Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಜ.6 ರಂದು ಆಹಾರ ಸಚಿವರೊಂದಿಗೆ ಪಡಿತರ ವಿತರಕರ ಸಭೆ : ಟಿ.ಕೃಷ್ಣಪ್ಪ

    2 weeks ago

    ಕರ್ನಾಟಕ ರಾಜ್ಯ ಪಡಿತರ ವಿತರಕರ ವಿವಿಧ ಬೇಡಿಕೆಗಳನ್ನು ಸರಕಾರದ ಮುಂಡಿಸುವ ಸಂಬಂಧ ಜ.೬ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಹಾರ ಇಲಾಖೆಯ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರೊಂದಿಗೆ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ(ಕೆ.ಕೆ) ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನ್ ಬಾಕಿ, ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಸಚಿವರನ್ನು ಮನವಿ ಮಾಡಲಾಗುವುದು ಎಂದರು. ಸಭೆಯಲ್ಲಿ ೨೦ ಸಾವಿರ ಪಡಿತರ ವಿತರಕರ ಕೇಂದ್ರ ೪ ತಿಂಗಳು, […]

    The post ಜ.6 ರಂದು ಆಹಾರ ಸಚಿವರೊಂದಿಗೆ ಪಡಿತರ ವಿತರಕರ ಸಭೆ : ಟಿ.ಕೃಷ್ಣಪ್ಪ appeared first on nudikarnataka.



    ಕರ್ನಾಟಕ ರಾಜ್ಯ ಪಡಿತರ ವಿತರಕರ ವಿವಿಧ ಬೇಡಿಕೆಗಳನ್ನು ಸರಕಾರದ ಮುಂಡಿಸುವ ಸಂಬಂಧ ಜ.೬ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಆಹಾರ ಇಲಾಖೆಯ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರೊಂದಿಗೆ ಸಭೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ(ಕೆ.ಕೆ) ತಿಳಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಷನ್ ಬಾಕಿ, ಸರ್ವರ್ ಸಮಸ್ಯೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಸಚಿವರನ್ನು ಮನವಿ ಮಾಡಲಾಗುವುದು ಎಂದರು.

    ಸಭೆಯಲ್ಲಿ ೨೦ ಸಾವಿರ ಪಡಿತರ ವಿತರಕರ ಕೇಂದ್ರ ೪ ತಿಂಗಳು, ರಾಜ್ಯದ ೨ ತಿಂಗಳ ಕಮಿಷನ್ ಹಣವನ್ನು ಡಿಬಿಡಿ ಮೂಲಕ ನೇರ ಖಾತೆಗೆ ಪಾವತಿಸಬೇಕು. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯಂತೆ ಏಕರೂಪ ತಂತ್ರಜ್ಞಾನ ಒದಗಿಸಿ ಸರ್ವರ್ ಸಮಸ್ಯೆ ಬಗೆಹರಿಸುವುದು, ಸರಕಾರದಿಂದಲೇ ಉಚಿತ ಕಂಪ್ಯೂಟರ್, ಬಯೋಮೆಟ್ರಿಕ್ ಮತ್ತು ಪ್ರಿಂಟರ್ ಯಂತ್ರ ನೀಡುವುದು, ೧೦ ಕೆ.ಜಿ ಅಕ್ಕಿಯೊಂದಿಗೆ ಪಡಿತರ ಕಿಟ್ ನೀಡುವುದು, ೬ ವರ್ಷದಿಂದ ಬಾಕಿ ಉಳಿದ ಇಕೆವೈಸಿ ಹಣ ಬಿಡುಗಡೆಗೆ ಆದೇಶ, ಅನ್ಯ ರಾಜ್ಯಗಳಲ್ಲಿ ಕೇಂದ್ರದಿಂದ ನೀಡುವ ಪಡಿತರ ಕಿಟ್‌ಅನ್ನು ಕರ್ನಾಟಕದಲ್ಲೂ ನೀಡುವಂತೆ ಕ್ರಮವಹಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಲ್ಲಿ ಕೋರಲಾಗುವುದು ಎಂದರು.

    ಗೋಷ್ಠಿಯಲ್ಲಿ ರಾಜಣ್ಣ, ಚಂದ್ರು, ನಿಂಗೇಗೌಡ, ದೇವಾಜ, ಜಯರಾಮ ಇದ್ದರು.

    The post ಜ.6 ರಂದು ಆಹಾರ ಸಚಿವರೊಂದಿಗೆ ಪಡಿತರ ವಿತರಕರ ಸಭೆ : ಟಿ.ಕೃಷ್ಣಪ್ಪ appeared first on nudikarnataka.

    Click here to Read More
    Previous Article
    ಮಂಡ್ಯ | ಬೇಬಿಕಲಾ ಅವರಿಗೆ ಪಿಹೆಚ್.ಡಿ ಪದವಿ
    Next Article
    ಮಂಡ್ಯಕ್ಕೆ ಕಾರ್ಖಾನೆ ತರುವುದಿದ್ದರೆ ಕಂಪನಿ ಮೂಲಕ ಅರ್ಜಿ ಸಲ್ಲಿಸಿ : ಗಂಗಾಧರ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment