Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯನಗರದ ಅಭಿವೃದ್ದಿಗೆ 200 ಕೋಟಿ ರೂ. ವೆಚ್ಚ : ಶಾಸಕ ರವಿಕುಮಾರ್‌

    1 week ago

    ‘ನಾನು ಶಾಸಕನಾಗಿ ಆಯ್ಕೆಯಾದ ನಂತರ ಮಂಡ್ಯ ನಗರ ಅಭಿವೃದ್ದಿಗೆ ೨೦೦ ಕೋಟಿ ರೂ. ವೆಚ್ಚ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಮಂಡ್ಯನಗರವನ್ನು ಇನ್ನಷ್ಟು ಆಕರ್ಷಣೀಯವಾಗಿ ರೂಪಿಸಲಾಗುವುದು’ ಎಂದು  ಎಂದು ಶಾಸಕ ರವಿಕುಮಾರ್‌ಗೌಡ ಗಣಿಗ ತಿಳಿಸಿದರು. ಮಂಡ್ಯನಗರದ ಹೊಸಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಶ್ರೀಕಾಂತ್(ಜೆಕೆ) ಮತ್ತು ಗೆಳೆಯರು ಆಯೋಜಿಸಿದ್ದ ಶಾಸಕ ರವಿಕುಮಾರ ಗೌಡ ಗಣಿಗ ಅವರ ಹುಟ್ಟುಹಬ್ಬ ಪ್ರಯುಕ್ತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮತ್ತು ಮಂಡ್ಯ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಅಡುಗೆ […]

    The post ಮಂಡ್ಯನಗರದ ಅಭಿವೃದ್ದಿಗೆ 200 ಕೋಟಿ ರೂ. ವೆಚ್ಚ : ಶಾಸಕ ರವಿಕುಮಾರ್‌ appeared first on nudikarnataka.



    ‘ನಾನು ಶಾಸಕನಾಗಿ ಆಯ್ಕೆಯಾದ ನಂತರ ಮಂಡ್ಯ ನಗರ ಅಭಿವೃದ್ದಿಗೆ ೨೦೦ ಕೋಟಿ ರೂ. ವೆಚ್ಚ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಮಂಡ್ಯನಗರವನ್ನು ಇನ್ನಷ್ಟು ಆಕರ್ಷಣೀಯವಾಗಿ ರೂಪಿಸಲಾಗುವುದು’ ಎಂದು  ಎಂದು ಶಾಸಕ ರವಿಕುಮಾರ್‌ಗೌಡ ಗಣಿಗ ತಿಳಿಸಿದರು.

    ಮಂಡ್ಯನಗರದ ಹೊಸಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಶ್ರೀಕಾಂತ್(ಜೆಕೆ) ಮತ್ತು ಗೆಳೆಯರು ಆಯೋಜಿಸಿದ್ದ ಶಾಸಕ ರವಿಕುಮಾರ ಗೌಡ ಗಣಿಗ ಅವರ ಹುಟ್ಟುಹಬ್ಬ ಪ್ರಯುಕ್ತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮತ್ತು ಮಂಡ್ಯ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಅಡುಗೆ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಮಾದರಿ ಮಂಡ್ಯ ನಗರ ರೂಪಿಸುವುದು, ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಸಾಗರೋಪಾದಿಯಲ್ಲಿ ಅಭಿವೃದ್ದಿ ಕಾರ್ಯ ಸಾಗುತ್ತಿದೆ, ೩ನೇ ವಾರ್ಡಿನಲ್ಲಿ ಮಳೆ ಬಂದ್ರೆ ಭಾರಿ ಸಮಸ್ಯೆಯಾಗುತ್ತಿತ್ತು, ಈಗ ಎಷ್ಟೇ ಮಳೆ ಸುರಿದರೂ ತೊಂದರೆಯಾಗದಂತೆ ಅಭಿವೃದ್ದಿ ಪಡಿಸಲಾಗಿದೆ ಎಂದರು.

    ಇದೇ ಹೊಸಹಳ್ಳಿ ರಸ್ತೆ ಎಷ್ಟುವರ್ಷದಿಂದ ಗುಂಡಿ ಬಿದ್ದಿತ್ತು, ಈಗ ಉತ್ತಮ ರಸ್ತೆ ಆಗಿದೆ, ನಿಮ್ಮ ಹೊಸಹಳ್ಳಿ ವೃತ್ತವನ್ನು ವಿದೇಶಿ ಮಾದರಿಯ ವೃತ್ತದ ರೀತಿ ಮಾಡಲು ನೀಲನಕ್ಷೆ ರೆಡಿಯಾಗಿದೆ, ಆಟೋ ನಿಲ್ದಾಣದವರು ಬೋರ್ಡ್ ಹಾಕೊಂಡು ನಿಂತರವರೇ ತೆಗಿಬೇಕು ಎಂದು ಹೇಳಿದ್ದೇವೆ, ಅಭಿವೃದ್ದಿಗೆ ಸಹಕಾರ ನೀಡಬೇಕು.ಮಂಡ್ಯ ನಗರಕ್ಕೆ ಹೊಸ ರೂಪ ನೀಡಲಾಗುವುದು, ಮದುವೆಗೆ ಹಣ್ಣು ಕೊಡೊರು ಮತ್ತು ತರೋರು ಸಂಭ್ರಮದಿಂದ ಮದುವೆ ಮಾಡಿಕೊಡುಷ್ಟು ಹೊಸಬದಲಾವಣೆಯಾಗುತ್ತದೆ ಎಂದರು.

    ಸಾರ್ವಜನಿಕ ಜೀವನದಲ್ಲಿರುವ ನನಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮುಜುಗರವಾಗುತ್ತದೆ, ಚಿಕ್ಕ ಮಕ್ಕಳಂತೆ ಕೇಕ್ ಕಟ್ ಮಾಡಿ ಸಂಭ್ರಮಿಸೋದನ್ನು ನಿಲ್ಲಿಸಿದ್ದೇವೆ, ಇನ್ನೇನಿದ್ದರೂ ಸಮಾಜಮುಖಿಯಾಗಿ ಹುಟ್ಟು ಹಬ್ಬ ಆಚರಿಸುವರಿಗೆ ಮಾತ್ರ ಡೇಟ್ ಕೊಡ್ತಿತ್ತಿನಿ, ೧ ಕೋಟಿ ರೂ.ಖರ್ಚು ಮಾಡಿ, ಮಂಡ್ಯ ಜಿಲ್ಲಾಧ್ಯಂತ ಹಿತೈಷಿಗಳು ಪ್ಲೇಕ್ಸ್, ಬಂಟಿಂಗ್ಸ್, ವಿವಿಧ ಸೇವಾ ಚಟುವಟಿಕೆ ಮಾಡಿದ್ದಾರೆ ಅವರ ಪ್ರೀತಿಗೆ  ಅಭಿಮಾನಕ್ಕೆ ಗೌರವ ಕೊಡ್ತಿನಿ ಎಂದರು.

    ಇಂದು ಹೊಸಹಳ್ಳಿಯಲ್ಲಿ ಯುವನಾಯಕ ಹೊಸಹಳ್ಳಿ ಶ್ರೀಕಾಂತ್(ಜೆಕೆ) ಸಂಯುಕ್ತ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮತ್ತು ಮಂಡ್ಯ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ ಅಡುಗೆ ಸಿಬ್ಬಂದಿಗಳಿಗೆ ಸಮವಸ್ತ್ರ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಕಾರ್ಯಕ್ರಮಕ್ಕೂ ಮುನ್ನ ಶಾಸಕ ಸ್ವಾಗತವನ್ನು ಅದ್ದೂರಿಯಾಗಿ ಪುಷ್ಪವೃಷ್ಠಿ ಮತ್ತು ಬೆಲ್ಲದಾರತಿಯೊಂದಿಗೆ ಬರಮಾಡಿಕೊಂಡು, ದೊಡ್ಡ ದೊಡ್ಡ ಹೂವಿನ ಹಾರಹಾಕಿ ಅಭಿನಂದಿಸಲಾಯಿತು.

    ಕಾರ್ಯಕ್ರಮದಲ್ಲಿ ಮನ್ಮುಲ್ ಅಧ್ಯಕ್ಷ ಶಿವಕುಮಾರ್ ಉಮ್ಮಡಹಳ್ಳಿ,  ಶ್ರೀಕಾಂತ್(ಜೆಕೆ), ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್,  ನಗರಸಭಾ ಸದಸ್ಯರಾದ ಪವಿತ್ರ ಬೋರೇಗೌಡ, ಮಂಜು, ಎಸ್ಪಿ ಶೋಭಾರಾಣಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ಕಾಂಗ್ರೆಸ್ ಮುಖಂಡ ಹೊಸಹಳ್ಳಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್, ಬಿಇಓ ಮಹದೇವು, ಜಿಲ್ಲಾ ಸರ್ಕಾರಿ ನೌಕರರಸಂಘದ ಅಧ್ಯಕ್ಷ ಕೆ.ನಾಗೇಶ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಜರಿದ್ದರು.

    The post ಮಂಡ್ಯನಗರದ ಅಭಿವೃದ್ದಿಗೆ 200 ಕೋಟಿ ರೂ. ವೆಚ್ಚ : ಶಾಸಕ ರವಿಕುಮಾರ್‌ appeared first on nudikarnataka.

    Click here to Read More
    Previous Article
    ದೀರ್ಘಾವಧಿ ಸಿಎಂ ಆಗಿ ದಾಖಲೆ: ಸಿದ್ದರಾಮಯ್ಯಗೆ ಶುಭಹಾರೈಸಿದ ಶಾಸಕ ರಂಗನಾಥ್
    Next Article
    ಕೋಗಿಲು ಲೇಔಟ್ ನಿರಾಶ್ರಿತರಗೆ ಪುನರ್ವಸತಿ, ಪರಿಹಾರ: ವಿಚಾರಣೆ ಮುಂದೂಡಿದ ಹೈಕೋರ್ಟ್

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment