Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಪಾಂಡವಪುರ | ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಇಂಗ್ಲಿಷ್ ನಿಘಂಟು ವಿತರಣೆ

    1 week ago

    ಸಾಹಿತ್ಯ, ಕಲೆ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಸಮಾಜ ಸೇವಕ ದಿ.ಡಾ.ಕೆ.ವೈ‌.ಶ್ರೀನಿವಾಸ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ 75 ಶಾಲೆಗಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದರು. ಅಂತೆಯೇ ಅವರ ಪುತ್ರ ದಂತ ವೈದ್ಯ ಡಾ.ಕೆ.ಎಸ್.ಅಭಿನಯ್ ಅವರು ಮಕ್ಕಳಿಗೆ ಇಂಗ್ಲಿಷ್ ನಿಘಂಟು ಹಾಗೂ ನೋಟ್ ಬುಕ್, ಲೇಖನ ಸಾಮಾಗ್ರಿಗಳನ್ನು ನೀಡುವ ಮೂಲಕ ತಂದೆಯ ಆಸೆ ಈಡೇರಿಸಲು ಮುಂದಾಗಿದ್ದಾರೆ ಎಂದು ಪಾಂಡವಪುರ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್‌ ತಿಳಿಸಿದರು. ಪಾಂಡವಪುರ ತಾಲೂಕಿನ […]

    The post ಪಾಂಡವಪುರ | ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಇಂಗ್ಲಿಷ್ ನಿಘಂಟು ವಿತರಣೆ appeared first on nudikarnataka.



    ಸಾಹಿತ್ಯ, ಕಲೆ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದ ಸಮಾಜ ಸೇವಕ ದಿ.ಡಾ.ಕೆ.ವೈ‌.ಶ್ರೀನಿವಾಸ್ ಅವರು ತಮ್ಮ 75ನೇ ಹುಟ್ಟುಹಬ್ಬದ ಪ್ರಯುಕ್ತ 75 ಶಾಲೆಗಳಿಗೆ ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ್ದರು. ಅಂತೆಯೇ ಅವರ ಪುತ್ರ ದಂತ ವೈದ್ಯ ಡಾ.ಕೆ.ಎಸ್.ಅಭಿನಯ್ ಅವರು ಮಕ್ಕಳಿಗೆ ಇಂಗ್ಲಿಷ್ ನಿಘಂಟು ಹಾಗೂ ನೋಟ್ ಬುಕ್, ಲೇಖನ ಸಾಮಾಗ್ರಿಗಳನ್ನು ನೀಡುವ ಮೂಲಕ ತಂದೆಯ ಆಸೆ ಈಡೇರಿಸಲು ಮುಂದಾಗಿದ್ದಾರೆ ಎಂದು ಪಾಂಡವಪುರ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್‌ ತಿಳಿಸಿದರು.

    ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳಿಗೆ ಇಂಗ್ಲಿಷ್ ನಿಘಂಟು ವಿತರಣೆ ಮಾಡಿ ಅವರು ಮಾತನಾಡಿದರು.

    ಈ ಹಿಂದೆ ಡಾ.ಕೆ.ವೈ.ಶ್ರೀನಿವಾಸ್ ಅವರು ತಾಲೂಕಿನ ಡಾಮಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆಗೆ ಚಾಲನೆ ನೀಡಿದ್ದರು. ಆ ವೇಳೆ ವೈದ್ಯನಾಗಿರುವ ನನಗೆ 75 ವರ್ಷ ತುಂಬಿದೆ. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪರಿಪಾಠ ನನಗೆ ಇಲ್ಲ. ಹೀಗಾಗಿ ತಾಲೂಕಿನ 75 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲು ಬಯಸಿದ್ದೇನೆ ಎಂದು ತಿಳಿಸಿದರು. ಆದರೆ ಅವರು ಇತ್ತೀಚೆಗೆ ನಿಧನರಾದರು. ಆದ್ದರಿಂದ ತಂದೆ ಆಸೆ ಈಡೇರಿಸಲು ಅವರ ಪುತ್ರ ಡಾ.ಕೆ.ಎಸ್‌.ಅಭಿನಯ್ ಅವರು ಈ ವರ್ಷ 75 ಸರ್ಕಾರಿ ಶಾಲೆಗಳಿಗೆ ನೀಡಲು ಮುಂದಾಗಿದ್ದಾರೆ. ತಂದೆಯ ಹಾದಿಯಲ್ಲಿಯೇ ಮುನ್ನಡೆದಿರುವುದು ಶ್ಲಾಘನೀಯ ಎಂದರು.

    ಇಂಗಲಗುಪ್ಪೆ ಶಾಲೆಯ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರಬೇಕು. ಏಕೆಂದರೆ ಈ ಗ್ರಾಮ ಮೂವರು ನ್ಯಾಯಾಧೀಶರನ್ನು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಜತೆಗೆ ಈ ಶಾಲೆ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಸ್ಕ್ರತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂಬುದು ಗೊತ್ತಿದೆ. ಈಗಾಗಲೇ ಮಕ್ಕಳು ಪೌರಾಣಿಕ ನಾಟಕ ಅಭಿನಯಿಸುವ ಮೂಲಕ ಬುದ್ದಿವಂತರಿದ್ದೇವೆ ಎಂಬುದನ್ನು ತೋರ್ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸ ನಡೆಸುವ ಮೂಲಕ ಕೀರ್ತಿ ತರಬೇಕು ಎಂದರು.

    ಕಾರ್ಯಕ್ರಮದಲ್ಲಿ ಶಾಲೆ ಮುಖ್ಯ ಶಿಕ್ಷಕರು ಪಾರ್ವತಮ್ಮ, ಸಹ ಶಿಕ್ಷಕರಾದ ಚಂದ್ರಶೇಖರ, ಲಕ್ಷ್ಮಿ, ಎಂ.ಎಚ್.ನಂದೀಶ್ ಇತರರು ಹಾಜರಿದ್ದರು.

    The post ಪಾಂಡವಪುರ | ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಇಂಗ್ಲಿಷ್ ನಿಘಂಟು ವಿತರಣೆ appeared first on nudikarnataka.

    Click here to Read More
    Previous Article
    ಪ್ರತಾಪ್‌ ಸಿಂಹ ಡೋಂಗಿ ಹಿಂದುತ್ವವಾದಿ, ಪಕ್ಷಕ್ಕೆ ಕೆಟ್ಟ ಹೆಸರು ತಂದ ವ್ಯಕ್ತಿ- ಮೈಕಾ ಪ್ರೇಮಕುಮಾರ್‌
    Next Article
    ನಾನು ಕೂಡ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ- ಜಯಪ್ರಕಾಶ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment