ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ ಮೂರು ಗ್ರಾ.ಪಂಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ಕಾರ್ಯ ಕ್ರಮವಬದ್ದವಾಗಿಲ್ಲ ಎಂದು ರೈತ ಹೋರಾಟಗಾರ್ತಿ ಸುನಂದ ಜಯರಾಂ ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರು ಶಾಸಕರು ಮದ್ದೂರು ಪುರಸಭೆ ವ್ಯಾಪ್ತಿಯ ಚಾಮನಹಳ್ಳಿ, ಸೋಮನಹಳ್ಳಿ, ಗೊರನಹಳ್ಳಿ, ಗೆಜ್ಜಲಗೆರೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯವಾಗಿ ನಗರಸಭೆಗೆ ಸೇರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು. ಈ ಸಂಬಂಧ ಗ್ರಾ.ಪಂಚಾಯಿತಿಗಳ ಸಾಮಾನ್ಯ ಸಭೆಯಲ್ಲಿಯೂ ವಿಷಯದ ಕಾರ್ಯಸೂಚಿ ತರಲಾಗಿಲ್ಲ. ಗ್ರಾಮಸ್ಥರು, ಗ್ರಾ.ಪಂ […]
The post ಮದ್ದೂರು ನಗರಸಭೆಗೆ ಗ್ರಾ.ಪಂ.ಗಳ ಸೇರ್ಪಡೆ ಕ್ರಮ ಬದ್ದವಾಗಿಲ್ಲ ; ಸುನಂದ ಜಯರಾಂ appeared first on nudikarnataka.
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಸೇರಿದಂತೆ ಮೂರು ಗ್ರಾ.ಪಂಗಳನ್ನು ಮದ್ದೂರು ನಗರಸಭೆಗೆ ಸೇರಿಸುವ ಕಾರ್ಯ ಕ್ರಮವಬದ್ದವಾಗಿಲ್ಲ ಎಂದು ರೈತ ಹೋರಾಟಗಾರ್ತಿ ಸುನಂದ ಜಯರಾಂ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರು ಶಾಸಕರು ಮದ್ದೂರು ಪುರಸಭೆ ವ್ಯಾಪ್ತಿಯ ಚಾಮನಹಳ್ಳಿ, ಸೋಮನಹಳ್ಳಿ, ಗೊರನಹಳ್ಳಿ, ಗೆಜ್ಜಲಗೆರೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸದೇ ಏಕಪಕ್ಷೀಯವಾಗಿ ನಗರಸಭೆಗೆ ಸೇರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಈ ಸಂಬಂಧ ಗ್ರಾ.ಪಂಚಾಯಿತಿಗಳ ಸಾಮಾನ್ಯ ಸಭೆಯಲ್ಲಿಯೂ ವಿಷಯದ ಕಾರ್ಯಸೂಚಿ ತರಲಾಗಿಲ್ಲ. ಗ್ರಾಮಸ್ಥರು, ಗ್ರಾ.ಪಂ ಸದಸ್ಯರ ವಿರೋಧದ ನಡುವೆಯೂ ಅಬ್ದುಲ್ ನಜೀರ್ ಸಾಬ್, ಗಾಂಧೀಜಿ ಅವರುಗಳ ಕನಸಿನ ಪಂಚಾಯತ್ ರಾಜ್ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಗ್ರಾ.ಪಂ ಸದಸ್ಯರು ಹಾಗೂ ಗ್ರಾಮಸ್ಥರ ಹಕ್ಕುಚ್ಯುತಿ ಮಾಡಿ, ನಾಗರೀಕತೆಯ ಕಾರಣ ಹೇಳಿ ತಾಲೂಕಿನ ಹಸಿರು ವಲಯವನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸದರಿ ಗ್ರಾ.ಪಂ.ಗಳನ್ನು ನಗರಸಭೆಗೆ ಸೇರಿಸದಂತೆ ತಾಲೂಕು ಮಟ್ಟದಲ್ಲಿ ಹೋರಾಟ ಮಾಡಲಾಗಿದೆ. ಅಂತೆಯೇ ಹೈಕೋರ್ಟ್ನಲ್ಲೂ ಪಿಐಎಲ್ ಸಲ್ಲಿಸಲಾಗಿದೆ. ೧೮ ದಿನಗಳಿಂದ ಗೆಜ್ಜಲಗೆರೆ ಗ್ರಾ.ಪಂ ಬಳಿ ಅನಿರ್ಧಿಷ್ಟಾವಧಿ ಧರಣಿ ಮೂಲಕ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನು ಭೇಟಿ ಮಾಡಿ ನಗರಸಭೆಯಿಂದ ಗ್ರಾ.ಪಂ.ಗಳನ್ನು ಕೈಬಿಡುವುದಾಗಿ ಹೇಳಿದ ಶಾಸಕರು ಮಾತಿಗೆ ತಪ್ಪಿದ್ದಾರೆ. ನಗರಸಭೆಗೆ ಗ್ರಾ.ಪಂಗಳನ್ನು ಒಪ್ಪಿಗೆಯಿಲ್ಲದೇ ಸೇರಿಸುವ ಶಾಸಕರ ನಿರ್ಧಾರ ಖಂಡನಾರ್ಹವಾಗಿದ್ದು, ಆದ್ದರಿಂದ ಚಳುವಳಿ ಅನಿವಾರ್ಯವಾಗಿದೆ. ಗ್ರಾಮೀಣ ಭಾರತ ನಶಿಸಿ, ಅಭಿವೃದ್ಧಿ ಹೆಸರಿನಲ್ಲಿ ಹಳ್ಳಿಗಳನ್ನು ಹಾಳು ಮಾಡುವ ನಗರೀಕರಣದ ಹೆಸರಲ್ಲಿ ಹಳ್ಳಿಗಳ ಜನರಿಗೆ ಹಳ್ಳಿಗಳ ಜನರಿಗೆ ದ್ರೋಹ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗೆಜ್ಜಲಗೆರೆ ಗ್ರಾ.ಪಂ ಅಧ್ಯಕ್ಷೆ ಬಿ.ಎಸ್.ರಾಧೆ, ಎಪಿಎಂಸಿ ಮಾಜಿ ಅಧ್ಯಕ್ಷ ಮಹೇಂದ್ರ, ತಾ.ಪಂ ಮಾಜಿ ಅಧ್ಯಕ್ಷ ಇ.ಪಿ.ಯೋಗೇಶ್, ಜಿ.ಹೆಚ್.ವೀರಪ್ಪ, ಚಂದ್ರಶೇಖರ್, ಲಿಂಗಪ್ಪ ಹಾಗೂ ಯಜಮಾನ್ ಶಂಕರಪ್ಪ ಇದ್ದರು.
The post ಮದ್ದೂರು ನಗರಸಭೆಗೆ ಗ್ರಾ.ಪಂ.ಗಳ ಸೇರ್ಪಡೆ ಕ್ರಮ ಬದ್ದವಾಗಿಲ್ಲ ; ಸುನಂದ ಜಯರಾಂ appeared first on nudikarnataka.
Previous Article
ಹೈಕೋರ್ಟ್ ನಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ: 7 ಮಂದಿ ವಿರುದ್ಧ ‘FIR’ ದಾಖಲು
Next Article
ವಾಹನ ದಟ್ಟಣೆ ನಿಯಂತ್ರಿಸಲು ಹೊಸ ಮಾರ್ಗ ಹುಡುಕಿ: ಕೆ.ವಿ. ಮಲ್ಲೇಶ್ ಮನವಿ