Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    Crime news|ವಿವಿಧ ಕಡೆ ಕಳ್ಳತನ:ತಂದೆ – ಮಕ್ಕಳ ಬಂಧನ

    19 hours ago

    ದಾವಣಗೆರೆ :ಜಿಲ್ಲೆಯ ವಿವಿಧ ಕಡೆ ಕಳ್ಳತನ ಮಾಡಿದ್ದ ತಂದೆ – ಮಕ್ಕಳನ್ನು ಪೊಲೀಸರು ಬಂಧಿಸಿ, ರೂ 10.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ. ಯರಗುಟೆ ರಸ್ತೆ ಆರ್‌ಟಿಓ ಕಚೇರಿ ಬಳಿ ಎಂಜಿ ಬಿಲ್ಡಿಂಗ್ ಹತ್ತಿರದ ಶಿವುಕುಮಾರ (26) ವಿರೇಶ (68) ಮಂಜುನಾಥ  ಬಂಧಿತರು. ಹರಿಹರ ತಾ, ದೊಗ್ಗಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜ 2 ರಂದು ಬೆಳ್ಳಿಯ ಕಾಶಿ, ಬೆಳ್ಳಿ ಕಿರೀಟ, ಬೆಳ್ಳಿಯ ಆಂಜನೇಯ ಮುಖ, ಒಂದು ಬೆಳ್ಳಿಯ ಹಸ್ತ, ಬೆಳ್ಳಿಯ ಸಿಂಹದ ಮುಖ, […]

    ದಾವಣಗೆರೆ :ಜಿಲ್ಲೆಯ ವಿವಿಧ ಕಡೆ ಕಳ್ಳತನ ಮಾಡಿದ್ದ ತಂದೆ – ಮಕ್ಕಳನ್ನು ಪೊಲೀಸರು ಬಂಧಿಸಿ, ರೂ 10.90 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

    ಯರಗುಟೆ ರಸ್ತೆ ಆರ್‌ಟಿಓ ಕಚೇರಿ ಬಳಿ ಎಂಜಿ ಬಿಲ್ಡಿಂಗ್ ಹತ್ತಿರದ ಶಿವುಕುಮಾರ (26) ವಿರೇಶ (68) ಮಂಜುನಾಥ  ಬಂಧಿತರು.

    seem1 dinamaana ads

    ಹರಿಹರ ತಾ, ದೊಗ್ಗಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜ 2 ರಂದು ಬೆಳ್ಳಿಯ ಕಾಶಿ, ಬೆಳ್ಳಿ ಕಿರೀಟ, ಬೆಳ್ಳಿಯ ಆಂಜನೇಯ ಮುಖ, ಒಂದು ಬೆಳ್ಳಿಯ ಹಸ್ತ, ಬೆಳ್ಳಿಯ ಸಿಂಹದ ಮುಖ, ಒಂದು ಬೆಳ್ಳಿಯ ಛತ್ರಿ ಕಳ್ಳತನವಾಗಿರುವ ಬಗ್ಗೆ ಅರ್ಚಕ ರಾಜಪ್ಪ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

    ಆರೋಪಿತರ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ್ ಪೊಲೀಸ್ , ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ, ಹರಿಹರ ವೃತ್ತ ನಿರೀಕ್ಷಕರು ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಯುವರಾಜ ಕಂಬಳಿ, ಮಂಜುಳಾ ಡಿ ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಹರಿಹರ ಬೈಪಾಸ್ ಹತ್ತಿರ ವಶಕ್ಕೆ ಪಡೆದಿದ್ದಾರೆ.

    03 ಕೆಜಿ ಬೆಳ್ಳಿಯ ಆಭರಣಗಳು ಹಾಗೂ ಆರೋಪಿತರುಗಳು ಈ ಹಿಂದೆ ಮಲೆಬೆನ್ನೂರು ಠಾಣಾ ವ್ಯಾಪ್ತಿಯ ಮಲೆಬೆನ್ನೂರು ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡಿದ್ದ ಕೆಎ 17 ಇಜಿ 2054 ನೇ ಬಜಾಜ್ ಪ್ಲಾಟಿನಾ ಬೈಕ್ ಹಾಗೂ ಮಲೆಬೆನ್ನೂರು ಪಟ್ಟಣದ ನೆಹರು ನಗರದ ಶ್ರೀ ರಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದ ಸುಮಾರು 20 ಗ್ರಾಂ ತೂಕದ ಬಂಗಾರದ 04 ತಾಳಿಗಳನ್ನು ಮತ್ತು ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಕೆಎ 17 ಇಎಸ್ 6892 ನೇ ಹಿರೋ ಡಿಲಕ್ಸ್ ಬೈಕ್ ಒಳಗೊಂಡಂತೆ ಒಟ್ಟು ಅಂದಾಜು 10,90,000/- ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
    ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    Read also : ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    ಆರೋಪಿತರ ಹಿನ್ನೆಲೆ : 2020 ರಲ್ಲಿ ಹಾವೇರಿ ಜಿಲ್ಲೆಯ ಹಲಗೇರಿ ಪೊಲೀಸ್ ಠಾಣೆಯಲ್ಲಿ ಕುರಿ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

    ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಯುವರಾಜ ಕಂಬಳಿ ಮಂಜುಳಾ ಡಿ ಪಿ.ಎಸ್.ಐ(ತನಿಖೆ) ಸಿಬ್ಬಂದಿಗಳಾದ- ತಿಪ್ಪೇಸ್ವಾಮಿ, ಕುಬೇರನಾಯ್ಕ್, ರಮೇಶ ಜಿ ಎನ್, ನೀಲಮೂರ್ತಿ, ಲಿಂಗಾರಾಜ ಎನ್, ರಿಜ್ವಾನ್ ನಾಸೂರ್, ಷಣ್ಮುಖ, ಪ್ರಸನ್ನಕಾಂತ, ಸತೀಶ ಟಿ ವಿ, ಕಡೆಮನಿ ನಾಗಪ್ಪ, ಅರ್ಜುನ್ ರಾಯಲ್, ಕರಿಯಪ್ಪ ಡಿ ಜಿ, ರವಿನಾಯ್ಕ್ ಎಲ್ ಕೆ, ಪವಿತ್ರ ಪಿ ಜಿ, ಸುಜಾತ ಉದಗಟ್ಟಿ, ಗಿರೀಶಗೌಡ, ಮಲ್ಲಿಕಾರ್ಜುನ, ಪ್ರವೀಣ್ ಪಾಟೀಲ್, ಸಿದ್ದಪ್ಪ ತಂಡವನ್ನು ಎಸ್ಪಿ ಉಮಾ ಪ್ರಶಾಂತ್, ಶ್ಲಾಘಿಸಿದ್ದಾರೆ.

    job news dinamaana ads
    Click here to Read More
    Previous Article
    ಭೋವಿ ಗುರುಪೀಠದಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ | ಶಾಸಕ ಎಂ.ಚಂದ್ರಪ್ಪ ಭಾಗೀ
    Next Article
    ಸಿದ್ದರಾಮ ಶಿವಯೋಗಿಗಳು ಕಲ್ಯಾಣಕ್ರಾಂತಿಯ ಇತಿಹಾಸದ ಅಗ್ರಜರು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment