Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಅನುಮಾನಕ್ಕೆ ಆಸ್ಪದ ನೀಡಿದ ಒಳಮೀಸಲಾತಿ ಮಸೂದೆ ವಾಪಸ್ : ಚಂದ್ರಶೇಖರ್

    6 days ago

    ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಶೇ.15 ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಮಸೂದೆಯನ್ನು ರಾಜ್ಯಪಾಲರು ಕಾರಣ ಕೇಳಿ ವಾಪಸ್ ಕಳಿಸಿರುವುದು ಹಲವು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ತಿಳಿಸಿದ್ದಾರೆ. ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ ಜೆಡಿಎಸ್ ಮುಖಂಡರು ಮತ್ತೊಂದು ವಿಧೇಯಕವಾದ ದ್ವೇಷದ ಭಾಷಣ ಬಿಲ್ ಅನ್ನು ತಡೆಯಲು ಮನವಿ ಸಲ್ಲಿಸಿದರು. […]

    The post ಅನುಮಾನಕ್ಕೆ ಆಸ್ಪದ ನೀಡಿದ ಒಳಮೀಸಲಾತಿ ಮಸೂದೆ ವಾಪಸ್ : ಚಂದ್ರಶೇಖರ್ appeared first on nudikarnataka.



    ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿಗಾಗಿ ಶೇ.15 ರಷ್ಟಿದ್ದ ಮೀಸಲಾತಿಯನ್ನು ಶೇ.17ಕ್ಕೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿದ್ದ ಮಸೂದೆಯನ್ನು ರಾಜ್ಯಪಾಲರು ಕಾರಣ ಕೇಳಿ ವಾಪಸ್ ಕಳಿಸಿರುವುದು ಹಲವು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಕರ್ನಾಟಕ ಮಾದರ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಆರ್.ಚಂದ್ರಶೇಖರ್ ತಿಳಿಸಿದ್ದಾರೆ.

    ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ ಜೆಡಿಎಸ್ ಮುಖಂಡರು ಮತ್ತೊಂದು ವಿಧೇಯಕವಾದ ದ್ವೇಷದ ಭಾಷಣ ಬಿಲ್ ಅನ್ನು ತಡೆಯಲು ಮನವಿ ಸಲ್ಲಿಸಿದರು. ಅದನ್ನೇ ನೆಪ ಮಾಡಿಕೊಂಡು, ಒಳಮೀಸಲಾತಿ ವಿಧೇಯಕವನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ ಎಂಬ ಅನುಮಾನ ಬರುತ್ತದೆ. ಹಾಗಾಗಿ ರಾಜ್ಯಪಾಲರು ಬಿಜೆಪಿ, ಜೆಡಿಎಸ್ ಏಜೇಂಟರಂತೆ ಕಾರ್ಯ ನಿರ್ವಹಿಸದೇ ಸಂವಿಧಾನ ಆಶಯದಂತೆ ಕಾನೂನು ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

    ಕೂಡಲೇ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗಾಗಿ ಹೊರಡಿಸಿದ್ದ ಕಾನೂನಿಗೆ ರಾಜ್ಯಪಾಲರು ಕೇಳಿರುವ ಸ್ಪಷ್ಟೀಕರಣ ನೀಡಿ, ಮತ್ತೇ ರಾಜ್ಯಪಾಲರಿಗೆ ಕಳುಹಿಸ ಬೇಕು ಎಂದು ಒತ್ತಾಯಿಸಿದರುವ ಅವರು, ಮುಂದಿನ ZP, TP ,ಪುರಸಭೆಗಳ ಚುನಾವಣೆಯಲ್ಲಿ, ಬಿಜೆಪಿ, ಜೆಡಿಎಸ್,ಕಾಂಗ್ರೆಸ್ ಪಕ್ಷಗಳಿಗೆ ಒಳಮೀಸಲಾತಿ ವಿಷಯವನ್ನು ರಾಜಕೀಯ ದಾಳ ಮಾಡಿಕೊಂಡು ಓಟು ಪಡೆಯಲು ಅವಕಾಶ ಕಲ್ಪಿಸದೇ, ರಾಜ್ಯಪಾಲರು, ಕೂಡಲೇ ಅಂಕಿತ ಹಾಕಬೇಕು ಒತ್ತಾಯಿಸಿದ್ದಾರೆ.

    The post ಅನುಮಾನಕ್ಕೆ ಆಸ್ಪದ ನೀಡಿದ ಒಳಮೀಸಲಾತಿ ಮಸೂದೆ ವಾಪಸ್ : ಚಂದ್ರಶೇಖರ್ appeared first on nudikarnataka.

    Click here to Read More
    Previous Article
    ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದ್ರೆ ಮಾತ್ರ ಸುಖಿರಾಜ್ಯ ಸಾಧ್ಯ- ಸಿಎಂ ಸಿದ್ದರಾಮಯ್ಯ
    Next Article
    ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? : ಪ್ರಹ್ಲಾದ್ ಜೋಷಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment