
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಗುಜರಾತ್ನ ಬರೋಡಾದಲ್ಲಿ ನಡೆಯಲಿರುವ ಈ ಪಂದ್ಯ, ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದಾಗಿದೆ. 2027 ಏಕದಿನ ವಿಶ್ವಕಪ್ಗೆ ಈ ಸರಣಿಯಿಂದಲೇ ತಯಾರಿ ಶುರುವಾಗಲಿದೆ. ಏಕದಿನ ವಿಶ್ವಕಪ್ಗೂ ಮುನ್ನ ಕೋರ್ ಟೀಮ್ ಕಟ್ಟೋಕೆ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಂತರ ಇದೀಗ ಟೀಮ್ ಇಂಡಿಯಾ ನ್ಯೂಜಿಲೆಂಡ್ ಚಾಲೆಂಜ್ಗೆ ಭರ್ಜರಿ ತಯಾರಿ ನಡೆಸಿಕೊಂಡಿದೆ. ಕಿವೀಸ್ನ ಯುವ ಸೇನೆಯನ್ನ ವೈಟ್ವಾಶ್ ಮಾಡಲು ಪಣ ತೊಟ್ಟಿರುವ ಶುಭ್ಮನ್ ಗಿಲ್ ಪಡೆ, ಸರಣಿ ಕ್ಲೀನ್ ಸ್ವೀಪ್ ಮಾಡೋ ಲೆಕ್ಕಾಚಾರದಲ್ಲಿದೆ. ಆ ಮೂಲಕ ತವರು ಅಭಿಮಾನಿಗಳಿಗೆ ಫುಲ್ ಎಂಟರ್ಟೈನ್ಮೆಂಟ್ ನೀಡೋ ವಿಶ್ವಾಸದಲ್ಲಿದೆ.
ಈ ವರ್ಷ ಟೀಮ್ ಇಂಡಿಯಾಕ್ಕೆ, ಇದೇ ಮೊದಲ ಇಂಟರ್ನ್ಯಾಷನಲ್ ಅಸೈನ್ಮೆಂಟ್. ಹೊಸ ವರ್ಷ, ಹೊಸ ಸವಾಲು, ಹೊಸ ಉತ್ಸಾಹದೊಂದಿಗೆ ಮೆನ್-ಇನ್-ಬ್ಲೂ ಪಡೆ ಇದೆ. ಅದ್ರಲ್ಲೂ ಅನುಭವಿ ಮತ್ತು ಸೂಪರ್ಸ್ಟಾರ್ ಆಟಗಾರರು ಏಕದಿನ ತಂಡಕ್ಕೆ ಮರಳಿರೋದು, ತಂಡದ ಉತ್ಸಾಹದ ಜೊತೆಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಹಿರಿಯರ ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.
ಇದನ್ನೂ ಓದಿ: ತವರಿಗಾಗಿ ಕಾದು ಪರದಾಡಿದ ಆರ್ಸಿಬಿ.. ಈಗ ಮತ್ತೆರಡು ಮೈದಾನಗಳ ಮೇಲೆ ಕಣ್ಣು..!
/fit-in/580x348/filters:format(webp)/newsfirstlive-kannada/media/media_files/2025/12/23/gill-2-2025-12-23-08-36-29.jpg)
ರೋಹಿತ್, ಗಿಲ್ ಮಾಡ್ತಾರಾ ಕಮಾಲ್..?
ಆಸಿಸ್ ಏಕದಿನ ಸರಣಿಯಲ್ಲಿ ಶತಕ, ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ 2 ಅರ್ಧಶತಕಗಳನ್ನ ಸಿಡಿಸಿರುವ ರೋಹಿತ್ ಶರ್ಮಾ, ವಿಜಯ್ ಹಜಾರೆ ಟೂರ್ನಿಯಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಸೌತ್ ಆಫ್ರಿಕಾ ಏಕದಿನ ಸರಣಿಗೆ ಅಲಭ್ಯರಾಗಿದ್ದ ಕ್ಯಾಪ್ಟನ್ ಗಿಲ್, ಇದೀಗ ಏಕದಿನ ತಂಡವನ್ನ ಕೂಡಿಕೊಂಡಿದ್ದಾರೆ. ಆದ್ರೆ ಗಿಲ್ ಫಾರ್ಮ್, ಟೀಮ್ ಮ್ಯಾನೇಜ್ಮೆಂಟ್ಗೆ ಚಿಂತೆ ಉಂಟುಮಾಡಿದೆ.
ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಡ್ರೀಮ್ ಫಾರ್ಮ್ನಲ್ಲಿ ರನ್ ಕಲೆಹಾಕ್ತಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧವೂ ಅದೇ ಫಾರ್ಮ್ ಮುಂದುವರೆಸಬೇಕು. ಕೊಹ್ಲಿ ವಿರಾಟ ರೂಪ ತೋರಿಸಿದ್ರೆ, ಕಿವೀಸ್ ಉಡೀಸ್ ಆಗೋದ್ರಲ್ಲಿ ಎರಡು ಮಾತಿಲ್ಲ.
ಮಿಡಲ್ ಆರ್ಡರ್ನಲ್ಲಿ ಕಣಕ್ಕಿಳಿಯೋರು ಯಾಱರು..?
ಸಿಡ್ನಿ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಉಪನಾಯಕ ಶ್ರೇಯಸ್ ಅಯ್ಯರ್ ಇದೀಗ ಸಂಪೂರ್ಣ ಚೇತರಿಸಿಕೊಂಡು ರಾಷ್ಟ್ರೀಯ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಶ್ರೇಯಸ್ ಉತ್ತಮ ಪ್ರದರ್ಶನ ನೀಡಿ, ಫಿಟ್ನೆಸ್ ಮತ್ತು ಫಾರ್ಮ್ ಕಂಡುಕೊಂಡಿದ್ದಾರೆ. ಕೆ.ಎಲ್.ರಾಹುಲ್ಗೆ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ನೀಡಲಾಗಿದೆ. ಏಕದಿನ ಸರಣಿಯಲ್ಲಿ ಆರ್ಡಿನರಿ ಪರ್ಫಾಮೆನ್ಸ್ ನೀಡ್ತಿರುವ ರಾಹುಲ್ ಬ್ಯಾಟ್ನಿಂದ ಬಿಗ್ ಸ್ಕೋರ್ ನಿರೀಕ್ಷಿಸಲಾಗ್ತಿದೆ.
ಇದನ್ನೂ ಓದಿ: ಹಲ್ಚಲ್ ಎಬ್ಬಿಸಿದ RCB ಮಾಜಿ ಸ್ಟಾರ್ನ ಚಾಟ್ಗಳು..!
/fit-in/580x348/filters:format(webp)/newsfirstlive-kannada/media/media_files/2025/11/12/rohit-kohli-2025-11-12-19-37-21.jpg)
ಮೀಡಿಯಮ್ ಪೇಸರ್ ನಿತೀಶ್ ಕುಮಾರ್ ರೆಡ್ಡಿ, ಎಡಗೈ ಸ್ಪಿನ್ನರ್ ರವಿಂದ್ರ ಜಡೇಜಾ ಮತ್ತು ಆಫ್ಸ್ಪಿನ್ನರ್ ವಾಶಿಂಗ್ಟನ್ ಸುಂದರ್, ಈ ತ್ರಿಮೂರ್ತಿಗಳು ನ್ಯೂಜಿಲೆಂಡ್ ವಿರುದ್ಧ ಆಡಲಿರುವ ತ್ರಿವಳಿ ಆಲ್ರೌಂಡರ್ಸ್. ಮೂವರು ಕ್ವಾಲಿಟಿ ಆಲ್ರೌಂಡರ್ಸ್ ಆಗಿರೋದ್ರಿಂದ, ತಂಡಕ್ಕೆ ದೊಡ್ಡ ಲಾಭನೇ. ಬ್ಯಾಟ್, ಬಾಲ್ನಿಂದ ಕಾಂಟ್ರಿಬ್ಯೂಟ್ ಮಾಡೋ ಇವರು, ತಂಡದ ಮ್ಯಾಚ್ ವಿನ್ನರ್ಸ್ ಸಹ ಹೌದು.
ಆರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಇಬ್ಬರು ತಂಡದ ಫ್ರಂಟ್ಲೈನ್ ಪೇಸರ್ಸ್. ಆದ್ರೆ ಮೂರನೇ ವೇಗಿಯಾಗಿ ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಟಾಸ್ ನಡೆಯೋದು ಪಕ್ಕಾ. ಮತ್ತೊಂದೆಡೆ ಕುಲ್ದೀಪ್ ಯಾದವ್ ಏಕೈಕ ಸ್ಪಿನ್ ಸ್ಪೆಷಲಿಸ್ಟ್, ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳೋ ಆಟಗಾರನಾದ್ದಾರೆ.
ಬರೋಡಾದಲ್ಲಿ ನ್ಯೂಜಿಲೆಂಡ್ ತಂಡವನ್ನ ಬಗ್ಗುಬಡಿಯೋದೇ ಟೀಮ್ ಇಂಡಿಯಾ ಗುರಿಯಾಗಿದೆ. ಪ್ರಮುಖ ಆಟಗಾರರಿಲ್ಲದ ಕಿವೀಸ್ ತಂಡ, ಬಲಿಷ್ಟ ಟೀಮ್ ಇಂಡಿಯಾಕ್ಕೆ ಸುಲಭವಾಗಿ ಶರಣಾಗುತ್ತಾ..? ಅಥವಾ ಟಫ್ ಫೈಟ್ ನೀಡುತ್ತಾ ಅನ್ನೋದನ್ನ ಕಾದುನೋಡೋಣ.
ಇದನ್ನೂ ಓದಿ: ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್ಸ್ಟ್ರೈಕ್.. 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
Previous Article
ಬೆತ್ತಲೆ ಓಡಾಟ, ಸೈಕೋ ಪತಿ ಕೇಸ್ಗೆ ಟ್ವಿಸ್ಟ್; ಪ್ರಕರಣಕ್ಕೆ ರೋಚಕ ತಿರುವು ಕೊಟ್ಟ ಮೂರನೇ ಪತಿ..!
Next Article
ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್ಸ್ಟ್ರೈಕ್.. 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!