದಸ್ಯರ ಅಂಬರ್‌ನಾಥ್‌ ಪುರಸಭೆಯ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) 27 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 14, ಕಾಂಗ್ರೆಸ್‌ 12, ಎನ್‌ಸಿಪಿ (ಅಜಿತ್ ಬಣ) 4 ಹಾಗೂ ಸ್ವತಂತ್ರರು 2 ಸ್ಥಾನಗಳನ್ನು ಗೆದ್ದಿದ್ದರು. ಮೈತ್ರಿಯಡಿಯಲ್ಲಿ ಕಾಂಗ್ರೆಸ್‌ ಕೌನ್ಸಿಲರ್‌ಗಳು ಶಿವಸೇನೆ (ಯುಬಿಟಿ)ಗೆ ಬೆಂಬಲ ನೀಡಬೇಕಿತ್ತು. ಆದರೆ, ಅವರು ಬಿಜೆಪಿ ಮತ್ತು ಎನ್‌ಸಿಪಿ (ಅಜಿತ್ ಬಣ)ದ ಜೊತೆಗೂಡಿ ಆಡಳಿತ ರಚಿಸಿದ್ದರು.

    ಇನ್ನು, ಅಕೋಲಾ ಜಿಲ್ಲೆಯ ಅಕೋಟ್ ಪುರಸಭೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಬಿಜೆಪಿ ಜೊತೆ ಕೈಜೋಡಿಸಿ ಆಡಳಿತ ರಚಿಸಿದೆ.

    The post ಮಹಾರಾಷ್ಟ್ರ | ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಮಾನತ್ತಾದ 12 ಜನ ಕಾಂಗ್ರೆಸ್ ಕೌನ್ಸಿಲರ್‌ ಗಳು ಬಿಜೆಪಿಗೆ ಸೇರ್ಪಡೆ appeared first on nudikarnataka.

    Click here to Read More
    Previous Article
    ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಸಂಸದ ಯದುವೀರ್
    Next Article
    ಕೋಗಿಲು ಬಡಾವಣೆ ಅಕ್ರಮ ಮನೆ ತೆರವು: 26 ಜನರಿಗೆ ಮನೆ ಕೊಡಲು ಅವಕಾಶ- ಸಚಿವ ಜಮೀರ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment