Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಆಹಾರ ಧಾನ್ಯಗಳ ಎತ್ತುವಳಿ – ವಿತರಣೆಯಲ್ಲಿ ವಿಳಂಬ ಸಲ್ಲದು ; ಡಾ.ಕುಮಾರ

    1 week ago

    ಆಹಾರ ಧಾನ್ಯಗಳ ಎತ್ತುವಳಿ ಹಾಗೂ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಸಗಟು ಹಾಗೂ ಚಿಲ್ಲರೆ ಗುತ್ತಿಗೆದಾರರು ಸಕಾಲದಲ್ಲಿ ಕ್ರಮವಹಿಸಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು. ಅನ್ನಭಾಗ್ಯ ಹಾಗೂ ಇತರೆ ಸಾರ್ವಜನಿಕ ಪಡಿತರ ವಿತರಣಾ ಯೋಜನೆಗಳಡಿ ಕಾರ್ಯನಿರ್ವಹಿಸುವ ಹಮಾಲಿ ಕೂಲಿ (ಲೋಡ್–ಅನ್ಲೋಡ್) ಕಾರ್ಮಿಕರ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಮಾಲಿ ಕಾರ್ಮಿಕರು ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ESI ಹಾಗೂ PF ಪಾವತಿಯಲ್ಲಿ ಅಸಮರ್ಪಕತೆ ದೂರುಗಳ ಕುರಿತು ಕ್ರಮವಹಿಸುವಂತೆ ಎಚ್ಚರಿಸಿದರು. ಹಮಾಲಿ ಕಾರ್ಮಿಕರಿಗೆ ಪ್ರತೀ […]

    The post ಆಹಾರ ಧಾನ್ಯಗಳ ಎತ್ತುವಳಿ – ವಿತರಣೆಯಲ್ಲಿ ವಿಳಂಬ ಸಲ್ಲದು ; ಡಾ.ಕುಮಾರ appeared first on nudikarnataka.



    ಆಹಾರ ಧಾನ್ಯಗಳ ಎತ್ತುವಳಿ ಹಾಗೂ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಸಗಟು ಹಾಗೂ ಚಿಲ್ಲರೆ ಗುತ್ತಿಗೆದಾರರು ಸಕಾಲದಲ್ಲಿ ಕ್ರಮವಹಿಸಬೇಕೆಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

    ಅನ್ನಭಾಗ್ಯ ಹಾಗೂ ಇತರೆ ಸಾರ್ವಜನಿಕ ಪಡಿತರ ವಿತರಣಾ ಯೋಜನೆಗಳಡಿ ಕಾರ್ಯನಿರ್ವಹಿಸುವ ಹಮಾಲಿ ಕೂಲಿ (ಲೋಡ್–ಅನ್ಲೋಡ್) ಕಾರ್ಮಿಕರ ಕುಂದುಕೊರತೆಗಳ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹಮಾಲಿ ಕಾರ್ಮಿಕರು ಸಂಬಳ ಪಾವತಿಯಲ್ಲಿ ವಿಳಂಬ ಮತ್ತು ESI ಹಾಗೂ PF ಪಾವತಿಯಲ್ಲಿ ಅಸಮರ್ಪಕತೆ ದೂರುಗಳ ಕುರಿತು ಕ್ರಮವಹಿಸುವಂತೆ ಎಚ್ಚರಿಸಿದರು.

    ಹಮಾಲಿ ಕಾರ್ಮಿಕರಿಗೆ ಪ್ರತೀ ತಿಂಗಳು 05ನೇ ತಾರೀಖಿನೊಳಗೆ ಕೂಲಿ ಪಾವತಿಸುವುದು ಕಡ್ಡಾಯ. ಪ್ರತೀ ತಿಂಗಳು 10ನೇ ತಾರೀಖಿನೊಳಗೆ ಅನ್ನಭಾಗ್ಯ ಹಾಗೂ ಇತರೆ ಯೋಜನೆಗಳ ಪಡಿತರ ಎತ್ತುವಳಿ ಮತ್ತು ವಿತರಣೆಯನ್ನು ಪೂರ್ಣಗೊಳಿಸಬೇಕು. ಪ್ರತೀ ಮಾಹೆ ಹಮಾಲಿ ಕಾರ್ಮಿಕರಿಗೆ ESI ಹಾಗೂ PF ಕಡ್ಡಾಯವಾಗಿ ಪಾವತಿಸಿ, ಅದರ ದಾಖಲೆಗಳನ್ನು ಹಾಗೂ ಮಾಹಿತಿಯನ್ನು ಕಛೇರಿಗೆ ನೀಡಬೇಕು ಎಂದು ಸೂಚಿಸಿದರು.

    ಉದ್ಯೋಗದಾತರ ವಂತಿಕೆ (PFI)ಯನ್ನು ನಿಯಮಾನುಸಾರ ಸಂಪೂರ್ಣವಾಗಿ ಪಾವತಿಸಬೇಕು. ಹಮಾಲಿ ಕಾರ್ಮಿಕರ ಕುಂದುಕೊರತೆಗಳ ತ್ವರಿತ ಪರಿಹಾರಕ್ಕಾಗಿ ದೂರು ಸ್ವೀಕಾರ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಮಂಡ್ಯ ರವರಿಗೆ ಸೂಚಿಸಲಾಯಿತು.ಮೇಲ್ಕಂಡ ಸೂಚನೆಗಳ ಉಲ್ಲಂಘನೆ ಕಂಡುಬಂದಲ್ಲಿ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಯಿತು.

    ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಪ್ರತೀಕ್ ಜಿ ಹೆಗಡೆ, ಕರ್ನಾಟಕ ಶ್ರಮಿಕ ಶಕ್ತಿ ರಾಜ್ಯಾಧ್ಯಕ್ಷ ವರದರಾಜೇಂದ್ರ, ಕರ್ನಾಟಕ ಶ್ರಮಿಕ ಶಕ್ತಿ ಜಿಲ್ಲಾಧ್ಯಕ್ಷ ಬಿ ಕೃಷ್ಣ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

    The post ಆಹಾರ ಧಾನ್ಯಗಳ ಎತ್ತುವಳಿ – ವಿತರಣೆಯಲ್ಲಿ ವಿಳಂಬ ಸಲ್ಲದು ; ಡಾ.ಕುಮಾರ appeared first on nudikarnataka.

    Click here to Read More
    Previous Article
    ಉಡುಪಿ:‌ ಕುರ್ಚಿಯಲ್ಲಿ ಕುಳಿತಲ್ಲಿಯೇ ಹೋಂ ನಸ್೯ ಮೃತ್ಯು
    Next Article
    ಮಾರುಕಟ್ಟೆ ಧಾರಣೆ | ಜನವರಿ 03 | ಹತ್ತಿ ರೇಟ್ ಎಷ್ಟಿದೆ?

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment