ವರದಿ : ಪ್ರಭು ವಿ ಎಸ್ ಸರಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆಂದು ಶಾಸಕ ಕೆ.ಎಂ.ಉದಯ ಅಭಿಪ್ರಾಯಪಟ್ಟರು. ಮದ್ದೂರು ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ 2026 ನೇ ಸಾಲಿನ ದಿನದರ್ಶಿಕೆ ಹಾಗೂ ದಿನಚರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಾವು ಶಾಸಕರಾದ ಬಳಿಕ ಕ್ಷೇತ್ರಕ್ಕೆ 1800 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ವಿವಿಧ ಕಾಮಗಾರಿಗಳಿಗೆ […]
The post ಸರಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಅಭಿವೃದ್ಧಿ : ಶಾಸಕ ಉದಯ್ appeared first on nudikarnataka.
ವರದಿ : ಪ್ರಭು ವಿ ಎಸ್
ಸರಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆಂದು ಶಾಸಕ ಕೆ.ಎಂ.ಉದಯ ಅಭಿಪ್ರಾಯಪಟ್ಟರು.
ಮದ್ದೂರು ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ 2026 ನೇ ಸಾಲಿನ ದಿನದರ್ಶಿಕೆ ಹಾಗೂ ದಿನಚರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಾವು ಶಾಸಕರಾದ ಬಳಿಕ ಕ್ಷೇತ್ರಕ್ಕೆ 1800 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ವಿವಿಧ ಕಾಮಗಾರಿಗಳಿಗೆ ಮಂಜೂರು ಮಾಡಿಸಿ ಸಮರ್ಪಕ ಬಳಕೆಗೆ ಮತ್ತು ಕ್ಷೇತ್ರ ಅಭಿವೃದ್ಧಿ ಹೊಂದಲು ಸರಕಾರಿ ಅಧಿಕಾರಿಗಳ ಪಾತ್ರ ಅತಿ ಮಹತ್ವದಾಗಿದ್ದು ಸರಕಾರದ ಕೆಲಸವನ್ನು ತಮ್ಮೊಂದಿಗೆ ಇಲಾಖಾ ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಮಾದರಿ ಕ್ಷೇತ್ರವನ್ನಾಗಿಸಬಹುದೆಂದು ಹೇಳಿದರು.

ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆಗಳನ್ನು ಶೀಘ್ರದಲ್ಲೇ ನಿವಾರಿಸುವ ಜತೆಗೆ ಸರಕಾರಿ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಿದಾಗ ತಮ್ಮ ಮೇಲಿರುವ ಒತ್ತಡವು ಕಡಿಮೆಯಾಗುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಹಕಾರಿಯಾಗುತ್ತದೆ ಎಂದರು.
ಜನವರಿ ಮಾಸಾಂತ್ಯದಲ್ಲಿ ಹಳೆಯ ತಾ.ಪಂ. ಕಚೇರಿ ಬಳಿ ನೂತನ ಕಚೇರಿ ನಿರ್ಮಾಣ ಸಂಬಂಧ 4 ಕೋಟಿ ರೂ.
ವೆಚ್ಚದ ಕಾಮಗಾರಿಗೆ ಮುಂದಾಗಿದ್ದು ಜತೆಗೆ ಸರಕಾರಿ ನೌಕರರ ಭವನದ ಮೊದಲಂತಸ್ತಿನ ಕಟ್ಟಡ ನಿರ್ಮಾಣ
ಯೋಜನೆಗೂ ಗುದ್ದಲಿ ಪೂಜೆ ನೆರವೇರಿಸುವುದಾಗಿ ಹೇಳಿದರು.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಸರಕಾರಿ ನೌಕರರ ವೈದ್ಯಕೀಯ ವೆಚ್ಚ ಪರಿಹಾರ ಮೊತ್ತ
ಮಂಜೂರಾತಿ ಸಂಬಂಧ ಶೀಘ್ರ ಕ್ರಮ ವಹಿಸುವಂತೆ ಸಂಘದ ಪದಾಧಿಕಾರಿಗಳು ಶಾಸಕ ಕೆ.ಎಂ.ಉದಯ ಅವರಿಗೆ
ಲಿಖಿತ ಮನವಿ ಅರ್ಪಿಸಿದರು.
ಈ ವೇಳೆ ತಾ.ಪಂ. ಇ.ಓ ರಾಮಲಿಂಗಯ್ಯ, ಬಿ.ಇ.ಓ ಎಸ್.ಬಿ.ಧನಂಜಯ, ಸಿ.ಡಿ.ಪಿ.ಓ ಅರುಣ್ಕುಮಾರ್, ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಅಣ್ಣೂರು ಸತೀಶ್ ಪದಾಧಿಕಾರಿಗಳಾದ ಕೆ ಟಿ ಮಂಜುನಾಥ್, ಶಿವನಂಜೇಗೌಡ, ಮೋಹನ್, ವಾಸು, ಲೋಕೇಶ್ ಇತರರಿದ್ದರು.
The post ಸರಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಅಭಿವೃದ್ಧಿ : ಶಾಸಕ ಉದಯ್ appeared first on nudikarnataka.
Previous Article
ಶೀರೂರು ಪರ್ಯಾಯದ ಆಮಂತ್ರಣ ಪತ್ರಿಕೆ ಬಿಡುಗಡೆ; ಮಾಧ್ಯಮ ಕೇಂದ್ರ ಉದ್ಘಾಟನೆ
Next Article
ಅರಣ್ಯ, ವನ್ಯಜೀವಿ ರಕ್ಷಣೆಗೆ ಯೋಜನೆ ರೂಪಿಸಿ: ಲಕ್ಷ್ಮಣ್ ಸಲಹೆ