Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    Crime News:ತಾಳೆ ಬೆಳೆಯೊಂದಿಗೆ ಸುಟ್ಟು ಕರಕಲಾದ ರೈತ

    3 weeks ago

    ನ್ಯಾಮತಿ: ತಾಳೆ ತೋಟಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಈಶ್ವರಪ್ಪ (80 ) ಬೆಂಕಿಗೆ ಆಹುತಿಯಾಗಿರುವ ರೈತ.  2.20  ಎಕರೆ ಜಮೀನಿನ ತೋಟದಲ್ಲಿ ತಾಳೆ ಬೆಳೆದಿದ್ದರು. ಎಂದಿನAತೆ ತೋಟಕ್ಕೆ ಬೆಳಗ್ಗೆ ರೈತ ಈಶ್ವರಪ್ಪ ತೆರಳಿದ್ದರು. ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ರೈತ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗಿದೆ. ಬೆಂಕಿಯ ಜ್ವಾಲೆಗೆ 2  ಎಕರೆಯಷ್ಟು ತಾಳೆ ಬೆಳೆ ಸುಟ್ಟು ಕರಕಲಾಗಿದೆ. ಸುದ್ದಿ […]

    ನ್ಯಾಮತಿ: ತಾಳೆ ತೋಟಕ್ಕೆ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬ ಬೆಂಕಿಗೆ ಆಹುತಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಗ್ರಾಮದ ಈಶ್ವರಪ್ಪ (80 ) ಬೆಂಕಿಗೆ ಆಹುತಿಯಾಗಿರುವ ರೈತ.  2.20  ಎಕರೆ ಜಮೀನಿನ ತೋಟದಲ್ಲಿ ತಾಳೆ ಬೆಳೆದಿದ್ದರು. ಎಂದಿನAತೆ ತೋಟಕ್ಕೆ ಬೆಳಗ್ಗೆ ರೈತ ಈಶ್ವರಪ್ಪ ತೆರಳಿದ್ದರು. ಆಕಸ್ಮಿಕವಾಗಿ ತಗುಲಿದ ಬೆಂಕಿಯ ಕೆನ್ನಾಲಿಗೆಗೆ ರೈತ ಸುಟ್ಟು ಕರಕಲಾಗಿದ್ದಾರೆ ಎಂದು ಹೇಳಲಾಗಿದೆ.

    ಬೆಂಕಿಯ ಜ್ವಾಲೆಗೆ 2  ಎಕರೆಯಷ್ಟು ತಾಳೆ ಬೆಳೆ ಸುಟ್ಟು ಕರಕಲಾಗಿದೆ. ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

    Read also : ಕ್ರಿಸ್ಮಸ್: ಸಂಭ್ರಮ ಮತ್ತು ಶಾಂತಿಯ ಹಬ್ಬ: ಡಾ. ಡಿ. ಫ್ರಾನ್ಸಿಸ್

    ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಂದಾಯ ಅಧಿಕಾರಿ ಸಂತೋಷ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

    ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

    Click here to Read More
    Previous Article
    ಅಪಘಾತ:ಲಾರಿ ಡ್ರೈವರ್‌ ಸೇರಿದಂತೆ 5 ಮಂದಿ ಸಜೀವ ದಹನ
    Next Article
    ವಿದ್ಯಾನಗರದಲ್ಲಿ ಡ್ರಗ್ಸ್ ದಂಧೆ : ಕಾಂಗ್ರೆಸ್ ಮುಖಂಡ ಸೇರಿ 4 ಮಂದಿ ಬಂಧನ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment