Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಗುತ್ತಿಗೆದಾರರ ಸೊಸೈಟಿ ಅಧ್ಯಕ್ಷರಾಗಿ ಸಿ.ಬಿ.ತಮ್ಮೇಗೌಡ ಆಯ್ಕೆ

    1 week ago

    ಮಂಡ್ಯ ನಗರದ ಪಿಡಬ್ಲ್ಯೂಡಿ ಕಚೇರಿ ಬಳಿ ಇರುವ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿ.ಬಿ. ತಮ್ಮೆಗೌಡ ಹಾಗೂ ಉಪಾಧ್ಯಕ್ಷರಾಗಿ ಭವ್ಯಶ್ರೀ ಎಸ್ ಗಂಗಾಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಬಿ. ತಮ್ಮೇಗೌಡ,(ತಮ್ಮಣ್ಣ ಚಂದಗಾಲು ) ಮಾತನಾಡಿ, ಎಲ್ಲಾ ಗುತ್ತಿಗೆದಾರರ ಸದಸ್ಯರು ಮತ್ತು ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆರ್ಥಿಕ ಆಡಳಿತ ನಡೆಸುವ ಹಂಬಲ ನಮ್ಮಲ್ಲಿದೆ ಎಂದು ಹೇಳಿದರು. ಗುತ್ತಿಗೆದಾರರ ಸೊಸೈಟಿ […]

    The post ಮಂಡ್ಯ | ಗುತ್ತಿಗೆದಾರರ ಸೊಸೈಟಿ ಅಧ್ಯಕ್ಷರಾಗಿ ಸಿ.ಬಿ.ತಮ್ಮೇಗೌಡ ಆಯ್ಕೆ appeared first on nudikarnataka.



    ಮಂಡ್ಯ ನಗರದ ಪಿಡಬ್ಲ್ಯೂಡಿ ಕಚೇರಿ ಬಳಿ ಇರುವ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆವರಣದಲ್ಲಿ ಗುತ್ತಿಗೆದಾರರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿ.ಬಿ. ತಮ್ಮೆಗೌಡ ಹಾಗೂ ಉಪಾಧ್ಯಕ್ಷರಾಗಿ ಭವ್ಯಶ್ರೀ ಎಸ್ ಗಂಗಾಧರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಬಿ. ತಮ್ಮೇಗೌಡ,(ತಮ್ಮಣ್ಣ ಚಂದಗಾಲು ) ಮಾತನಾಡಿ, ಎಲ್ಲಾ ಗುತ್ತಿಗೆದಾರರ ಸದಸ್ಯರು ಮತ್ತು ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆರ್ಥಿಕ ಆಡಳಿತ ನಡೆಸುವ ಹಂಬಲ ನಮ್ಮಲ್ಲಿದೆ ಎಂದು ಹೇಳಿದರು.

    ಗುತ್ತಿಗೆದಾರರ ಸೊಸೈಟಿ ಅಭಿವೃದ್ಧಿ ಮತ್ತು ಗುತ್ತಿಗೆದಾರರಿಗೆ ಸಾಲ ಸೌಲಭ್ಯ ಹಾಗೂ ವಸೂಲಾತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಪಡುತ್ತೇವೆ ಎಲ್ಲರ ಸಹಕಾರದಿಂದ ಸೊಸೈಟಿಯನ್ನು ಮಾದರಿ ಸೊಸೈಟಿಯನ್ನಾಗಿ ರೂಪಿಸಲು ಮನವಿ ಮಾಡಿದರು.

    ಮಂಡ್ಯ ಜಿಲ್ಲಾ ಮಟ್ಟದಲ್ಲಿ ಗುತ್ತಿಗೆದಾರರ ಸಮಸ್ಯೆಗಳು ಸಾಕಷ್ಟು ಇವೆ ಹಾಗೂ ಸರ್ಕಾರದಿಂದ ಬರಬೇಕಾಗಿರುವ ಹಣವನ್ನು ಗುತ್ತಿಗೆದಾರರ ಸಂಘದ ಆಡಳಿತ ಮಂಡಳಿಗೆ ಮನವಿ ಮಾಡಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇವೆ ಎಂದರು.

    ಇದೇ ಸಂದರ್ಭದಲ್ಲಿ ಎಲ್ಲಾ ನಿರ್ದೇಶಕರನ್ನು ಮತ್ತು ಗುತ್ತಿಗೆದಾರರನ್ನು ಅಭಿನಂದಿಸಿದರು ಗೌರವಿಸಲಾಯಿತು. ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಅಭಿವಂದಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯತಿರಾಜ್ ಕಾರ್ಯದರ್ಶಿ ರವೀಂದ್ರ ಹಾಗೂ ಸೊಸೈಟಿಯ ನಿರ್ದೇಶಕರಾದ ಚಂದ್ರಶೇಖರ್. ಎಂ.ಎಸ್, ಅನಿಲ್ ರಾಜ್ ಹೆಚ್ ಸಿ , , ನವೀನ್ ಎಂ. ಹೆಚ್ , ಭೈರವ, ವೈ. ಡಿ ರಾಮು, ರಾಜುಭೈರೇಗೌಡ, ನಾಗರಾಜು.ಡಿ , ಸಿಂಧೂ, ಚಂದ್ರ.ಜಿ, ಪುಟ್ಟಲಿಂಗಗೌಡ, ನಾಗರಾಜು ಕೆ.ಸಿ ಸೇರಿದಂತೆ, ಹಿರಿಯ ಗುತ್ತಿಗೆದಾರ ಚೆನ್ನೇಗೌಡ ತೂಬಿನಕೆರೆ, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

    The post ಮಂಡ್ಯ | ಗುತ್ತಿಗೆದಾರರ ಸೊಸೈಟಿ ಅಧ್ಯಕ್ಷರಾಗಿ ಸಿ.ಬಿ.ತಮ್ಮೇಗೌಡ ಆಯ್ಕೆ appeared first on nudikarnataka.

    Click here to Read More
    Previous Article
    ಸಚಿವರ ಮುಂದೆಯೇ MLA ಮತ್ತು MLC ಮಧ್ಯೆ ಗಲಾಟೆ: ಕೈ ಕೈ ಮಿಲಾಯಿಸಿದ ನಾಯಕರು
    Next Article
    ಸುದೀರ್ಘ ಅವಧಿಗೆ ಸಿಎಂ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯ ಎಂದ ಸಿಎಂ ಸಿದ್ದರಾಮಯ್ಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment