Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಯುವಜನತೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ; ಡಾ. ಚಂದ್ರಶೇಖರ್

    2 weeks ago

    ಯುವಜನತೆ ನಾನಾ ರೀತಿಯ ವ್ಯಸನಗಳಿಗೆ ಈಡಾಗುತ್ತಿರುವುದು ಆತಂಕದ ವಿಷಯವಾಗಿದೆ. ಡ್ರಗ್ಸ್ ತಂಬಾಕು ಮೊದಲಾದ ವ್ಯಸನಗಳಿಂದ ಮುಕ್ತಾರಾಗಿ ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಯುವ ಜನತೆ ಸಾಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಡಾ. ಚಂದ್ರಶೇಖರ್ ಅಭಿಪ್ರಾಯಿಸಿದರು. ಮಂಡ್ಯನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾವೇದಿಕೆ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆ – ಸಾಧಕರಿಗೆ […]

    The post ಯುವಜನತೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ; ಡಾ. ಚಂದ್ರಶೇಖರ್ appeared first on nudikarnataka.



    ಯುವಜನತೆ ನಾನಾ ರೀತಿಯ ವ್ಯಸನಗಳಿಗೆ ಈಡಾಗುತ್ತಿರುವುದು ಆತಂಕದ ವಿಷಯವಾಗಿದೆ. ಡ್ರಗ್ಸ್ ತಂಬಾಕು ಮೊದಲಾದ ವ್ಯಸನಗಳಿಂದ ಮುಕ್ತಾರಾಗಿ ಸಮಾಜದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ಯುವ ಜನತೆ ಸಾಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಡಾ. ಚಂದ್ರಶೇಖರ್ ಅಭಿಪ್ರಾಯಿಸಿದರು.

    ಮಂಡ್ಯನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾವೇದಿಕೆ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜೈ ಕರ್ನಾಟಕ ಪರಿಷತ್, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಹೊಸ ವರ್ಷಾಚರಣೆ – ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

    ಮನುಷ್ಯನಿಗೆ ಸಾಂಸ್ಕೃತಿಕ ಪ್ರಜ್ಞೆ ಬಹಳ ಮುಖ್ಯ, ಇದರಿಂದಾಗಿ ನಾಕಾರಾತ್ಮಕ ಚಿಂತನೆಗಳು ದೂರವಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ, ದೇಶದ ಬಗ್ಗೆ ಅಭಿಮಾನ ಜಾಗೃತಿ ಹೊಂದಲು ಸ್ಫೂರ್ತಿಯಾಗುತ್ತದೆ ಎಂದರು.

    ಅಲೈ. ಕೆ. ಟಿ. ಹನುಮಂತು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಇವತ್ತು ಜನತೆ ಅನೇಕ ವ್ಯಸನಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ವಿಷಯ. ಇವೆಲ್ಲರಿಂದ ಹೊರಗೆ ಬರಲ್ಲ ಬೇಕಾದರೆ ಸಾಂಸ್ಕೃತಿಕತೆ ಬೆಳೆಸಿಕೊಂಡು ಸತ್ ಚಿಂತನೆಗಳಿಂದ ಮಾತ್ರ ಸಾಧ್ಯ ಎಂದರು.

    ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಡಾ. ನಾರಾಯಣ್ ಅಭಿನಂದನಾ ಭಾಷಣ ಮಾಡಿದರು. ಲಯನ್ ಬಿ.ಎಂ ಅಪ್ಪಾಜಪ್ಪ, ಖ್ಯಾತ ವಕೀಲ ಪಿ. ಎಂ ಸೋಮಶೇಖರ್ ,ಮನೋ ವೈದ್ಯ ಡಾ. ಟಿ. ಎಸ್. ಸತ್ಯನಾರಾಯಣ ರಾವ್. ಕರ್ನಾಟಕ ರಕ್ಷಣಾ ವೇದಿಕೆಯ ಮುಖ್ಯಸ್ಥ ಕೆ ಟಿ ಶಂಕರೇಗೌಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ವರಾಹ ವಿಠ್ಠಲ ದಾಸರು, ಡಾ. ಅನುಪಮಾ ವಿವೇಕಾನಂದ, ಹಾಗೂ ಪೂಜ್ಯನ್ ಸಾರತ್ಯ ಅವರುಗಳನ್ನು ಗೌರವಿಸಿ ಅಭಿನಂದಿಸಲಾಯಿತು.

    ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯ ಡಾ. ಬಿ.ಕೆ.ಸುರೇಶ್, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹ ಸ್ವಾಮಿ, ಕಾರ್ಯಾಧ್ಯಕ್ಷ ಡಾ. ಅಶ್ವಿನ್ ನಾರಾಯಣ್, ಕನ್ನಿಕಾ ಶಿಲ್ಪಾ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್.ಬಿ. ರಾಮಕೃಷ್ಣ, ಸಂಭ್ರಮ ಫಾರ್ಮಸಿ ಕಾಲೇಜಿನ ಅಧ್ಯಕ್ಷ ಸ್ವಾಮಿ ಭಾಗವಹಿಸಿದ್ದರು.

    ರಮೇಶ್ ಬಡಿಗೇರ್ ಪ್ರಾರ್ಥಿಸಿ, ವೇದಿಕೆಯ ಅಧ್ಯಕ್ಷ ವಿದ್ಯಾಶಂಕರ್ ಸ್ವಾಗತಿಸಿದರು.

    The post ಯುವಜನತೆ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಿದೆ ; ಡಾ. ಚಂದ್ರಶೇಖರ್ appeared first on nudikarnataka.

    Click here to Read More
    Previous Article
    ದಾವಣಗೆರೆ | ದಕ್ಷಿಣ ವಿಧಾನಸಭಾ ಕ್ಷೇತ್ರ ಉಪ ಚುನಾವಣಾ ಕಣಕ್ಕೆ ಶಾಮನೂರು‌ ಶಿವಶಂಕರಪ್ಪ ಮಗನಾ..? ಮೊಮ್ಮಗನಾ..?
    Next Article
    ನೂತನ ರಥಕ್ಕೆ ಆವರಗೊಳ್ಳ ಹಿರೇಮಠದ ಶ್ರೀಗಳಿಂದ ಕಳಸಾರೋಹಣ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment