Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸರಗಳ್ಳ – ಮನೆಗಳ್ಳನ ಬಂಧನ : 31.98 ಲಕ್ಷದ ಮೌಲ್ಯದ ಮಾಲುಗಳ ವಶ

    6 days ago

    ಸರಗಳ್ಳ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 31.98 ಲಕ್ಷದ ಮೌಲ್ಯದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಡ್ಯ ಎಸ್ಪಿ ಶೋಭಾರಾಣಿ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ನಗರದ ಶಾಂತಿನಗರದ ಸದ್ದಾಂ ಹುಸೇನ್ (32) ಹಾಗೂ ಮೈಸೂರಿನ ರಾಜೀವ್ ನಗರದ ಸೈಯಾದ್ ಆಯೂಬ್ (32) ಬಂಧಿತ ಆರೋಪಿಗಳು. ಆರೋಪಿಗಳಿಂದ ಒಟ್ಟು 253 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 178 ಗ್ರಾಂ ಬೆಳ್ಳಿಯ ಒಡವೆಗಳು, ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಪಲ್ಸರ್ […]

    The post ಸರಗಳ್ಳ – ಮನೆಗಳ್ಳನ ಬಂಧನ : 31.98 ಲಕ್ಷದ ಮೌಲ್ಯದ ಮಾಲುಗಳ ವಶ appeared first on nudikarnataka.



    ಸರಗಳ್ಳ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 31.98 ಲಕ್ಷದ ಮೌಲ್ಯದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಡ್ಯ ಎಸ್ಪಿ ಶೋಭಾರಾಣಿ ತಿಳಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ನಗರದ ಶಾಂತಿನಗರದ ಸದ್ದಾಂ ಹುಸೇನ್ (32) ಹಾಗೂ ಮೈಸೂರಿನ ರಾಜೀವ್ ನಗರದ ಸೈಯಾದ್ ಆಯೂಬ್ (32) ಬಂಧಿತ ಆರೋಪಿಗಳು.

    ಆರೋಪಿಗಳಿಂದ ಒಟ್ಟು 253 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 178 ಗ್ರಾಂ ಬೆಳ್ಳಿಯ ಒಡವೆಗಳು, ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಪಲ್ಸರ್ ಬೈಕ್ ಮತ್ತು ಆಕ್ಸಿಸ್ ಬೈಕನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

    ಏನಿದು ಪ್ರಕರಣ

    ಕಳೆದ ಜೂ.28, 2025 ರಂದು ಸಂಜೆ 6.15 ಗಂಟೆ ಸಮಯದಲ್ಲಿ ಮಳವಳ್ಳಿ ತಾಲ್ಲೂಕಿನ ಚಿಕ್ಕೆಗೌಡನದೊಡ್ಡಿ ಗ್ರಾಮ ಹತ್ತಿರ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಿರುಗಾವಲು ಸಂತೆಮಾಳದ ಕಡೆಯಿಂದ ಬಂದ ಬೈಕಿನ ಚಾಲಕ ಏಕಾಏಕಿ ಸರಿತಾ ಎಂಬ ಕತ್ತಿನಲ್ಲಿದ್ದ 2 ಎಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಸರಿತಾ ಅವರು ದೂರು ದಾಖಲಿಸಿದ್ದರು.

    ಈ ಪ್ರಕರಣದ ಪತ್ತೆಗೆ ಮಳವಳ್ಳಿ ಡಿವೈಎಸ್‌ಪಿ ಯಶವಂತ್ ಕುಮಾರ್ ಮಾರ್ಗದರ್ಶನದಲ್ಲಿ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ಬಿ.ಎಸ್. ಅವರ ನೇತೃತ್ವದಲ್ಲಿ ಕಿರುಗಾವಲು ಪೊಲೀಸ್ ಠಾಣಾ ಪಿಎಸ್‌ಐ ರವಿಕುಮಾರ್ ಡಿ. ಹಾಗೂ ಸಿಬ್ಬಂದಿಯರಾದ ಸಿಹೆಚ್ ಸಿ-07 ರಿಯಾಜ್ ಪಾಷ. ಸಿಹೆಚ್ ಸಿ-127 ಪ್ರಭುಸ್ವಾಮಿ, ಸಿಪಿಸಿ-484 ಸಿದ್ದರಾಜು, ಸಿಪಿಸಿ-538 ಶ್ರೀನಿವಾಸ್, ಸಿಪಿಸಿ-663 ಮಧುಕಿರಣ್, ಸಿಪಿಸಿ-68 ಶಿವಕುಮಾರ್ ಎನ್.ಸಿ, ಸಿಪಿಸಿ-108 ರಫೀಕ್ ನದಾಫ್, ಸಿಪಿಸಿ-688 ನಾಗೇಶ್, ಮಂಡ್ಯ ಸಿಡಿಆರ್ ವಿಭಾಗದ ಸಿಹೆಚ್ ಸಿ-197 ರವಿಕಿರಣ್ ಮತ್ತು ಸಿಹೆಚ್ ಸಿ-105 ಲೋಕೇಶ್, ಮಂಡ್ಯ ಸೆನ್ ಪೊಲೀಸ್ ಠಾಣೆಯ ಸಿಪಿಸಿ-157 ಬಸವರಾಜು ಬಿ. ಮತ್ತು ಜೀಪ್ ಚಾಲಕರಾದ ಎಹೆಚ್ ಸಿ-65 ಮಹದೇವಸ್ವಾಮಿ, ಎಹೆಚ್ ಸಿ-18 ನಾಗರಾಜು ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೋಭಾರಾಣಿ ಅವರು ಈ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

    The post ಸರಗಳ್ಳ – ಮನೆಗಳ್ಳನ ಬಂಧನ : 31.98 ಲಕ್ಷದ ಮೌಲ್ಯದ ಮಾಲುಗಳ ವಶ appeared first on nudikarnataka.

    Click here to Read More
    Previous Article
    ಕೆ.ಎಂ.ಸಿ. ಮಣಿಪಾಲ: ವೈದ್ಯಾಧಿಕಾರಿಗಳಿಗೆ ಅಸಾಂಕ್ರಮಿಕ ರೋಗಗಳ ನಿಯಂತ್ರಣ ಕಾರ್ಯಗಾರ
    Next Article
    ಪ್ರಕಾಶಕಿ, ಸಾಹಿತಿ ಆಶಾ ರಘು ನಿಧನ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment