Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಾಜಿ ಸಂಸದೆಯ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರು: ಪ್ರಕರಣ ದಾಖಲು

    3 days ago

    ಬೆಂಗಳೂರು,ಜನವರಿ,13,2026 (www.justkannada.in): ನಕಲಿ ದಾಖಲೆ ಸೃಷ್ಟಿಸಿ ಮಾಜಿ ಸಂಸದೆ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯೆ ತೇಜಸ್ವನಿಗೌಡ ಅವರ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರನ್ನು ಬೆಂಗಳೂರು ಸಿಸಿಬಿ ( ಅಪರಾಧ ವಿಭಾಗ) ಪೊಲೀಸರು ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ. ಆರ್ ಎಂವಿ ಎರಡನೇ ಹಂತ ನಾಗಶೆಟ್ಟಿಹಳ್ಳಿಯ ಎಂ.ನಾರಾಯಣಸ್ವಾಮಿ, ಮುನಿರಾಜು.ಎಂ, ಎಂ.ಮುನಿಸ್ವಾಮಿ,  ಮಮತಾ.ಎಂ, ಸಂತೋಷ್. ಎಸ್ ಹಾಗೂ ಶ್ರೀಕಾಂತ್ ಎಂಬವರ ವಿರುದ್ದ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿನಕ್ಕೆ ಕ್ರಮ ಜರುಗಿಸಿದ್ದು ಪೂರ್ವಭಾವಿಯಾಗಿ ನೋಟಿಸ್ ನೀಡಿದ್ದಾರೆ . ಬೆಂಗಳೂರು ಆರ್.ಎಂ.ವಿ ಎರಡನೇ […]

    The post ಮಾಜಿ ಸಂಸದೆಯ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರು: ಪ್ರಕರಣ ದಾಖಲು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



    ಬೆಂಗಳೂರು,ಜನವರಿ,13,2026 (www.justkannada.in): ನಕಲಿ ದಾಖಲೆ ಸೃಷ್ಟಿಸಿ ಮಾಜಿ ಸಂಸದೆ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯೆ ತೇಜಸ್ವನಿಗೌಡ ಅವರ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರನ್ನು ಬೆಂಗಳೂರು ಸಿಸಿಬಿ ( ಅಪರಾಧ ವಿಭಾಗ) ಪೊಲೀಸರು ಬಂಧನಕ್ಕೆ ಕ್ರಮ ಜರುಗಿಸಿದ್ದಾರೆ.

    ಆರ್ ಎಂವಿ ಎರಡನೇ ಹಂತ ನಾಗಶೆಟ್ಟಿಹಳ್ಳಿಯ ಎಂ.ನಾರಾಯಣಸ್ವಾಮಿ, ಮುನಿರಾಜು.ಎಂ, ಎಂ.ಮುನಿಸ್ವಾಮಿ,  ಮಮತಾ.ಎಂ, ಸಂತೋಷ್. ಎಸ್ ಹಾಗೂ ಶ್ರೀಕಾಂತ್ ಎಂಬವರ ವಿರುದ್ದ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿನಕ್ಕೆ ಕ್ರಮ ಜರುಗಿಸಿದ್ದು ಪೂರ್ವಭಾವಿಯಾಗಿ ನೋಟಿಸ್ ನೀಡಿದ್ದಾರೆ .

    ಬೆಂಗಳೂರು ಆರ್.ಎಂ.ವಿ ಎರಡನೇ ಹಂತ, ಸಂಜಯನಗರ, ನಾಗಶೆಟ್ಟಿಹಳ್ಳಿಯ ಬಸವೇಶ್ವರ ಬಡಾವಣೆಯ ಎಂ.ನಂಜೇಗೌಡ ಅವರ ಪಿಐಡಿ ನಂ 100-566-2, ಎ‌ ಖಾತೆ ಹೊಂದಿರುವ ನಿವೇಶನ 16-07-2008 ರಂದು ಬೆಂಗಳೂರು ಹೆಬ್ಬಾಳ ಉಪನೊಂದಾಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಸಂಖ್ಯೆ ಹೆಚ್.ಬಿ.ಬಿ-654/ 2008-2009 ನೋಂದಣಿಯಾಗಿದ್ದು.

    ಈ ಬೆಲೆ ಬಾಳುವ ನಿವೇಶನದ ನಕಲಿ ದಾಖಲೆ ಸೃಷ್ಟಿಸಿದ ಎಂ.ನಾರಾಯಣಸ್ವಾಮಿ, ಮುನಿರಾಜು.ಎಂ, ಎಂ.ಮುನಿಸ್ವಾಮಿ, ಮಮತಾ.ಎಂ, ಸಂತೋಷ್. ಎಸ್ ಹಾಗೂ ಶ್ರೀಕಾಂತ್ ಅವರು 09-07-2025 ರಂದು ಗಂಗಾನಗರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ.

    ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಅಸಲಿ ದಾಖಲೆಗಳೊಂದಿಗೆ ನಿವೇಶನ ಮಾಲೀಕರ ಸಂಬಂಧಿಯಾದ ಬಿ.ಎಲ್. ರಮೇಶ್ ಅವರು ಸಿಸಿಬಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಕಬಳಿಸಿದ ಆರು ಮಂದಿಯ ಬಂಧನಕ್ಕೆ ಕ್ರಮ ಜರುಗಿಸಿದ್ದು ಅದರ ಪೂರ್ವಭಾವಿಯಾಗಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಹೈಕೋರ್ಟ್ ನ್ಯಾಯವಾದಿ ಡಿ.ಎನ್.ರಾಮಕೃಷ್ಣ ಹೇಳಿದ್ದಾರೆ.

    ನಿವೇಶನದ ನಕಲಿ ದಾಖಲೆ ಸೃಷ್ಟಿಸಿದ ಭೂಗಳ್ಳರಿಗೆ ನಿವೇಶನ ನೋಂದಣಿ ಮಾಡಿಸಿಕೊಟ್ಟ ಗಂಗಾನಗರ ಉಪನೋಂದಣಾಧಿಕಾರಿಯ ವಿರುದ್ದವು ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯವಾದಿ ಡಿ.ಎನ್.ರಾಮಕೃಷ್ಣ ಹೇಳಿದ್ದಾರೆ.

    Key words: Land thieves, former MP,  brother, land, Case, registered

    The post ಮಾಜಿ ಸಂಸದೆಯ ಸಹೋದರನ ನಿವೇಶನ ಕಬಳಿಸಿದ ಭೂಗಳ್ಳರು: ಪ್ರಕರಣ ದಾಖಲು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಸಣ್ಣ ತಪ್ಪು ಮಾಡಿದ್ರೂ ಇಡೀ ಜರ್ನಿಯೇ ಢಮಾರ್! ಸ್ಪರ್ಧಿಗಳಿಗೆ ಇನ್ಮೇಲೆ ಇರೋ ಚಾಲೇಂಜ್ ಏನು..?
    Next Article
    ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ : ಡಾ.ಕುಮಾರ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment