Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಶತಮಾನಕ್ಕೆ ಸಾಕ್ಷಿಯಾಗಿ ನಿಂತ ಸ್ವದೇಶಿ ಔಷಧ ಭಂಡಾರ: ಕೇೂಟ ಶ್ರೀನಿವಾಸ ಪೂಜಾರಿ

    3 days ago

    ಉಡುಪಿ, ಜ.11: ಸ್ವದೇಶಿ ಔಷಧ ಭಂಡಾರ ಕುಂಜಾಲು ಘಟಕ ಮಣಿಪಾಲ್ ಇದರ ಶತಮಾನೇೂತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ ಕೇೂಟ ಶ್ರೀನಿವಾಸ ಪುಾಜಾರಿ, ಸ್ವಾತಂತ್ರ್ಯ ಪೂರ್ವದಲ್ಲಿ ತೀರ ಗ್ರಾಮೀಣ ಪ್ರದೇಶ ಕುಂಜಾಲಿನಲ್ಲಿ ಅಂದಿನ ಆಯುರ್ವೇದ ಪಂಡಿತರಾದ ರಘುನಾಥ್ ಪ್ರಭುಗಳ ಪರಿಶ್ರಮದಲ್ಲಿ ಸ್ವದೇಶಿ ಔಷಧ ತಯಾರಿಕ ಕೇಂದ್ರ ಹುಟ್ಟಿ ಕೊಂಡಿದ್ದು ಒಂದು ಐತಿಹಾಸಿಕ ದಾಖಲೆ. ಇಂದು ಆಯುರ್ವೇದ ಮತ್ತು ಯೇೂಗ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಭಾರತೀಯ ಆಯುರ್ವೇದ ಪದ್ಧತಿಯನ್ನು ಇನ್ನಷ್ಟು ಅವಿಷ್ಕಾರಗೊಳಿಸಿ ಅದರ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸಬೇಕಾದ […]

    The post ಶತಮಾನಕ್ಕೆ ಸಾಕ್ಷಿಯಾಗಿ ನಿಂತ ಸ್ವದೇಶಿ ಔಷಧ ಭಂಡಾರ: ಕೇೂಟ ಶ್ರೀನಿವಾಸ ಪೂಜಾರಿ appeared first on Namma Udupi Bulletin.



    ಉಡುಪಿ, ಜ.11: ಸ್ವದೇಶಿ ಔಷಧ ಭಂಡಾರ ಕುಂಜಾಲು ಘಟಕ ಮಣಿಪಾಲ್ ಇದರ ಶತಮಾನೇೂತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ ಕೇೂಟ ಶ್ರೀನಿವಾಸ ಪುಾಜಾರಿ, ಸ್ವಾತಂತ್ರ್ಯ ಪೂರ್ವದಲ್ಲಿ ತೀರ ಗ್ರಾಮೀಣ ಪ್ರದೇಶ ಕುಂಜಾಲಿನಲ್ಲಿ ಅಂದಿನ ಆಯುರ್ವೇದ ಪಂಡಿತರಾದ ರಘುನಾಥ್ ಪ್ರಭುಗಳ ಪರಿಶ್ರಮದಲ್ಲಿ ಸ್ವದೇಶಿ ಔಷಧ ತಯಾರಿಕ ಕೇಂದ್ರ ಹುಟ್ಟಿ ಕೊಂಡಿದ್ದು ಒಂದು ಐತಿಹಾಸಿಕ ದಾಖಲೆ. ಇಂದು ಆಯುರ್ವೇದ ಮತ್ತು ಯೇೂಗ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಭಾರತೀಯ ಆಯುರ್ವೇದ ಪದ್ಧತಿಯನ್ನು ಇನ್ನಷ್ಟು ಅವಿಷ್ಕಾರಗೊಳಿಸಿ ಅದರ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ ಎಂದರು.

    ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಶಾಸಕರಾದ ಕೆ.ರಘಪತಿ ಭಟ್, ಆಯುರ್ವೇದ ತಜ್ಞ ವೈದ್ಯರಾದ ಡಾ.ತನ್ಮಯ ಗೇೂಸ್ವಾಮಿ, ಉಡುಪಿ ನಗರಸಭೆ ಮಾಜಿ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಮಹೇಶ್ ಠಾಕೂರ್, ನ್ಯಾಯವಾದಿ ಪ್ರಸಾದ್ ಕುಮಾರ್ ಶೆಟ್ಟಿ, ಹಿರಿಯ ವೈದ್ಯ ಡಾ.ಬಿ.ಆರ್ ಅಂಬರೀಶ್; ಶ್ರೀ ಧ್ವನ್ವಂತರಿ ಔಷಧಾಲಯ ಭಂಡಿಗಡಿ, ಸ್ವದೇಶಿ ಔಷದ ಭಂಡಾರ ಕುಂಜಾಲು ಇದರ ಹಿರಿಯ ಸದಸ್ಯರಾದ ಕೀರ್ತಿ ವಿ. ಪ್ರಭು, ದತ್ತಾತ್ರೇಯ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಸಂಸ್ಥೆಯ ಮಾಲೀಕರಾದ ನಯನದಾಸ್ ಪ್ರಭು ಮತ್ತು ಸಾವಿತ್ರಿ ಪ್ರಭು ಸ್ವಾಗತಿಸಿದರು. ಸಂಸ್ಥಾಪಕರ ಸಂಸ್ಮರಣೆಯನ್ನು ಡಾ. ರೇಷ್ಮಾ ಗುರುಪ್ರಸಾದ್ ನಡೆಸಿಕೊಟ್ಟರು. ಮಮತಾ ನಯನದಾಸಪ್ರಭು ವಂದಿಸಿದರು. ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

    The post ಶತಮಾನಕ್ಕೆ ಸಾಕ್ಷಿಯಾಗಿ ನಿಂತ ಸ್ವದೇಶಿ ಔಷಧ ಭಂಡಾರ: ಕೇೂಟ ಶ್ರೀನಿವಾಸ ಪೂಜಾರಿ appeared first on Namma Udupi Bulletin.

    Click here to Read More
    Previous Article
    ಶೀರೂರು ಪರ್ಯಾಯ: ಹೊರೆಕಾಣಿಕೆ ವಿವರ
    Next Article
    ರಾಜೀವನಗರ: ಸ್ವಾಮಿ ವಿವೇಕಾನಂದ ಜಯಂತಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment