Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಜನ ನಾಯಗನ್ ಸಿನಿಮಾ ರಿಲೀಸ್‌ಗೆ ಸೆನ್ಸಾರ್ ಮಂಡಳಿಯ ಜೊತೆ ಜಗಳವಿಲ್ಲ-ಕೆವಿಎನ್‌ ಮಾಲೀಕ ವೆಂಕಟನಾರಾಯಣ್

    1 day ago

    ಜನ ನಾಯಗನ್ ಸಿನಿಮಾ ರಿಲೀಸ್ ತೊಡಕಿನಿಂದ  ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಪರಿಸ್ಥಿತಿ ನಿರ್ಮಾಪಕರಿಗೆ ಬಂದಿದೆ. ಸೆನ್ಸಾರ್ ಸರ್ಟಿಫಿಕೇಟ್ ವಿವಾದದ ಬಗ್ಗೆ ಜನ ನಾಯಗನ್ ಸಿನಿಮಾ ನಿರ್ಮಾಪಕ ಕೆ.ವೆಂಕಟನಾರಾಯಣ್ ಆತ್ಮೀಯರ ಜೊತೆ ಮಾತನಾಡಿದ್ದಾರೆ. ವಿವಾದ ಏನು ಎನ್ನುವುದರ ಮಾತುಕತೆಯ ವಿಡಿಯೋ ಈಗ ಲೀಕ್ ಆಗಿದೆ. ಆದರೇ, ಈ ವಿಡಿಯೋವನ್ನು ಕೆ.ವೆಂಕಟನಾರಾಯಣ್ ಅವರು ಬಿಡುಗಡೆ ಮಾಡಿಲ್ಲ.  ಬೇರೆ ಯಾರೋ ವಿಡಿಯೋವನ್ನು ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ. 
    ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇರುವ ಬಗ್ಗೆ ನಾಳೆ ಸುಪ್ರೀಂಕೋರ್ಟ್ ನಲ್ಲಿ ಕೇಸ್ ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರ ಆಕ್ಷೇಪಣೆಯಿಂದ  ಜನ  ನಾಯಗನ್  ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. 
    ಕೆವಿಎನ್ ಸಂಸ್ಥೆ ಮಾಲೀಕರಾದ ವೆಂಕಟ ನಾರಾಯಣ್ ಸಮಸ್ಯೆ ಹೇಳಿಕೊಂಡ ವಿಡಿಯೋ ಬಹಿರಂಗವಾಗಿದೆ. ಸೆನ್ಸಾರ್ ಮಂಡಳಿಯ ಜೊತೆ ನಮಗೆ ಯಾವುದೇ ಜಗಳವಿಲ್ಲ. ನಾನೊಬ್ಬ ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ.  ವ್ಯವಹಾರದ ಮೂಲಕ ಆರ್ಥಿಕ ಅಭಿವೃದ್ದಿ ಮಾಡುವುದಷ್ಟೇ ನಮ್ಮ ಕೆಲಸ ಎಂದು ಕೆವಿಎನ್ ಸಂಸ್ಥೆ ಮಾಲೀಕ ವೆಂಕಟನಾರಾಯಣ್ ಹೇಳಿದ್ದಾರೆ. 

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

    Click here to Read More
    Previous Article
    ಜ. 22ರಿಂದ ವಿಶೇಷ ಅಧಿವೇಶನ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ
    Next Article
    ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment