Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯನಗರಕ್ಕೆ ಆಧುನೀಕತೆಯ ಹೈಟೆಕ್ ಸ್ಪರ್ಶ : ಶಾಸಕ ರವಿಕುಮಾರ್

    1 week ago

    ಮಂಡ್ಯನಗರದ ಸಂಜಯ ಸರ್ಕಲ್ ಸೇರಿದಂತೆ ಎಲ್ಲಾ ವೃತ್ತಗಳನ್ನು ಆಧುನೀಕತೆಯೊಂದಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯದಲ್ಲಿ ತಲೆ ಎತ್ತಲಿದೆ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಕುರಿತಂತೆ ಪ್ರತಿಮೆ ಕೆತ್ತನೆಯ ಶಿಲ್ಪಿ ಯೋಗಿ ಅರುಣ್ ರಾಜ್ ಅವರೊಂದಿಗೆ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕೆಂಬುದು ಒಕ್ಕಲಿಗರ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸುಮಾರು 26 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಸಂಜಯ ಸರ್ಕಲ್ ನಲ್ಲಿ ನಿರ್ಮಾಣ […]

    The post ಮಂಡ್ಯನಗರಕ್ಕೆ ಆಧುನೀಕತೆಯ ಹೈಟೆಕ್ ಸ್ಪರ್ಶ : ಶಾಸಕ ರವಿಕುಮಾರ್ appeared first on nudikarnataka.



    ಮಂಡ್ಯನಗರದ ಸಂಜಯ ಸರ್ಕಲ್ ಸೇರಿದಂತೆ ಎಲ್ಲಾ ವೃತ್ತಗಳನ್ನು ಆಧುನೀಕತೆಯೊಂದಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು.

    ಮಂಡ್ಯದಲ್ಲಿ ತಲೆ ಎತ್ತಲಿದೆ ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ಕುರಿತಂತೆ ಪ್ರತಿಮೆ ಕೆತ್ತನೆಯ ಶಿಲ್ಪಿ ಯೋಗಿ ಅರುಣ್ ರಾಜ್ ಅವರೊಂದಿಗೆ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಮಂಡ್ಯದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಬೇಕೆಂಬುದು ಒಕ್ಕಲಿಗರ ಹಲವು ವರ್ಷಗಳ ಬೇಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಸುಮಾರು 26 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಸಂಜಯ ಸರ್ಕಲ್ ನಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

    2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೆಂಪೇಗೌಡರ ಬೃಹತ್ ಪ್ರತಿಮೆಯಿಂದ ಮಂಡ್ಯಕ್ಕೆ ಹೊಸ ರೂಪ ಬರಲಿದೆ. ಚುನಾವಣೆ ಸಂದರ್ಭದಲ್ಲಿ ಹೊಸ ಮಂಡ್ಯ ಕಟ್ಟಿಕೊಡುವ ಮಾತು ಕೊಟ್ಟಿದೆ ಅದೇ ರೀತಿ ಹೊಸ ಸ್ಪರ್ಶ ಕೊಡ್ತಿದ್ದೇನೆ. ಮಂಡ್ಯ ನಗರವನ್ನು ಗುಂಡಿ ಮುಕ್ತ ನಗರ ಮಾಡಿದ್ದೇನೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾಡುವ ಅವಕಾಶ ಸಿಕ್ಕಿದೆ ಎಂದರು.

    ಅಚ್ಚುಕಟ್ಟಾಗಿ ಈ ಜವಾಬ್ದಾರಿಯುತವಾಗಿ ನಾನು ಕೆಲಸ ಮಾಡ್ತೇನೆ. ಮಹಾನ್ ನಾಯಕರಿಗೆ ಇತಿಹಾಸ ಇದೆ ಆ ಇತಿಹಾಸ ತಿಳಿದು ನಾಯಕರ ಪ್ರತಿಮೆ ಕೆತ್ತನೆ ಮಾಡ್ತೇನೆ ಎಂದ ಶಿಲ್ಪಿ ಯೋಗಿ ಅರುಣ್ ರಾಜ್ ತಿಳಿಸಿದರು.

    ಇದೇ ವೇಳೆ ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಮಂಜು, ಮಾಜಿ ಸದಸ್ಯ ಕೆ.ಸಿ.ರವೀಂದ್ರ, ಕೃಷ್ಣ, ನೇಗಿಲಯೋಗಿ ರಮೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    The post ಮಂಡ್ಯನಗರಕ್ಕೆ ಆಧುನೀಕತೆಯ ಹೈಟೆಕ್ ಸ್ಪರ್ಶ : ಶಾಸಕ ರವಿಕುಮಾರ್ appeared first on nudikarnataka.

    Click here to Read More
    Previous Article
    ಮಂಡ್ಯ | ಹೊಳಲು ಡೇರಿ ಅಧ್ಯಕ್ಷರಾಗಿ ಸಾವಿತ್ರಮ್ಮ ಅವಿರೋಧ ಆಯ್ಕೆ
    Next Article
    ಹೈಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ:  7 ಮಂದಿ ವಿರುದ್ಧ ‘FIR’ ದಾಖಲು

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment