Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಕೈಗಾರಿಕೆ ಸ್ಥಾಪನೆಗೆ ಸ್ಥಳ ಪರಿಶೀಲನೆ ; 90 ಎಕರೆ ಜಾಗ ಸಿದ್ದವಿದೆ ಎಂದ ಶಾಸಕ ರವಿಕುಮಾರ್

    1 week ago

    ಮಂಡ್ಯಕ್ಕೆ ಕೈಗಾರಿಕೆ ತರಲು ಜಾಗದ ಅವಶ್ಯಕತೆ ಇದೆ ಎಂದು ಹೇಳಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸೋಮವಾರ ಮಂಡ್ಯದ ಸಾತನೂರು ಫಾರಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ರವಿಕುಮಾರ್ ಅವರು ‘ಕೈಗಾರಿಕೆ ಸ್ಥಾಪನೆಗೆ 90 ಎಕರೆ ಜಾಗ ಸಿದ್ದವಿದೆ’ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರೊಂದಿಗೆ ಸಾತನೂರು ಫಾರಂ ಗೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಡಾ ಗೆ ಸೇರಿದ 90 ಎಕರೆ ಜಮೀನು ಮಂಡ್ಯದಲ್ಲಿ ಲಭ್ಯವಿದೆ, ಇನ್ನು […]

    The post ಮಂಡ್ಯ | ಕೈಗಾರಿಕೆ ಸ್ಥಾಪನೆಗೆ ಸ್ಥಳ ಪರಿಶೀಲನೆ ; 90 ಎಕರೆ ಜಾಗ ಸಿದ್ದವಿದೆ ಎಂದ ಶಾಸಕ ರವಿಕುಮಾರ್ appeared first on nudikarnataka.



    ಮಂಡ್ಯಕ್ಕೆ ಕೈಗಾರಿಕೆ ತರಲು ಜಾಗದ ಅವಶ್ಯಕತೆ ಇದೆ ಎಂದು ಹೇಳಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸೋಮವಾರ ಮಂಡ್ಯದ ಸಾತನೂರು ಫಾರಂ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ರವಿಕುಮಾರ್ ಅವರು ‘ಕೈಗಾರಿಕೆ ಸ್ಥಾಪನೆಗೆ 90 ಎಕರೆ ಜಾಗ ಸಿದ್ದವಿದೆ’ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ಡಾ.ಕುಮಾರ ಅವರೊಂದಿಗೆ ಸಾತನೂರು ಫಾರಂ ಗೆ ಭೇಟಿ ನೀಡಿ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಡಾ ಗೆ ಸೇರಿದ 90 ಎಕರೆ ಜಮೀನು ಮಂಡ್ಯದಲ್ಲಿ ಲಭ್ಯವಿದೆ, ಇನ್ನು 10 ಎಕರೆ ಬೇಕಾದರೆ ಭೂಸ್ವಾಧೀನ ಮಾಡಿಸಿ ಕೊಡಲಾಗುವುದು. ಆದ್ದರಿಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಜಿಲ್ಲೆಗೆ ಕೈಗಾರಿಕೆ ತರಲು ಮುಂದಾಗಬೇಕು, ಇಲ್ಲಿನ ಯುವಕರಿಗೆ ಉದ್ಯೋಗ ಒದಗಿಸಬೇಕೆಂದು ತಿಳಿಸಿದರು.

    ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯತಕತೆ ಇಲ್ಲ, ಹೆಚ್.ಡಿ.ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಜಿಲ್ಲೆಯ ಸಮಸ್ಯೆಗಳ ಅರಿವಿದೆ, ಕೈಗಾರಿಕೆ ತರುವ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ‘ನನಗೆ ಟೈಂ ಕೊಡ್ಲಿ, ನಾನು ಜಾಗ ಕೊಡ್ತೀನಿ’, ಅವರು ಬರೀ ಹೇಳಿಕೆ ನೀಡುವುದನ್ನು ಬಿಟ್ಟು ಕೈಗಾರಿಕೆ ತರಲು ಪ್ರಾಮಾಣಿಕವಾಗಿ ನಡೆದುಕೊಳ್ಳಲಿ ಎಂದರು.

    ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಂಪುಟದಲ್ಲಿಟ್ಟು, ಈ ಜಾಗವನ್ನು ಕೈಗಾರಿಕೆಗೆ ಮೀಸಲಿಡಲಾಗುವುದು, ಆದ್ದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರು ಯಾವುದೇ ವಿವಾದಗಳಿಗೆ ಆಸ್ಪದ ನೀಡದೇ ಕೈಗಾರಿಕೆ ತರಲು ಮುಂದಾಗಬೇಕು, ವಿವಾದ ಮಾಡಿಕೊಂಡಲಿ, ಕೈಗಾರಿಕೆಗಳು ಇಲ್ಲಿಗೆ ಬರುವುದಿಲ್ಲ ಎಂದ ವಾಸ್ತವ ನನಗೆ ಅರಿವಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮನ್ ಮುಲ್ ಅಧ್ಯಕ್ಷ ಶಿವಪ್ಪ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಶೀಲ್ದಾರ್ ವಿಶ್ವನಾಥ್ ಸೇರಿದಂತೆ ಮತ್ತಿತತರು ಉಪಸ್ಥಿತರಿದ್ದರು.

    The post ಮಂಡ್ಯ | ಕೈಗಾರಿಕೆ ಸ್ಥಾಪನೆಗೆ ಸ್ಥಳ ಪರಿಶೀಲನೆ ; 90 ಎಕರೆ ಜಾಗ ಸಿದ್ದವಿದೆ ಎಂದ ಶಾಸಕ ರವಿಕುಮಾರ್ appeared first on nudikarnataka.

    Click here to Read More
    Previous Article
    ಸ್ವಾಭಿಮಾನದ ಬದುಕು ಮತ್ತು ಸಮಾಜದಲ್ಲಿ ಬದಲಾವಣೆ ತರಲು ವಿದ್ಯಾವಂತರಾಗಲೇಬೇಕು- ಸಿಎಂ ಸಿದ್ದರಾಮಯ್ಯ
    Next Article
    ಬಸ್-ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತ- ಓರ್ವ ಮೃತ್ಯು,ಮೂವರು ವಿದ್ಯಾರ್ಥಿಗಳಿಗೆ ಗಾಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment