Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ : ಅಭಿಮಾನಿಗಳಿಂದ ಸಂಭ್ರಮ

    1 week ago

    ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚಿನ ಅವಧಿಯ ಆಡಳಿತ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಕೋರಿ ಅಭಿಮಾನಿಗಳು ಸಂಭ್ರಮಿಸಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಅಹಿಂದ ನಾಯಕ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೊಡಿಮಾರನಹಳ್ಳಿ ದೇವರಾಜು ಅವರ ನೇತೃತ್ವದಲ್ಲಿ ಸೇರಿದ್ದ ನೂರಾರು ಸಿದ್ದರಾಮಯ್ಯ ಅವರ ಅಭಿಮಾನಿಗಳು ಕೆ.ಆರ್. ಪೇಟೆ ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಜಮಾಯಿಸಿ, ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಿಸಿ ಸಿದ್ದರಾಮಯ್ಯ ಅವರ ಪರವಾಗಿ ಜಯ ಘೋಷಗಳನ್ನು ಕೂಗಿದರು. […]

    The post ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ : ಅಭಿಮಾನಿಗಳಿಂದ ಸಂಭ್ರಮ appeared first on nudikarnataka.



    ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚಿನ ಅವಧಿಯ ಆಡಳಿತ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭ ಕೋರಿ ಅಭಿಮಾನಿಗಳು ಸಂಭ್ರಮಿಸಿ ಕೃಷ್ಣರಾಜಪೇಟೆ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.

    ಅಹಿಂದ ನಾಯಕ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೊಡಿಮಾರನಹಳ್ಳಿ ದೇವರಾಜು ಅವರ ನೇತೃತ್ವದಲ್ಲಿ ಸೇರಿದ್ದ ನೂರಾರು ಸಿದ್ದರಾಮಯ್ಯ ಅವರ ಅಭಿಮಾನಿಗಳು ಕೆ.ಆರ್. ಪೇಟೆ ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಜಮಾಯಿಸಿ, ಪಟಾಕಿಗಳನ್ನು ಸಿಡಿಸಿ, ಸಿಹಿ ವಿತರಿಸಿ ಸಿದ್ದರಾಮಯ್ಯ ಅವರ ಪರವಾಗಿ ಜಯ ಘೋಷಗಳನ್ನು ಕೂಗಿದರು.

    ಡಿ ದೇವರಾಜು ಅವರನ್ನು ಹೊರತುಪಡಿಸಿದರೆ ಏಳು ವರ್ಷ 240 ದಿನಗಳ ಕಾಲ ಅತಿ ಹೆಚ್ಚಿನ ಅವಧಿ ಅವಧಿಗೆ ಮುಖ್ಯಮಂತ್ರಿಗಳಾಗಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರು ಬಡವರು ಪೋಷಿತರು ಹಾಗೂ ತುಳಿತಕ್ಕೊಳಗಾದ ಜನರ ಪರವಾಗಿ ದಕ್ಷ ಪ್ರಾಮಾಣಿಕ ಆಡಳಿತ ನೀಡಿದ್ದಾರೆ ಇಡೀ ದೇಶವೇ ಮೆಚ್ಚುವಂತೆ ಜನಪರವಾದ ಅಭಿವೃದ್ಧಿಯಿಂದ ಕೂಡಿರುವ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಉಳಿದ ಅವಧಿಗೂ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣಕರ್ತರಾಗಬೇಕು ಸಿದ್ದರಾಮಯ್ಯ ಅವರಿಗೆ ನಾಡ ದೇವತೆ ತಾಯಿ ಚಾಮುಂಡೇಶ್ವರಿಯು ಒಳ್ಳೆಯ ಆರೋಗ್ಯ ಹಾಗೂ ಆಡಳಿತ ನಡೆಸುವ ಶಕ್ತಿಯನ್ನು ನೀಡಲಿ ಎಂದು ದೇವರಾಜು ಪ್ರಾರ್ಥಿಸಿದರು.

    ವಿಜಯೋತ್ಸವದಲ್ಲಿ ದಲಿತ ನಾಯಕ ಡಿ.ಪ್ರೇಮ ಕುಮಾರ್, ಮುಸ್ಲಿಂ ಸಮಾಜದ ಮುಖಂಡ ನವೀದ್ ಅಹಮದ್, ಜಿ.ಪಂ. ಮಾಜಿ ಸದಸ್ಯ ಹೆಚ್.ಡಿ.ಭೋಜೇಗೌಡ, ಅಹಿಂದ ವರ್ಗಗಳ ನಾಯಕ ಕೆ.ಆರ್.ನೀಲಕಂಠ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಕೆ. ಪುರುಷೋತ್ತಮ್, ಮಹಿಳಾ ಕಾಂಗ್ರೆಸ್ ನಾಯಕರದ ಆದಿಹಳ್ಳಿ ಮೀನಾಕ್ಷಿ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಿ, ತಾ.ಪಂ.ಮಾಜಿ ಸದಸ್ಯೆ ವಿನುತಾ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಕಿಹೆಬ್ಬಾಳು ದಿವಾಕರ ಸೇರಿದಂತೆ ನೂರಾರು ಅಹಿಂದ ವರ್ಗಗಳ ನಾಯಕರು ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    The post ಮುಖ್ಯಮಂತ್ರಿಯಾಗಿ ದಾಖಲೆ ಬರೆದ ಸಿದ್ದರಾಮಯ್ಯ : ಅಭಿಮಾನಿಗಳಿಂದ ಸಂಭ್ರಮ appeared first on nudikarnataka.

    Click here to Read More
    Previous Article
    ನಿಟ್ಟೆ: ಪ್ರಾಯೋಗಿಕ ಕಂಪ್ಯೂಟರ್ ನೆಟ್‌ವರ್ಕಿಂಗ್ ಎಫ್‌ಡಿಪಿ
    Next Article
    ಸಿದ್ದರಾಮಯ್ಯ ಇಲ್ಲದಿದ್ರೆ ಕಾಂಗ್ರೆಸ್ ಗೆ ಅವಕಾಶ ಕಡಿಮೆ- ಮಾಜಿ ಸಚಿವ ಕೆ.ಎನ್ ರಾಜಣ್ಣ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment