ಶ್ರೀ ರಾಮಯಾಣದರ್ಶನಂ ಕೃತಿಯ ಮೂಲಕ ಕನ್ನಡ ಭಾ಼ಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕವಿ ಕುವೆಂಪು ಅವರ ಉದಯರವಿ ನಿವಾಸ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ಮೀನಾ ಮೇಷ ಎಣಿಸುತ್ತಿರುವ ಸರಕಾರದ ಕ್ರಮವನ್ನು ವಿವಿಧ ಕನ್ನಡ ಸಂಘಟನೆಗಳ ನಾಯಕರ ನಿಯೋಗ ತೀವ್ರವಾಗಿ ಖಂಡಿಸಿದೆ. ಬುಧವಾರ ಮೈಸೂರಿನ ಕುವೆಂಪುರವರ ಉದಯರವಿ ನಿವಾಸಕ್ಕೆ ಭೇಟಿ ನೀಡಿದ ನಿಯೋಗ ಕುವೆಂಪು ಪುತ್ರಿ ತಾರಿಣಿ ಚಿದಾನಂದಾರೊಂದಿಗೆ ಚರ್ಚಿಸಿ ಉದಯರವಿ ನಿವಾಸವನ್ನು ಸ್ಮಾರಕವಾಗಿ ರೂಪಿಸದ ಸರಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕುವೆಂಪು […]
The post ‘ಉದಯರವಿ’ ಅಭಿವೃದ್ಧಿಗೆ ಮೀನಾಮೇಷ : ಸರ್ಕಾರದ ವಿರುದ್ದ ಕನ್ನಡ ಸಂಘಟನೆಗಳ ಆಕ್ರೋಶ appeared first on nudikarnataka.
ಶ್ರೀ ರಾಮಯಾಣದರ್ಶನಂ ಕೃತಿಯ ಮೂಲಕ ಕನ್ನಡ ಭಾ಼ಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆಯ ಕವಿ ಕುವೆಂಪು ಅವರ ಉದಯರವಿ ನಿವಾಸ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ಮೀನಾ ಮೇಷ ಎಣಿಸುತ್ತಿರುವ ಸರಕಾರದ ಕ್ರಮವನ್ನು ವಿವಿಧ ಕನ್ನಡ ಸಂಘಟನೆಗಳ ನಾಯಕರ ನಿಯೋಗ ತೀವ್ರವಾಗಿ ಖಂಡಿಸಿದೆ.
ಬುಧವಾರ ಮೈಸೂರಿನ ಕುವೆಂಪುರವರ ಉದಯರವಿ ನಿವಾಸಕ್ಕೆ ಭೇಟಿ ನೀಡಿದ ನಿಯೋಗ ಕುವೆಂಪು ಪುತ್ರಿ ತಾರಿಣಿ ಚಿದಾನಂದಾರೊಂದಿಗೆ ಚರ್ಚಿಸಿ ಉದಯರವಿ ನಿವಾಸವನ್ನು ಸ್ಮಾರಕವಾಗಿ ರೂಪಿಸದ ಸರಕಾರದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕುವೆಂಪು ಜಗದ ಕವಿ,ಯುಗದ ಕವಿ,ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಈ ನಾಡಿನ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಧೀಮಂತ ಚೇತನ. ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿಗೆ ಕುವೆಂಪು ನೀಡಿರುವ ಕೊಡುಗೆ ನಿಜಕ್ಕೂ ಬಣ್ಣಿಸಲು ಅಸಾಧ್ಯ. ಇಂತಹ ನಾಡ ಚೇತನವನ್ನು ಸರಕಾರ ನಿರ್ಲಕ್ಷ್ಯ ಮಾಡುತ್ತಿರುವ ಕ್ರಮ ನಿಜಕ್ಕೂ ನಾಚಿಕೆಪಡುವಂತಹದ್ದು.ಚಾಣಕ್ಯ,ಸಂಸ್ಕೃತ ವಿವಿಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನ ನೀಡುವ ಸರಕಾರಕ್ಕೆ ಈ ನಾಡಿಗೆ ಸಾಂಸ್ಕೃತಿಕ ಕೊಡುಗೆ ನಿಡಿದ ಕವಿಯ ಮನೆ ಕಾಣದಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಕಲಬುರಗಿ ನಗರದಲ್ಲಿ ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅವರ ಪ್ರತಿಮೆ ಸ್ಥಾಪಿಸಲು ಸಂಪುಟ ಸಭೆಯಲ್ಲಿ ಅನುಮತಿ ನೀಡುವ ಮುಖ್ಯಮಂತ್ರಿ ಸಿದ್ದರಾಮಯ್ಯವರಿಗೆ ತಮ್ಮ ತವರು ಜಿಲ್ಲೆಯ ಉದಯರವಿ ನೆನಪಾಗಲಿಲ್ಲವೆ? ಸರಕಾರ ಈ ಕೂಡಲೇ ಕುಂಟುನೆಪ ಹೇಳುವುದು ಬಿಟ್ಟು ಉದಯ ರವಿಯನ್ನು ಸ್ಮಾರಕವನ್ನಾಗಿಸಬೇಕು. ಒಂದು ವೇಳೆ ಸರಕಾರ ಕುವೆಂಪು ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ್ದೆ ಆದರೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿ ಕನ್ನಡಿಗರ ಮನೆಯಿಂದ ಒಂದೋಂದು ರೂಪಾಯಿ ಭಿಕ್ಷೆ ಎತ್ತಿ ಸ್ಮಾರಕವನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧರಿದ್ದೇವೆ ಎಂದು ಈ ಮೂಲಕ ನಾವು ಸರಕಾರಕ್ಕೆ ತಿಳಿಸಲು ಇಚ್ಛಿಸುತ್ತೇವೆ ಎಂದು ನಿಯೋಗದ ಸದಸ್ಯರು ತಿಳಿಸಿದರು.
ನಿಯೋಗದಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ, ಕರ್ನಾಟಕ ಕಾವಲು ಪಡೆ ರಾಜ್ಯಾಧ್ಯಕ್ಷ ಮೋಹನ ಕುಮಾರ್ ಗೌಡ, ಕರುನಾಡು ಸೇವಕರು ಸಂಘಟನೆ ರಾಜ್ಯ ವಕ್ತಾರ ಎಂ.ಬಿ ನಾಗಣ್ಣಗೌಡ ಹಾಗೂ ಕರುನಾಡ ಸೇವಕರು ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷ ಎಸ್ ಕೆ ರಾಜೂಗೌಡ ಭಾಗವಹಿಸಿದ್ದರು.
The post ‘ಉದಯರವಿ’ ಅಭಿವೃದ್ಧಿಗೆ ಮೀನಾಮೇಷ : ಸರ್ಕಾರದ ವಿರುದ್ದ ಕನ್ನಡ ಸಂಘಟನೆಗಳ ಆಕ್ರೋಶ appeared first on nudikarnataka.
Previous Article
ಒಕ್ಕಲಿಗವೇ ವಿಶ್ವಮಾನವ ಸನಾತನ ಧರ್ಮ ; ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಹುಟ್ಟಿದ್ದು ಆನಂತರ…..
Next Article
ಎನ್.ಸಿ.ಸಿ ಯಲ್ಲಿ ಮಾಜಿ ಸೈನಿಕರಿಗೆ ಒಪ್ಪಂದದ ಮೇರೆಗೆ ಬೋಧಕರ ಹುದ್ದೆಗೆ ನೇಮಕಾತಿ