Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಬಿಕ್ಕಟ್ಟು: ಟಾಸ್‌ಗೆ ಮ್ಯಾಚ್ ರೆಫರಿ ಬಂದರೂ, ಬಾರದ ಆಟಗಾರರು!

    9 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಂಗ್ಲಾದೇಶದ ದೇಶೀಯ ಟಿ20 ಲೀಗ್ ಆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲೂ ಬಿಕ್ಕಟ್ಟು ಉಂಟಾಗಿದೆ. ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 1 ಗಂಟೆಗೆ ಆರಂಭವಾಗಬೇಕಿದ್ದ ಚಟ್ಟೋಗ್ರಾಮ್ ರಾಯಲ್ಸ್ ಮತ್ತು ನೋವಾಖಾಲಿ ಎಕ್ಸ್‌ಪ್ರೆಸ್ ನಡುವಿನ ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ. ಪಂದ್ಯದ ಟಾಸ್‌ಗಾಗಿ 12.30ರ ಸುಮಾರಿಗೆ ಮ್ಯಾಚ್ ರೆಫರಿ ಮೈದಾನಕ್ಕೆ ಬಂದರೂ, ಎರಡೂ ತಂಡಗಳ ನಾಯಕರು ಅಥವಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಏನಾಗುತ್ತಿದೆ ಎಂದು ತಿಳಿದಿಲ್ಲ, ಟಾಸ್‌ಗಾಗಿ ಮೈದಾನದಲ್ಲಿ ನಿಂತಿದ್ದೇನೆ ಆದರೆ ಯಾರೂ ಬಂದಿಲ್ಲ ಎಂದು ಮ್ಯಾಚ್ […]

    The post ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಬಿಕ್ಕಟ್ಟು: ಟಾಸ್‌ಗೆ ಮ್ಯಾಚ್ ರೆಫರಿ ಬಂದರೂ, ಬಾರದ ಆಟಗಾರರು! appeared first on ONLINE EDITION.



    ಹೊಸದಿಗಂತ ಡಿಜಿಟಲ್ ಡೆಸ್ಕ್:

    ಬಾಂಗ್ಲಾದೇಶದ ದೇಶೀಯ ಟಿ20 ಲೀಗ್ ಆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲೂ ಬಿಕ್ಕಟ್ಟು ಉಂಟಾಗಿದೆ. ಸ್ಥಳೀಯ ಕಾಲಮಾನ ಇಂದು ಮಧ್ಯಾಹ್ನ 1 ಗಂಟೆಗೆ ಆರಂಭವಾಗಬೇಕಿದ್ದ ಚಟ್ಟೋಗ್ರಾಮ್ ರಾಯಲ್ಸ್ ಮತ್ತು ನೋವಾಖಾಲಿ ಎಕ್ಸ್‌ಪ್ರೆಸ್ ನಡುವಿನ ಪಂದ್ಯವನ್ನು ಆಟಗಾರರು ಬಹಿಷ್ಕರಿಸಿದ್ದಾರೆ.

    ಪಂದ್ಯದ ಟಾಸ್‌ಗಾಗಿ 12.30ರ ಸುಮಾರಿಗೆ ಮ್ಯಾಚ್ ರೆಫರಿ ಮೈದಾನಕ್ಕೆ ಬಂದರೂ, ಎರಡೂ ತಂಡಗಳ ನಾಯಕರು ಅಥವಾ ಆಟಗಾರರು ಮೈದಾನಕ್ಕೆ ಬರಲಿಲ್ಲ. ಏನಾಗುತ್ತಿದೆ ಎಂದು ತಿಳಿದಿಲ್ಲ, ಟಾಸ್‌ಗಾಗಿ ಮೈದಾನದಲ್ಲಿ ನಿಂತಿದ್ದೇನೆ ಆದರೆ ಯಾರೂ ಬಂದಿಲ್ಲ ಎಂದು ಮ್ಯಾಚ್ ರೆಫರಿ ಶಿಪರ್ ಅಹ್ಮದ್ ಕ್ರಿಕ್‌ಇನ್ಫೋಗೆ ತಿಳಿಸಿದ್ದಾರೆ.

    ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸಂಬಂಧವನ್ನು ಸರಿಪಡಿಸಲು ಮಾತುಕತೆ ನಡೆಸಬೇಕೆಂದು ಸಲಹೆ ನೀಡಿದ್ದ ಮಾಜಿ ಆರಂಭಿಕ ಆಟಗಾರ ಮತ್ತು ನಾಯಕ ತಮೀಮ್ ಇಕ್ಬಾಲ್ ಅವರನ್ನು ‘ಭಾರತೀಯ ಏಜೆಂಟ್’ ಎಂದು ಕರೆದಿದ್ದ ಕ್ರಿಕೆಟ್ ಮಂಡಳಿಯ ನಿರ್ದೇಶಕ ನಜ್ಮುಲ್ ಇಸ್ಲಾಂ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಕ್ರಿಕೆಟರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಮಿಥುನ್ ಸ್ಪಷ್ಟಪಡಿಸಿದ್ದರು.

    ನಜ್ಮುಲ್ ಇಸ್ಲಾಂ ಅವರ ಹೇಳಿಕೆ ಮಂಡಳಿಯ ನಿಲುವಲ್ಲ ಮತ್ತು ಆಟಗಾರರನ್ನು ಅವಮಾನಿಸುವವರ ವಿರುದ್ಧ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದ್ದರೂ, ಕ್ರಮ ಕೈಗೊಳ್ಳುವವರೆಗೂ ಆಟವಾಡುವುದಿಲ್ಲ ಎಂಬುದು ಆಟಗಾರರ ನಿಲುವಾಗಿದೆ. ತಮೀಮ್ ಇಕ್ಬಾಲ್ ಅವರನ್ನು ಭಾರತದ ಏಜೆಂಟ್ ಎಂದು ಕರೆದ ನಜ್ಮುಲ್ ಇಸ್ಲಾಂ ಅವರನ್ನು ವಜಾಗೊಳಿಸಬೇಕೆಂದು ಆಟಗಾರರ ಸಂಘಟನೆ ಕ್ರಿಕೆಟ್ ಮಂಡಳಿಗೆ ಗಡುವು ನೀಡಿತ್ತು.

    ನಜ್ಮುಲ್ ಇಸ್ಲಾಂ ಅವರ ವೈಯಕ್ತಿಕ ಹೇಳಿಕೆಗಳಿಗೆ ಕ್ರಿಕೆಟ್ ಮಂಡಳಿ ಜವಾಬ್ದಾರನಲ್ಲ, ಅಧಿಕೃತ ಪತ್ರಿಕಾ ಪ್ರಕಟಣೆ ಹೊರತುಪಡಿಸಿ ಬರುವ ಯಾವುದೇ ಹೇಳಿಕೆಗಳು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ನಿಲುವಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.

    ಮುಸ್ತಫಿಜುರ್ ರಹಮಾನ್ ಅವರನ್ನು ಐಪಿಎಲ್‌ನಲ್ಲಿ ಆಡದಂತೆ ಬಿಸಿಸಿಐ ನಿಷೇಧ ಹೇರಿದ ನಂತರ ಭಾರತ-ಬಾಂಗ್ಲಾದೇಶ ಕ್ರಿಕೆಟ್ ಸಂಬಂಧ ಹದಗೆಟ್ಟಿತ್ತು. ಪ್ರತೀಕಾರವಾಗಿ, ಬಾಂಗ್ಲಾದೇಶ ಸರ್ಕಾರವು ದೇಶದಲ್ಲಿ ಐಪಿಎಲ್ ಪ್ರಸಾರವನ್ನು ನಿಷೇಧಿಸಿತು. ನಂತರ, ಮುಂದಿನ ತಿಂಗಳು ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಭದ್ರತಾ ಕಾರಣಗಳಿಂದಾಗಿ ಭಾರತದಲ್ಲಿ ಆಡಲು ಸಾಧ್ಯವಿಲ್ಲ, ಹಾಗಾಗಿ ಸ್ಥಳವನ್ನು ಬದಲಾಯಿಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಐಸಿಸಿಗೆ ಮನವಿ ಮಾಡಿತ್ತು, ಆದರೆ ಐಸಿಸಿ ಅದನ್ನು ತಿರಸ್ಕರಿಸಿತು.

    The post ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಬಿಕ್ಕಟ್ಟು: ಟಾಸ್‌ಗೆ ಮ್ಯಾಚ್ ರೆಫರಿ ಬಂದರೂ, ಬಾರದ ಆಟಗಾರರು! appeared first on ONLINE EDITION.

    Click here to Read More
    Previous Article
    U19 ಏಕದಿನ ವಿಶ್ವಕಪ್​: ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವಿನ ಶುಭಾರಂಭ!
    Next Article
    ಟೀಮ್ ಇಂಡಿಯಾಕ್ಕೆ ಆಘಾತ: ಏಕದಿನ ಬಳಿಕ ಟಿ20 ಸರಣಿಯಿಂದಲೂ ಸ್ಟಾರ್ ಆಲ್‌ರೌಂಡರ್ ಔಟ್!

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment