Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? : ಪ್ರಹ್ಲಾದ್ ಜೋಷಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ

    6 days ago

    ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು?, ಪಿಎಂ ಕೇರ್ ನಿಧಿಯ ಅಸಲಿ ಕಥೆಯೇನು? ಲೆಕ್ಕ ಯಾಕೆ ಕೊಡ್ತಿಲ್ಲ? ಯಾರ ಭಯ? ಪಿಎಂ ಕೇರ್‌‌ ಹೆಸರಲ್ಲಿ ಸರ್ಕಾರದ ಲಾಂಛನವನ್ನೇ ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ. ವಸೂಲಿ ರಾಜಕೀಯದ ವಕ್ತಾರರಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋ‍ಷಿ ಅವರೇ, ಈ ಹಗರಣಗಳ ಬಗ್ಗೆ‌ ಬಾಯಿ ಬಿಚ್ಚಲ್ಲವೇಕೆ? ನಿಮ್ಮವರನ್ನು ಪ್ರಶ್ನಿಸುವುದಿರಲಿ, ಈ ಪ್ರಶ್ನೆಗಳಿಗೆ ಉತ್ತರಿಸುವಾ ಪ್ರಯತ್ನವಾದರೂ ಮಾಡುವೀರಾ? ಎಂದು ದಿನೇಶ್ ಟ್ವೀಟ್ ಮಾಡಿದ್ದಾರೆ. […]

    The post ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? : ಪ್ರಹ್ಲಾದ್ ಜೋಷಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ appeared first on nudikarnataka.



    ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು?, ಪಿಎಂ ಕೇರ್ ನಿಧಿಯ ಅಸಲಿ ಕಥೆಯೇನು? ಲೆಕ್ಕ ಯಾಕೆ ಕೊಡ್ತಿಲ್ಲ? ಯಾರ ಭಯ? ಪಿಎಂ ಕೇರ್‌‌ ಹೆಸರಲ್ಲಿ ಸರ್ಕಾರದ ಲಾಂಛನವನ್ನೇ ದುರುಪಯೋಗ ಮಾಡಿದ್ದು ಯಾರ ಸ್ವಾರ್ಥಕ್ಕಾಗಿ? ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

    ವಸೂಲಿ ರಾಜಕೀಯದ ವಕ್ತಾರರಾಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋ‍ಷಿ ಅವರೇ, ಈ ಹಗರಣಗಳ ಬಗ್ಗೆ‌ ಬಾಯಿ ಬಿಚ್ಚಲ್ಲವೇಕೆ? ನಿಮ್ಮವರನ್ನು ಪ್ರಶ್ನಿಸುವುದಿರಲಿ, ಈ ಪ್ರಶ್ನೆಗಳಿಗೆ ಉತ್ತರಿಸುವಾ ಪ್ರಯತ್ನವಾದರೂ ಮಾಡುವೀರಾ? ಎಂದು ದಿನೇಶ್ ಟ್ವೀಟ್ ಮಾಡಿದ್ದಾರೆ.

    “>

     

    ಸರ್ಕಾರಿ ಉದ್ಯೋಗಿಗಳ ಕಷ್ಟದ ಹಣವನ್ನೂ ಬಿಡದೆ ‘ಪಿಎಂ ಕೇರ್’ ಹೆಸರಲ್ಲಿ ವಸೂಲಿ ಮಾಡಿದ ಮಹಾ ವಂಚಕರು ನೀವು. ಪ್ರಧಾನಿ ಹೆಸರನ್ನು ಮತ್ತು ಭಾರತ ಸರ್ಕಾರದ ಲಾಂಛನವನ್ನು ಚುನಾವಣಾ ಬಾಂಡ್‌ ಹೆಸರಿನ ‘ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ’ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ. ಈ ಅಪರಾಧ ಎಸಗಿ ಸಾವಿರಾರು ಕೋಟಿ ರೂಪಾಯಿಗಳ ಲೂಟಿ ಹೊಡೆದು ಮಾಡಿರುವ ‘ಚುನಾವಣಾ ಬಾಂಡ್’ ಹಗರಣ ದೇಶ ಕಂಡ ಅತಿದೊಡ್ಡ ರಾಜಕೀಯ ಭ್ರಷ್ಟಾಚಾರ! ಎಂದು ಬೊಟ್ಟು ಮಾಡಿದ್ದಾರೆ.

    ಹಗರಣವೇ ಅಲ್ಲದ ನ್ಯಾಷನಲ್ ಹೆರಾಲ್ಡ್ ‌ವಿಷಯ ಹಿಡಿದುಕೊಂಡು ನೈಜ ವಿಷಯಗಳಿಂದ ಜನರನ್ನು ದಿಕ್ಕು ತಪ್ಪಿಸುವವರಿಂದ, ದೇಶದಲ್ಲಿ ಲಂಚಬಾಕತನಕ್ಕೆ ಹೊಸ ಹೆಸರಿಟ್ಟ ಭ್ರಷ್ಟಾಚಾರದ ಪಿತಾಮಹರಿಂದ ನಮಗೆ ನೈತಿಕತೆಯ ಪಾಠ ಬೇಕಿಲ್ಲ. ಮೊದಲು ನಿಮ್ಮ ಲೂಟಿಯ ಇತಿಹಾಸವನ್ನು ಜನರ ಮುಂದಿರಿಸಿ…ಸಾಧ್ಯವೇ‌ ನಿಮ್ಮಿಂದಾ??!! ಎಂದು ಕಟುವಾಗಿ ಟೀಕಿಸಿದ್ದಾರೆ.

    The post ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ವಸೂಲಿ ಮಾಡಿದ್ದೆಷ್ಟು? : ಪ್ರಹ್ಲಾದ್ ಜೋಷಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ appeared first on nudikarnataka.

    Click here to Read More
    Previous Article
    ಅನುಮಾನಕ್ಕೆ ಆಸ್ಪದ ನೀಡಿದ ಒಳಮೀಸಲಾತಿ ಮಸೂದೆ ವಾಪಸ್ : ಚಂದ್ರಶೇಖರ್
    Next Article
    ಕೊರಚ ಸಮುದಾಯದ ಕುಟುಂಬಗಳಿಗೆ ತ್ವರಿತವಾಗಿ ಹಕ್ಕು ಪತ್ರ ವಿತರಣೆಗೆ ಕ್ರಮವಹಿಸಿ- ಪಲ್ಲವಿ ಜಿ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment