Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಫೆಬ್ರವರಿಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ

    1 week ago

    ಮನುಜ ಮತ, ವಿಶ್ವಪಥ ಸಂದೇಶ ಸಾರಿದ ಕುವೆಂಪು, ಇವನಾರವ, ಇವನಾರವ ಎಂದೆಣಿಸದಿರಯ್ಯ ಎಂದ ಬಸವಣ್ಣ,ಕುಲ ಕುಲವೆಂದು ಹೊಡೆದಾಡದಿರಿ ಎಂದ ಭಕ್ತ ಕನಕದಾಸ,ಶಾಂತಿ, ಕರುಣೆ, ಪ್ರೀತಿ, ಮೈತ್ರಿ ಪ್ರತಿಪಾದಿಸಿದ ಗೌತಮಬುದ್ಧ ಈ ಮಹಾತ್ಮರ ಉದ್ದೇಶಗಳಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಫೆಬ್ರವರಿ ೩ ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ-೨೦೨೬ ನ್ನು ಆಯೋಜಿಸಲಾಗಿದೆ ಎಂದು ಬುದ್ಧ ಭಾರತ ಪೌಡೇಷನ್ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಸರ್ವಧರ್ಮದ ಮುಖಂಡರಾದ ಆದಿಚುಂಚನಗಿರಿ […]

    The post ಮಂಡ್ಯ | ಫೆಬ್ರವರಿಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ appeared first on nudikarnataka.



    ಮನುಜ ಮತ, ವಿಶ್ವಪಥ ಸಂದೇಶ ಸಾರಿದ ಕುವೆಂಪು, ಇವನಾರವ, ಇವನಾರವ ಎಂದೆಣಿಸದಿರಯ್ಯ ಎಂದ ಬಸವಣ್ಣ,ಕುಲ ಕುಲವೆಂದು ಹೊಡೆದಾಡದಿರಿ ಎಂದ ಭಕ್ತ ಕನಕದಾಸ,ಶಾಂತಿ, ಕರುಣೆ, ಪ್ರೀತಿ, ಮೈತ್ರಿ ಪ್ರತಿಪಾದಿಸಿದ ಗೌತಮಬುದ್ಧ ಈ ಮಹಾತ್ಮರ ಉದ್ದೇಶಗಳಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಫೆಬ್ರವರಿ ೩ ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ-೨೦೨೬ ನ್ನು ಆಯೋಜಿಸಲಾಗಿದೆ ಎಂದು ಬುದ್ಧ ಭಾರತ ಪೌಡೇಷನ್ ಅಧ್ಯಕ್ಷ ಜೆ.ರಾಮಯ್ಯ ತಿಳಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಸರ್ವಧರ್ಮದ ಮುಖಂಡರಾದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.

    ಗೌತಮ ಬುದ್ಧರ ಅಷ್ಟಾಂಗ ಮಾರ್ಗಗಳ ಸಂದೇಶ ಸಾರಲು ಪ್ರಗತಿಪರ ಚಿಂತಕರು, ಸಂಘಟನೆಗಳು, ಮಾನವಪರ ಜೀವಪರ ವ್ಯಕ್ತಿಗಳು ಎಲ್ಲರೂ ಸೇರಿ ನೇರಲಕೆರೆಯಲ್ಲಿ “ಸರ್ವಧರ್ಮ ಮಾನವ ಸಮ್ಮೇಳನ-೨೦೨೬” ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

    ಈ ಕಾರ್ಯಕ್ರಮದಲ್ಲಿ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿಗಳು, ಜ್ಞಾನ ಪ್ರಕಾಶ್ ಸ್ವಾಮೀಜಿ ಉರಿಲಿಂಗಿಪೆದ್ದಿಮಠ, ಬೌದ್ಧ ಧಮ್ಮ ಅನುಯಾಯಿ ಆನಂದಬಂತೆ, ಮನೋರಬ್ಬಿತಬಂತೆ, ಬೋಧಿದತ್ತಬಂತೆ, ಕೈಸ್ತ ಧರ್ಮದ ಪಾದ್ರಿಗಳು, ಮುಸ್ಲಿಂ ಧರ್ಮದ ಮೌಲ್ವಿಗಳು, ಸಿಖ್ ಧರ್ಮದ ಧಾರ್ಮಿಕ ಮುಖಂಡರು, ಜೈನ ಧರ್ಮದ ಜೈನಮುನಿಗಳು ಹಾಗೂ ಇತರ ಧರ್ಮದ ಧಾರ್ಮಿಕ ಮುಖಂಡರುಗಳು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ವಿವರಿಸಿದರು.

    ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕರಾದ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಶಾಸಕ ಪಿ.ರವಿಕುಮಾರ್ ಗಣಿಗ ರವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದೇವೆ ಎಂದರು.

    ಈ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳಿಂದ ಲೋಕಶಾಂತಿ ಮತ್ತು ಪ್ರಗತಿಗಾಗಿ ಮೆತ್ತಭಾವ ಪ್ರಾರ್ಥನೆ, ಬೌದ್ಧ ಸಮ್ಮೇಳನ-೨೦೨೬ ಉದ್ಘಾಟನೆ, ವಿಶ್ವಮೈತ್ರಿ ಬೌದ್ಧ ಧಮ್ಮ ಧ್ಯಾನ ಮತ್ತು ಇತರ ಕೇಂದ್ರಗಳ ಉದ್ಘಾಟನೆ, ವೃದ್ದಾಶ್ರಮ, ಲೈಬ್ರರಿ,ರತನ್ ಟಾಟಾ ಸ್ಮರಣಾರ್ಥ ಎ.ಜೆ. ಉದ್ಯೋಗಾಧಾರಿತ ತರಬೇತಿ ಕೇಂದ್ರ ಉದ್ಘಾಟನೆ, ೫೦ ಜನ ಬೌದ್ಧ ಧಮ್ಮಚಾರಿಗಳಿಗೆ ಅಭಿನಂದಿಸಲಾಗುವುದು ಎಂದು ತಿಳಿಸಿದರು.

    ಗೋಷ್ಠಿಯಲ್ಲಿ ಗಂಗರಾಜು ಹನಕೆರೆ, ನಿರಂಜನ್ ಬೌದ್ಧ, ಮಹೇಂದ್ರ,ಎಂ.ವಿ.ಕೃಷ್ಣ ಮೋಹನ್ ಪ್ರಬುದ್ಧಿ ಹಾಗೂ ಅನ್ನದಾನಿ ಮುಂತಾದವರಿದ್ದರು.

    The post ಮಂಡ್ಯ | ಫೆಬ್ರವರಿಯಲ್ಲಿ ಸರ್ವಧರ್ಮ ಮಾನವ ಸಮ್ಮೇಳನ appeared first on nudikarnataka.

    Click here to Read More
    Previous Article
    ನೆಮ್ಮದಿಯಿಂದ ಜೀವಿಸಲು ಪ್ರತಿಯೊಬ್ಬರಿಗೂ ಸಾಂವಿಧಾನಿಕ ಹಕ್ಕುಗಳಿವೆ : ಆನಂದ್
    Next Article
    ರಾಷ್ಟ್ರೀಯ ಏಕತೆ, ಸಾಮರಸ್ಯಕ್ಕೆ ಮೌಲ್ಯಯುತ ಶಿಕ್ಷಣ ಅಗತ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment