Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದ ಹೊರಗುಳಿದವರು ಅಂತರ್ಜಾಲ ಸಹಾಯವಾಣಿ ಮೂಲಕ ನೊಂದಾಯಿಸಲು ತಹಸೀಲ್ದಾರ್ ರಶ್ಮಿ ಯು.ಮನವಿ

    1 hour ago

    ಕುಣಿಗಲ್ :ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯ ವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಸೀಲ್ದಾರ್ ರಶ್ಮಿ ಯು ರವರು ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 13-08-2025 ರ ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ . ಅದರಂತೆ ಕುಣಿಗಲ್ …

    The post ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದ ಹೊರಗುಳಿದವರು ಅಂತರ್ಜಾಲ ಸಹಾಯವಾಣಿ ಮೂಲಕ ನೊಂದಾಯಿಸಲು ತಹಸೀಲ್ದಾರ್ ರಶ್ಮಿ ಯು.ಮನವಿ appeared first on ಸುವರ್ಣ ಪ್ರಗತಿ.



    ಕುಣಿಗಲ್ :ತಾಲ್ಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ 2025 ಭರದಿಂದ ಸಾಗಿದ್ದು, ಗಣತಿಯಿಂದ ಯಾರಾದರೂ ಹೊರಗುಳಿದಿದ್ದರೆ ತಕ್ಷಣ ಸರ್ಕಾರ ಆರಂಭಿಸಿರುವ ಸಹಾಯ ವಾಣಿಗೆ ಸಂಪರ್ಕಿಸಬೇಕೆಂದು ತಾಲೂಕಿನ ತಹಸೀಲ್ದಾರ್ ರಶ್ಮಿ ಯು ರವರು ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    13-08-2025 ರ ಆದೇಶದನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2025 ಮನೆ ಮನೆ ಸಮೀಕ್ಷೆಯಮ್ಮ ಸಪ್ಟೆಂಬರ್ -22 ರಿಂದ ಅಕ್ಟೋಬರ್ -7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುತ್ತದೆ .

    ಅದರಂತೆ ಕುಣಿಗಲ್ ತಾಲೂಕಿನಲ್ಲಿಯೂ 564 ಗಣತಿ ದಾರರು, 28 ಮಂದಿ ಮೇಲ್ವಿಚಾರಕರು ಸಮೀಕ್ಷೆಯನ್ನು ನಡೆಸುತ್ತಿದ್ದಾರೆ. ಆದರಿಂದ ತಾಲೂಕಿನಲ್ಲಿ ಯಾವುದೇ ಗ್ರಾಮ / ಹಟ್ಟಿ / ಕಾಲೋನಿ / ಬೀದಿಗಳಲ್ಲಿ ಕುಟುಂಬದಲ್ಲಿ ಸಮೀಕ್ಷೆ ನಡೆಯದೇ ಇದ್ದಲ್ಲಿ ಅಂತಹ ವಿವರಗಳನ್ನು ದಿ.07.10.2025 ರ ಒಳಗೆ ಕೆಳಕಂಡ ತಾಲ್ಲೂಕು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸಹಾಯವಾಣಿಯನ್ನು ಸಂಪರ್ಕಿಸಿ, ಮಾಹಿತಿ ಒದಗಿಸುವುದು ಅಥವಾ ತಾಲ್ಲೂಕು ಆಡಳಿತದ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರು ತಮ್ಮ ಸಮೀಕ್ಷೆಯನ್ನು ತಾವೇ ಮಾಡಲು ಇಚ್ಚಿಸಿದಲ್ಲಿ ಕೆಳಕಂಡ ಅಂತರ್ಜಾಲ ಕೊಂಡಿ ಬಳಸಿ ಸಮೀಕ್ಷೆಯಲ್ಲಿ ಸ್ವ – ಇಚ್ಛೆಯಿಂದ ಭಾಗವಹಿಸಿ, ವಿವರಗಳನ್ನು ಭರ್ತಿ ಮಾಡಿ , ಸಮೀಕ್ಷಾ ಐಡಿ / ಅಪ್ಲಿಕೇಷನ್ ಐಡಿಯನ್ನು ಅಂಟಿಸಿರುವ ಯು.ಹೆಚ್.ಐ.ಡಿ ಸ್ಟಿಕರ್ ಮೇಲೆ ನಮೂದಿಸಬೇಕಾಗಿ ತಾಸಿಲ್ದಾರ್ ಅವರು ಮನವಿ ಮಾಡಿದ್ದಾರೆ.

    ಅಂತರ್ಜಾಲ ಕೊಂಡಿ :https://kscbcselfdeclaration. Karnataka. gov. in/

    ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ : 6362677730 ಮತ್ತು 9901357621 ಸಂಪರ್ಕಿಸಲು ಕೋರಿದೆ.

    The post ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದ ಹೊರಗುಳಿದವರು ಅಂತರ್ಜಾಲ ಸಹಾಯವಾಣಿ ಮೂಲಕ ನೊಂದಾಯಿಸಲು ತಹಸೀಲ್ದಾರ್ ರಶ್ಮಿ ಯು.ಮನವಿ appeared first on ಸುವರ್ಣ ಪ್ರಗತಿ.

    Click here to Read More
    Previous Article
    ಸೊರವನಹಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ ನೋಡಲು ಲೋಕೋಪಯೋಗಿ, ಶಿಕ್ಷಣ, ಪಂಚಾಯತ್ ರಾಜ್ ಮಂತ್ರಿಗಳೇ ಬರಬೇಕೆ..?
    Next Article
    ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಬದಲಾವಣೆ ಸಾಧ್ಯವಿಲ್ಲ : ಡಿಸಿಎಂ ಡಿ.ಕೆ.ಶಿವಕುಮಾರ್

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment