Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಉಡುಪಿ: ಗಾಂಧಿ ಆಸ್ಪತ್ರೆಯಲ್ಲಿ ಕಾಗದ ರಹಿತ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ

    2 weeks ago

    ಉಡುಪಿ: ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ...

    The post ಉಡುಪಿ: ಗಾಂಧಿ ಆಸ್ಪತ್ರೆಯಲ್ಲಿ ಕಾಗದ ರಹಿತ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ first appeared on Udupi Times.



    ಉಡುಪಿ: ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳು ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಸ್ವಾಮೀಜಿಗಳು,ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವ ಮೂಲಕ ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು. ಕಾಗದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ ಎಂದು ಹೇಳಿ, ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆಯನ್ನು ಅಭಿನಂದಿಸಿದರು.

    ಕಾರ್ಯಕ್ರಮದಲ್ಲಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಹಾಗೂ ಅವರ ಪತ್ನಿ ಲಕ್ಷ್ಮಿ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವ್ಯಾಸರಾಜ ತಂತ್ರಿ ಅವರು ಕಾರ್ಯಕ್ರಮದ ಪರಿಚಯ ಭಾಷಣ ನೀಡಿ, ಗಣ್ಯರನ್ನು ಸ್ವಾಗತಿಸಿದರು.

    ಈ ಉದ್ಘಾಟನಾ ಸಮಾರಂಭದಲ್ಲಿ ಐಎಂಎ ಅಧ್ಯಕ್ಷ ಡಾ.ಅಶೋಕ್ ಕುಮಾರ್ ಕಾಮತ್, ಎಪಿಐ ಅಧ್ಯಕ್ಷ ಡಾ.ಸುರೇಶ್ ಹೆಗಡೆ, ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂಧನ ನಾಯಕ್, ಹಿರಿಯ ವೈದ್ಯರಾದ ಡಾ. ಚಂದ್ರಶೇಖರ್ ಅಡಿಗ, ಡಾ. ಆರ್.ಎನ್. ಭಟ್, ಡಾ. ಅಶೋಕ್ ಕುಮಾರ್ ವೈ.ಜಿ., ಹೃದಯ ರೋಗ ತಜ್ಞ ಡಾ.ವಿಷುಕುಮಾರ್, ಡಾ.ಕಿರಣ್ ಕುಮಾರ್ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಗಳು ಡಿಜಿಟಲ್ ದಾಖಲೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಡಿ-ಸ್ಕ್ರೈಬ್ ಸಾಫ್ಟ್‌ವೇರ್‌ನ ಸಹ ಸಂಸ್ಥಾಪಕ ಅಕ್ಷಯ ವಿ. ನಾಯಕ್ ಹಾಗೂ ಕಿರಣ್ ರಾವ್ ಅವರಿಗೆ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ಹಿರಿಯರಾದ ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರೀ, ದಾಮೋದರ ಭಟ್ ರವರು ಹಾಗೂ ಉಡುಪಿಯ ರಾಘವೇಂದ್ರ ಮಠದ ವ್ಯವಸ್ಥಾಪಕ ಜಯತೀರ್ಥ ಉಪಸ್ಥಿತರಿದ್ದರು

    ಕಾರ್ಯಕ್ರಮವನ್ನು ಯೂಸುಫ್ ರವರು ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಜ್ಜುಗೊಳಿಸಿದರು. ಕರ್ತವ್ಯ ನಿರತ ವೈದ್ಯರು ಹಾಗೂ ರೋಗಿಗಳ ಬಂಧುಗಳು ಸಾಕ್ಷಿಯಾಗಿ ಕಂಡು ಸಂಭ್ರಮಿಸಿದರು.

    PRANA-CARE ಪೇಪರ್‌ಲೆಸ್ IPD ವ್ಯವಸ್ಥೆಮಾಹಿತಿ: ಗಾಂಧಿ ಆಸ್ಪತ್ರೆಯಲ್ಲಿ PRANA-CARE – Paperless Record & Admission for Nursing & Assisted CARE ಎಂಬ ನಿಜವಾದ ಅರ್ಥದ ಪೇಪರ್‌ಲೆಸ್ ಒಳರೋಗಿ (IPD) ದಾಖಲೆ ವ್ಯವಸ್ಥೆಯ ಅನುಷ್ಠಾನ ಕುರಿತು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಜ.01ರಂದು ನಡೆಯಿತು.

    ಈ PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯನ್ನು ಮಂತ್ರಾಲಯ ಮಠದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರು ಡಿ.27 ರಂದು ಉದ್ಘಾಟಿಸಿದ್ದರು. ಅದರ ಮುಂದುವರಿದ ಭಾಗವಾಗಿ, ವ್ಯವಸ್ಥೆಯ ಕಾರ್ಯವಿಧಾನ, ವೈಶಿಷ್ಟ್ಯಗಳು ಹಾಗೂ ಪ್ರಯೋಜನಗಳ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಅವರು ವಹಿಸಿದ್ದರು. ಅವರು ಮಾತನಾಡಿ ನರ್ಸಿಂಗ್ ಕೇರ್ ನ ಪ್ರಾಮುಖ್ಯತೆ ಒತ್ತಿ ಹೇಳಿದರು

    ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಅವರು ಪರಿಚಯ ಭಾಷಣವನ್ನು ನೀಡಿ, ಕೇವಲ ಕಾಗದಗಳನ್ನು ಸ್ಕ್ಯಾನ್ ಮಾಡುವ ಡಿಜಿಟಲೀಕರಣ ಮತ್ತು PRANA-CARE ಮೂಲಕ ಜಾರಿಗೆ ತಂದಿರುವ ನಿಜವಾದ ಪೇಪರ್‌ಲೆಸ್ IPD ವ್ಯವಸ್ಥೆಯ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ವಿವರಿಸಿದರು. PRANA-CARE ವ್ಯವಸ್ಥೆಯಲ್ಲಿ ರೋಗಿ ದಾಖಲಾಗುವ ಕ್ಷಣದಿಂದಲೇ ಎಲ್ಲಾ ವೈದ್ಯಕೀಯ, ನರ್ಸಿಂಗ್ ಹಾಗೂ ಚಿಕಿತ್ಸಾ ದಾಖಲಾತಿಗಳು ನೇರವಾಗಿ ಡಿಜಿಟಲ್ ರೂಪದಲ್ಲೇ ಸೃಜಿಸಲಾಗುತ್ತವೆ ಎಂದು ಅವರು ವಿವರಿಸಿದರು.

    D-Scribe ಸಾಫ್ಟ್‌ವೇರ್‌ನ ಸಹ-ಸ್ಥಾಪಕ ಅಕ್ಷಯ್ ವಿ. ನಾಯಕ್ ಅವರು PRANA-CARE ವ್ಯವಸ್ಥೆಯ ತಾಂತ್ರಿಕ ಪ್ರಸ್ತುತಿಯನ್ನು ನೀಡಿದರು. ಈ ವೇಳೆ ವ್ಯವಸ್ಥೆಯ ಕಾರ್ಯಕ್ಷಮತೆ, ರಿಯಲ್ ಟೈಮ್ ಡಾಕ್ಯುಮೆಂಟೇಶನ್, ಚಿಕಿತ್ಸಾ ನಿರಂತರತೆ, ದೋಷರಹಿತ ದಾಖಲಾತಿ ಹಾಗೂ ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ವಿವರಿಸಿದರು.

    IMA ಅಧ್ಯಕ್ಷ ಡಾ.ಅಶೋಕ್ ಕುಮಾರ್ ಅವರು ಮಾತನಾಡಿ, PRANA-CARE ಮಾದರಿಯಂತಹ ಪೇಪರ್‌ಲೆಸ್ ವ್ಯವಸ್ಥೆಗಳು ಭವಿಷ್ಯದ ಆರೋಗ್ಯ ಸೇವೆಗೆ ದಿಕ್ಕು ತೋರಿಸುತ್ತವೆ ಎಂದು ಅಭಿಪ್ರಾಯಪಟ್ಟರು. ಸುಬ್ರಹ್ಮಣ್ಯ ಭಟ್ ಅವರು ಶುಭಾಶಯ ಭಾಷಣ ನೀಡಿ, ಪರಿಸರ ಸಂರಕ್ಷಣೆ ಹಾಗೂ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಿರುವ ಈ ಪ್ರಯತ್ನವನ್ನು ಶ್ಲಾಘಿಸಿದರು.

    ಈ ಕಾರ್ಯಕ್ರಮವನ್ನು ಸಲಹೆಗಾರ ವೈದ್ಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದು, PRANA-CARE ಪೇಪರ್‌ಲೆಸ್ IPD ವ್ಯವಸ್ಥೆಯ ಕಾರ್ಯವಿಧಾನ ಹಾಗೂ ಅದರ ಲಾಭಗಳ ಬಗ್ಗೆ ಸಮಗ್ರ ಒಳನೋಟವನ್ನು ನೀಡಲಾಯಿತು.

    PRANA-CARE ವ್ಯವಸ್ಥೆಯ ಮೂಲಕ ಗಾಂಧಿ ಆಸ್ಪತ್ರೆ ಪರಿಸರ ಸಂರಕ್ಷಣೆ, ದಾಖಲೆಗಳ ನಿಖರತೆ, ಚಿಕಿತ್ಸಾ ನಿರಂತರತೆ ಹಾಗೂ ಆಧುನಿಕ ಆರೋಗ್ಯ ಸೇವೆಯತ್ತ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

    The post ಉಡುಪಿ: ಗಾಂಧಿ ಆಸ್ಪತ್ರೆಯಲ್ಲಿ ಕಾಗದ ರಹಿತ ಡಿಜಿಟಲ್ ದಾಖಲೆ ವ್ಯವಸ್ಥೆ ಉದ್ಘಾಟನೆ first appeared on Udupi Times.

    Click here to Read More
    Previous Article
    ವಿಜಯಪುರ | ಚೇಂಜ್ ಮೇಕರ್ಸ್ ಪ್ರಶಸ್ತಿ ಡಾ . ಭುವನೇಶ್ವರಿ ಕಾಂಬಳೆ ಆಯ್ಕೆ
    Next Article
    ಸಮಾಜ ಸೇವಕ,ಲೇಖಕ ಸಿರಾಜ್ ಮಲ್ಪೆ ನಿಧನ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment