Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಎರಡು ವರ್ಷಕ್ಕೊಮ್ಮೆ ನಿಯತ್ತಾಗಿ ಅಧಿಕಾರ ಹಸ್ತಾಂತರಿಸುವ ಉಡುಪಿ ಪರ್ಯಾಯ ಜಗತ್ತಿಗೆ ಮಾದರಿ- ಪುತ್ತಿಗೆಶ್ರೀ

    6 days ago

    ಉಡುಪಿ: ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಪುರಪ್ರವೇಶ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ ತೀರ್ಥ...

    The post ಎರಡು ವರ್ಷಕ್ಕೊಮ್ಮೆ ನಿಯತ್ತಾಗಿ ಅಧಿಕಾರ ಹಸ್ತಾಂತರಿಸುವ ಉಡುಪಿ ಪರ್ಯಾಯ ಜಗತ್ತಿಗೆ ಮಾದರಿ- ಪುತ್ತಿಗೆಶ್ರೀ first appeared on Udupi Times.



    ಉಡುಪಿ: ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಪುರಪ್ರವೇಶ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

    ಸಂಪ್ರದಾಯದಂತೆ ತೀರ್ಥ ಕ್ಷೇತ್ರಗಳ ದರ್ಶನ ಮುಗಿಸಿ ಉಡುಪಿಯ ಕಡಿಯಾಳಿಗೆ ತಲುಪಿದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು. ಅಲ್ಲಿ ಶ್ರೀಮಹಿಷ ಮರ್ದಿನಿ ದೇವರ ದರ್ಶನ ಪಡೆದರು. ಕಡಿಯಾಳಿ ನಿರ್ಮಿಸಲಾದ ವೇದಿಕೆಯಲ್ಲಿ ಸ್ವಾಮೀಜಿ, ಗಣ್ಯರ ಸಮ್ಮುಖದಲ್ಲಿ ಭವ್ಯ ಶೋಭಾಯಾತ್ರೆಯನ್ನು ವೀಕ್ಷಿಸಿದರು.

    ಕಡಿಯಾಳಿಯಿಂದ ಹೊರಟ ಪುರಪ್ರವೇಶ ಮೆರವಣಿಗೆ, ಕಲ್ಸಂಕ, ಸಿಟಿಬಸ್ ನಿಲ್ದಾಣ, ಹನುಮಾನ್ ವೃತ್ತ, ಕನಕದಾಸ ರಸ್ತೆ ಮೂಲಕ ಕೃಷ್ಣ ಮಠದ ರಥಬೀದಿ ತಲುಪಿತು. ಸ್ಥಳೀಯ ಜಾನಪದ ತಂಡಗಳು, ವಿವಿಧ ಕಲಾತಂಡ, ಸಾಂಸ್ಕೃತಿಕ ತಂಡಗಳು ಹಾಗೂ ವಿಶೇಷ ಟ್ಯಾಬ್ಲೋಗಳು ಮೆರವಣಿಗೆಗೆ ಮೆರುಗು ನೀಡಿದವು.
    ನಂತರ ಸ್ವಾಮೀಜಿ ವಿಶೇಷ ಅಲಂಕೃತ ವಾಹನದಲ್ಲಿ ಪುರಪ್ರವೇಶ ಮಾಡಿದರು. ರಥಬೀದಿಯಲ್ಲಿ ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಪಡೆದ ಬಳಿಕ ಅವರು, ಶ್ರೀಚಂದ್ರಮೌಳೀಶ್ವರ, ಶ್ರೀ ಅನಂತೇಶ್ವರ ಹಾಗೂ ಶ್ರೀಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದರು.

    ಶಿರೂರು ಮಠದ ವತಿಯಿಂದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪುರಪ್ರವೇಶ ಅಂಗವಾಗಿ ಪೇಜಾವರ ಮಠದ ಎದುರಿನ ಪೂರ್ಣಪ್ರಜ್ಞ ವೇದಿಕೆಯಲ್ಲಿ ಶುಕ್ರವಾರ ಶಿರೂರು ಶ್ರೀಪಾದರಿಗೆ ನಗರಸಭೆ ವತಿಯಿಂದ ನಡೆದ ಪೌರ ಸನ್ಮಾನ ಸಮಾರಂಭ ನಡೆಯಿತು.

    ಬಳಿಕ ಮಾತನಾಡಿದ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, “ಎಷ್ಟೇ ಒಳ್ಳೆಯ ಸರಕಾರ, ಮಂತ್ರಿಗಳಿದ್ದರೂ ದೇವಾನುಗ್ರಹ ಅಗತ್ಯವಿದ್ದು, ಎರಡು ವರ್ಷಕ್ಕೊಮ್ಮೆ ನಿಯತ್ತಾಗಿ ಅಧಿಕಾರ ಹಸ್ತಾಂತರದ ಉಡುಪಿ ಪರ್ಯಾಯ ಜಗತ್ತಿಗೆ ಅಪೂರ್ವ ಮಾದರಿ,” ಎಂದರು.

    “ಉಡುಪಿ ಪರ್ಯಾಯ ಮಾದರಿಯಲ್ಲಿ ಒಂದೊಂದು ಪಕ್ಷಕ್ಕೆ ಎರಡೆರಡು ವರ್ಷಗಳ ಅಧಿಕಾರ ಕೊಟ್ಟರೆ ಪಕ್ಷಾಂತರ, ಜಗಳ, ಕುದುರೆ ವ್ಯಾಪಾರ ನಿಲ್ಲಬಹುದು. ಶ್ರೀಕೃಷ್ಣನ ಆರಾಧನೆಯಲ್ಲಿ ಸಮಷ್ಟಿ ಚಿಂತನೆ, ಜಗತ್ತಿನ ಕ್ಷೇಮದ ಆಶಯವಿದೆ. ಬ್ರಹ್ಮರಥೋತ್ಸವ ಸೇವೆ ಒಬ್ಬರು ಕೊಟ್ಟರೂ ರಥವನ್ನು ಭಕ್ತರೆಲ್ಲರೂ ಎಳೆಯುವಂತೆ ಕೃಷ್ಣನ ಪರ್ಯಾಯ ಭಕ್ತರಿಂದ ನಡೆಯಬೇಕು,” ಎಂದರು.

    ಶಿರೂರು ಶ್ರೀವೇದವರ್ಧನ ತೀರ್ಥರಿಗೆ ನಗರಸಭೆ ವತಿಯಿಂದ ರೇಷ್ಮೆ ಪೇಟ, ಪುಷ್ಪ ದೃಷ್ಟಿಯ ಗೌರವ ಸಲ್ಲಿಸಲಾಯಿತು. ಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಒಂದೇ ಗೆರೆಯಲ್ಲಿ ರಚಿಸಿದ ಚಿತ್ರವನ್ನು ಶಿರೂರು ಶ್ರೀಗಳಿಗೆ ಅರ್ಪಿಸಲಾಯಿತು. ಯುಗಪುರುಷ ಕಿನ್ನಿಗೋಳಿ ವತಿಯಿಂದ ಪರ್ಯಾಯ 79ನೇ ಸಂಚಿಕೆ ಬಿಡುಗಡೆ ಮಾಡಲಾಯಿತು. ಸಾಹಿತಿ ಡಾ.ವಸಂತ ಭಾರದ್ವಾಜ್ ರಚಿತ, ಮಧೂರು ನೇತೃತ್ವದಲ್ಲಿ ಪಿ.ಬಾಲಸುಬ್ರಹ್ಮಣ್ಯಂ ಗಾಯಕರು ಹಾಡಿದ ಪರ್ಯಾಯ

    ತದನಂತರ ರಥಬೀದಿಯಲ್ಲಿ ಹಾಕಲಾದ ವೇದಿಕೆಯಲ್ಲಿ ಉಡುಪಿ ನಗರಸಭೆಯ ವತಿಯಿಂದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಿರೂರು ಸ್ವಾಮೀಜಿ ಅವರನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಪೌರ ಸಮ್ಮಾನ ಮಾಡಿದರು.

    ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್‌ ಸುವರ್ಣ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಮಠದ ದಿವಾನರಾದ ಡಾ.ಉದಯ ಕುಮಾರ ಸರಳತ್ತಾಯ, ಕಾರ್ಯದರ್ಶಿ ಮೋಹನ್ ಭಟ್, ಕೋಶಾಧಿಕಾರಿ ಜಯ ಪ್ರಕಾಶ್ ಕೆದ್ಲಾಯ, ಪೌರಾಯುಕ್ತ ಮಹಾಂತೇಶ್ ಹಂಗರಗಿ ಉಪಸ್ಥಿತರಿದ್ದರು.

    The post ಎರಡು ವರ್ಷಕ್ಕೊಮ್ಮೆ ನಿಯತ್ತಾಗಿ ಅಧಿಕಾರ ಹಸ್ತಾಂತರಿಸುವ ಉಡುಪಿ ಪರ್ಯಾಯ ಜಗತ್ತಿಗೆ ಮಾದರಿ- ಪುತ್ತಿಗೆಶ್ರೀ first appeared on Udupi Times.

    Click here to Read More
    Previous Article
    ಮಣಿಪಾಲ: ಬೈಕ್ ಸ್ಕಿಡ್- ನವವಿವಾಹಿತ ಸ್ಥಳದಲ್ಲೇ ಮೃತ್ಯು
    Next Article
    ಸಿಡಿ ಫ್ಯಾಕ್ಟರಿ ಇದ್ದಿದ್ದೇ ಪದ್ಮನಾಭನಗರ, ಹೊಳೆನರಸೀಪುರದಲ್ಲಿ : ಮಾಜಿ ಸಂಸದ ಡಿಕೆ ಸುರೇಶ್ ಟಾಂಗ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment