ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯಕಾರರಾಗಿದ್ದ ಸ್ವಾಮಿ ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕವಾಗಿದ್ದು ಮನುಕುಲಕ್ಕೆ ದಾರಿ ತೋರುತ್ತಿವೆ. ಸಾಧಿಸಬೇಕೆಂಬ ಯುವಕರಿಗೆ ವಿವೇಕಾಮೃತ ಒಳ್ಳೆಯ ಔಷಧ ಎಂದು ಮಂಡ್ಯ ಅಲಯನ್ಸ್ ಕ್ಲಬ್ ಉಪಾಧ್ಯಕ್ಷರಾದ ಕೆ.ಟಿ.ಹನುಮಂತು ಹೇಳಿದರು. ಮಂಡ್ಯ ನಗರದ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಪ್ರತಿಭಾಂಜಲಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ “ಯುವಜನರಿಗೆ ವಿವೇಕಾಮೃತ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಟಿ.ಹನುಮಂತು ಅವರು “ರಾಮಕೃಷ್ಣ ಪರಮಹಂಸರು ತೋರಿದ ದಾರಿಯಲ್ಲಿ ಸಾಗಿದ ವಿವೇಕಾನಂದರು ತಮ್ಮ ವಾಗ್ಝರಿಯ ಮೂಲಕ ವೇದ ಉಪನಿಷತ್ತುಗಳ ಸಾರವನ್ನು ವಿಶ್ವಕ್ಕೆ ಹರಡಿದವರು. ಟಾಲ್ಸ್ಟಾಯ್, ಮ್ಯಾಕ್ಸ್ ಮುಲ್ಲರ್, […]
The post ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ : ಕೆ.ಟಿ.ಹನುಮಂತು appeared first on nudikarnataka.
ವಿಜ್ಞಾನ ಮತ್ತು ಆಧ್ಯಾತ್ಮದ ಸಮನ್ವಯಕಾರರಾಗಿದ್ದ ಸ್ವಾಮಿ ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕವಾಗಿದ್ದು ಮನುಕುಲಕ್ಕೆ ದಾರಿ ತೋರುತ್ತಿವೆ. ಸಾಧಿಸಬೇಕೆಂಬ ಯುವಕರಿಗೆ ವಿವೇಕಾಮೃತ ಒಳ್ಳೆಯ ಔಷಧ ಎಂದು ಮಂಡ್ಯ ಅಲಯನ್ಸ್ ಕ್ಲಬ್ ಉಪಾಧ್ಯಕ್ಷರಾದ ಕೆ.ಟಿ.ಹನುಮಂತು ಹೇಳಿದರು.
ಮಂಡ್ಯ ನಗರದ ಡ್ಯಾಫೋಡಿಲ್ಸ್ ಶಾಲೆಯಲ್ಲಿ ಪ್ರತಿಭಾಂಜಲಿ ಸಂಸ್ಥೆ ಶುಕ್ರವಾರ ಆಯೋಜಿಸಿದ್ದ “ಯುವಜನರಿಗೆ ವಿವೇಕಾಮೃತ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಟಿ.ಹನುಮಂತು ಅವರು “ರಾಮಕೃಷ್ಣ ಪರಮಹಂಸರು ತೋರಿದ ದಾರಿಯಲ್ಲಿ ಸಾಗಿದ ವಿವೇಕಾನಂದರು ತಮ್ಮ ವಾಗ್ಝರಿಯ ಮೂಲಕ ವೇದ ಉಪನಿಷತ್ತುಗಳ ಸಾರವನ್ನು ವಿಶ್ವಕ್ಕೆ ಹರಡಿದವರು. ಟಾಲ್ಸ್ಟಾಯ್, ಮ್ಯಾಕ್ಸ್ ಮುಲ್ಲರ್, ಅಲ್ಬರ್ಟ್ ಐನ್ಸ್ಟೀನ್ರಂಥ ವಿದ್ವಾಂಸರು ಭಾರತದತ್ತ ತಿರುಗಿ ನೋಡುವಂತೆ ಮಾಡಿದವರು. ಯುವಜನತೆ ಸನ್ಮಾರ್ಗದಲ್ಲಿ ಸಾಗಬೇಕಾದರೆ ವಿವೇಕಾನಂದರ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು.

ಸ್ವಾಮಿ ವಿವೇಕಾನಂದರ ವೈಜ್ಞಾನಿಕ ದೃಷ್ಟಿಕೋನದ ಕುರಿತು ಉಪನ್ಯಾಸ ನೀಡುತ್ತಾ ಚಿತ್ರಕೂಟ ಸಾಂಸ್ಕೃತಿಕ ಸಂಸ್ಥೆಯ ಅರವಿಂದ ಪ್ರಭು ಅವರು ಮಾತನಾಡುತ್ತಾ “ಜಾನ್ ಡಿ.ರಾಕ್ಫೆಲ್ಲರ್ರಂಥ ಶ್ರೀಮಂತರನ್ನು ತಮ್ಮ ಧೀಮಂತ ವ್ಯಕ್ತಿತ್ವದಿಂದ ಸೆಳೆದ ಸ್ವಾಮಿ ವಿವೇಕಾನಂದರು ಜಗತ್ತಿನ ಹಸಿವು ನೀಗಿಸಲು ಹಸಿರು ಕ್ರಾಂತಿಗೆ ಮುನ್ನುಡಿ ಬರೆದವರು. ವಿವೇಕಾನಂದರ ಆಶಯದಂತೆ ರಾಕ್ಫೆಲ್ಲರ್ ಫೌಂಡೇಷನ್ ಸಹಾಯದಿಂದ ಹೆಚ್ಚು ಇಳುವರಿ ಕೊಡುವ ಗೋದಿ, ಭತ್ತದ ತಳಿಗಳನ್ನು ನಾರ್ಮನ್ ಬೋರ್ಲಾಗ್, ಸ್ವಾಮಿನಾಥನ್ರಂಥ ಕೃಷಿ ವಿಜ್ಞಾನಿಗಳು ಸಂಶೋಧಿಸದಿದ್ದರೆ ಭಾರತ ಇಂದು ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ನಂ.1 ದೇಶವಾಗುತ್ತಿರಲಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಪರಿಚಯ ಪ್ರಕಾಶನ ಹೊರತಂದಿರುವ “ವಿವೇಕಾಮೃತ” ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಡ್ಯಾಫೋಡಿಲ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಲಯನ್ಸ್ ಕ್ಲಬ್ನ 2ನೇ ರಾಜ್ಯಪಾಲರಾದ ಚಂದ್ರಶೇಖರ್, ಜಿಲ್ಲಾ ಕೋ ಆರ್ಡಿನೇಟರ್ ಪ್ರತಿಭಾಂಜಲಿ ಡೇವಿಡ್, ಸಾಹಿತಿ ಶಿವಕುಮಾರ ಆರಾಧ್ಯ, ಅಲೈ ಸಂತೋಷ್, ಧನಂಜಯ, ಐಶ್ವರ್ಯ ಮತ್ತಿತರರು ಉಪಸ್ಥಿತರಿದ್ದರು.
The post ವಿವೇಕಾನಂದರ ಚಿಂತನೆಗಳು ಸಾರ್ವಕಾಲಿಕ : ಕೆ.ಟಿ.ಹನುಮಂತು appeared first on nudikarnataka.
Previous Article
ಅಸೆಂಬ್ಲಿ ಕರೆಯುತ್ತೇವೆ ಅಲ್ಲಿ ಅವರ ಶಾಸಕರಿಗೆ ಚರ್ಚೆ ಮಾಡಲು ಹೇಳಿ-ಹೆಚ್.ಡಿಕೆಗೆ ಡಿಸಿಎಂ ಡಿಕೆಶಿ ತಿರುಗೇಟು
Next Article
ಕೇರಳದಲ್ಲಿ ಕನ್ನಡ ಶಾಲೆಗಳ ಮುಚ್ಚುವ ಹುನ್ನಾರ ನಡೆಯುತ್ತಿದೆ- ಆರ್.ಅಶೋಕ್ ಆಕ್ರೋಶ