Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಎಸ್‌ಐಆರ್‌(SIR)ಕುರಿತು ಜಾಗೃತಿ ಸಭೆ:ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ

    1 week ago

    ದಾವಣಗೆರೆ : ದಾವಣಗೆರೆ ಜಿಲ್ಲಾ ಮುಸ್ಲಿಂ ಯುವಕರ ವೇದಿಕೆ ವತಿಯಿಂದ ನಗರದ ತಾಜ್ ಪ್ಯಾಲೆಸ್ ನಲ್ಲಿ ಎಸ್‌ ಐ ಆರ್‌ ( S I R) ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ , ಬೇರಡೆ ರಾಜ್ಯ ಗಳಲ್ಲಿ ಎಸ್‌ಐ ಆರ್‌ ಪರಿಣಾಮ ನೋಡಿದ್ದೇವೆ. ತಮಿಳನಾಡಿನಲ್ಲಿ 97 ಲಕ್ಷ ಮತದಾರರನ್ನು, ಗುಜರಾತ ಮತ್ತು ಪಶ್ಚಿಮ ಬಂಗಾಳದಲ್ಲಿ 52ಲಕ್ಷ ಸಂಶಯಾಸ್ಪದ ಮತದಾರರು ಗುರುತಿಸಿದ್ದಾರೆ. ಇತರೆ ಅನ್ಯ ರಾಜ್ಯಗಳಲ್ಲಿ 2 […]

    ದಾವಣಗೆರೆ : ದಾವಣಗೆರೆ ಜಿಲ್ಲಾ ಮುಸ್ಲಿಂ ಯುವಕರ ವೇದಿಕೆ ವತಿಯಿಂದ ನಗರದ ತಾಜ್ ಪ್ಯಾಲೆಸ್ ನಲ್ಲಿ ಎಸ್‌ ಐ ಆರ್‌ ( S I R) ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಈ ವೇಳೆ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ , ಬೇರಡೆ ರಾಜ್ಯ ಗಳಲ್ಲಿ ಎಸ್‌ಐ ಆರ್‌ ಪರಿಣಾಮ ನೋಡಿದ್ದೇವೆ. ತಮಿಳನಾಡಿನಲ್ಲಿ 97 ಲಕ್ಷ ಮತದಾರರನ್ನು, ಗುಜರಾತ ಮತ್ತು ಪಶ್ಚಿಮ ಬಂಗಾಳದಲ್ಲಿ 52ಲಕ್ಷ ಸಂಶಯಾಸ್ಪದ ಮತದಾರರು ಗುರುತಿಸಿದ್ದಾರೆ. ಇತರೆ ಅನ್ಯ ರಾಜ್ಯಗಳಲ್ಲಿ 2 ನೇ ಹಂತದ ಎಸ್‌ಐ ಆರ್‌ ಅಲ್ಲಿ ವಿಶೇಷವಾಗಿ ದಲಿತ ಮತ್ತು ಅಲ್ಪಸಂಖ್ಯಾತ, ಹಿಂದುಳಿದ ಮತದಾರರಿಗೆ ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದಲ್ಲಿ ನಮ್ಮ ಅಲ್ಪಸಂಖ್ಯಾತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಾವಣಗೆರೆ ನಗರದಲ್ಲಿ ಈ ಕಾರ್ಯಕ್ರಮ ಮಾಡಲಾಗಿದೆ. ಬಹಳ ಉತ್ತಮ ಕಾರ್ಯಕ್ರಮವಾಗಿದೆ ಎಂದರು.

    ಈ ಬಾರಿ ದಕ್ಷಿಣದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ

    ಅಲ್ಪಸಂಖ್ಯಾತ ಸಮುದಾಯ ಕಳೆದ 6 ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸಿಕೊಂಡ ಬಂದಿದೆ. ಮುಸ್ಲಿಂ ಸಮುದಾಯದ ಮತಗಳು ಹೆಚ್ಚು ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಸಮುದಾಯಕ್ಕೆ ಅವಕಾಶ ಕೊಡಬೇಕು ಎನ್ನುವ ಮಾತಗಳು ಸಭೆಯಲ್ಲಿ ಕೇಳಿ ಬಂದವು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್‌ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಯಿತು.

    Read also : ಬಾಲ್ಯ ವಿವಾಹ ಮತ್ತು ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಕ್ರಮವಹಿಸಿ :ಅಪರ್ಣಾ ಎಂ ಕೊಳ್ಳಾ

    ಇದೇ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ನಡುವಿನ  ಮನಸ್ತಾಪ ಬಿಟ್ಟು ಒಂದಾಗಿ ಹೋಗುವ ನಿರ್ಧಾರ ಕೈಗೊಂಡರು. 

    ಈ ವೇಳೆ ಪ್ರೋ. ಯೂಸುಫ್, SDPI ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್ ಅರಿಹಂತ್ , ವಕೀಲ ರಜ್ವಿ ಖಾನ್ ಸಾಬ್ ಎಸ್‌ಐಆರ್‌ (SIR) ನ ವಿಸ್ತೃತವಾಗಿ ಮಾತನಾಡಿದರು,

    ಅಂಜುಮನ್ ಎ ಇಸ್ಲಾಮಿಯಾ ಅಧ್ಯಕ್ಷ ದಾದು ಸೇಠ್, ವಕ್ಪ್‌ ಬೋರ್ಡ್ ಮಾಜಿ ಛೇರ್ಮನ್ ಸಿರಾಜ್ ಸಾಬ್, ಮಾಜಿ ಅಧ್ಯಕ್ಷರು ದೂಡ ಅಯೂಬ್ ಪೈಲ್ವಾನ್ , ರಾಜ್ಯ ವಖ್ಫ್ ಸದಸ್ಯ ತಾಹಿರ್ ಘನಿ ಸಾಬ್, ಹಲವಾರು ಪಕ್ಷಗಳ ಪದಾಧಿಕಾರಿಗಳು, ಉಲೇಮಾಗಳು, ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.

    Click here to Read More
    Previous Article
    ಇಂದು ಹಲವು ಜಿಲ್ಲೆಗಳಲ್ಲಿ ಮಳೆ : ಎಲ್ಲೆಲ್ಲಿ ಮಳೆಯಾಗಲಿದೆ…. ಇಲ್ಲಿದೆ ಮಾಹಿತಿ….
    Next Article
    ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿಯಿಂದ ಹೊರೆಕಾಣಿಕೆ- ತಂಪು ಪಾನೀಯ ವಿತರಣೆ

    Related ತಾಜಾ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment