Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಮಂಡ್ಯ | ಕುರುಬರ ಸಂಘದ ಮಹಾಸಭೆಯ ತೀರ್ಮಾನವನ್ನು ಪ್ರಕಟಿಸಲಿ : ಬೀರೇಶ್

    2 weeks ago

    ಮಂಡ್ಯ ಜಿಲ್ಲಾ ಕುರುಬರ ಸಂಘದ ಚುನಾವಣೆ ಸಂಬಂಧ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ತೀರ್ಮಾನವನ್ನು ಕಾರ್‍ಯಕಾರಿ ಮಂಡಳಿಯು ಲಿಖಿತ ರೂಪದಲ್ಲಿ ನೀಡುವಂತೆ ಸಂಘದ ಸದಸ್ಯ ಹಾಗೂ ಮಾಜಿ ಸೈನಿಕ ಸಿ.ಟಿ.ಬೀರೇಶ್ ಒತ್ತಾಯಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಸಭೆಗೂ ಮುನ್ನ ಹಾಲಿ ಕಾರ್‍ಯಕಾರಿ ಮಂಡಳಿ ಮುಂದುವರೆಯುವ ಸಂಬಂಧ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆಯಲಾಗಿತ್ತು. ಆ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ ಎಂದರು. ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರು ಪೂರ್ಣಗೊಳಿಸಿಲ್ಲ. ಅವರು ಪ್ರಸ್ತಾಪಿಸಿದ […]

    The post ಮಂಡ್ಯ | ಕುರುಬರ ಸಂಘದ ಮಹಾಸಭೆಯ ತೀರ್ಮಾನವನ್ನು ಪ್ರಕಟಿಸಲಿ : ಬೀರೇಶ್ appeared first on nudikarnataka.



    ಮಂಡ್ಯ ಜಿಲ್ಲಾ ಕುರುಬರ ಸಂಘದ ಚುನಾವಣೆ ಸಂಬಂಧ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ತೀರ್ಮಾನವನ್ನು ಕಾರ್‍ಯಕಾರಿ ಮಂಡಳಿಯು ಲಿಖಿತ ರೂಪದಲ್ಲಿ ನೀಡುವಂತೆ ಸಂಘದ ಸದಸ್ಯ ಹಾಗೂ ಮಾಜಿ ಸೈನಿಕ ಸಿ.ಟಿ.ಬೀರೇಶ್ ಒತ್ತಾಯಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾರ್ಷಿಕ ಸಭೆಗೂ ಮುನ್ನ ಹಾಲಿ ಕಾರ್‍ಯಕಾರಿ ಮಂಡಳಿ ಮುಂದುವರೆಯುವ ಸಂಬಂಧ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆಯಲಾಗಿತ್ತು. ಆ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ ಎಂದರು.

    ಭಾನುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರು ಪೂರ್ಣಗೊಳಿಸಿಲ್ಲ. ಅವರು ಪ್ರಸ್ತಾಪಿಸಿದ ವಿಷಯಕ್ಕೆ ಕೋರಂ ಅನ್ನೂ ಪಡೆಯಲಿಲ್ಲ. ಸಭೆಯಲ್ಲಿ ಅಧ್ಯಕ್ಷೀಯ ಭಾಷಣ, ತೀರ್ಮಾನಗಳನ್ನು ಘೋಷಣೆ ಮಾಡದೇ ಸಭೆಯನ್ನು ಮುಟುಕುಗೊಳಿಸಿದ್ದಾರೆ ಎಂದು ಆರೋಪಿಸಿದರು.

    ಎಲ್ಲ ಸಂಘಗಳು ಸದಸ್ಯತ್ವ ಹೆಚ್ಚಿಸಲು ಶ್ರಮಿಸಿದರೆ ಸದಸ್ಯರ ಸಂಖ್ಯೆ ಹೆಚ್ಚಾದರೆ ಸಂಘಕ್ಕೆ ಹೊರೆಯಾಗುತ್ತದೆ ಎಂದು ಹೇಳಿದವರಲ್ಲಿ ಇವರೇ ಮೊದಲ ಅಧ್ಯಕ್ಷ. ನಾನು ಹಳ್ಳಿಗಳು ತಿರುಗಿ ೩೦೦ಕ್ಕೂ ಹೆಚ್ಚು ಸದಸ್ಯತ್ವ ಮಾಡಿಸಿದ್ದೇನೆ. ಸಂಘದಲ್ಲಿ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಆಯ್ಕೆಯಾಗುವ ಆಸೆ ನನಗೂ ಇದೆ. ಸಹಕಾರ ನಿಯಮದಡಿ ಅವಧಿ ಮುಗಿಯುವುದರ ಒಳಗೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ಇವರು ಇದುವರೆಗೂ ಯಾವುದೇ ಚುನಾವಣೆ ಎದುರಿಸಿ ಆಯ್ಕೆಯಾಗಿಲ್ಲ. ಅವಿರೋಧ ಆಯ್ಕೆ ಮೂಲಕ ಅಧ್ಯಕ್ಷರಾಗಿದ್ದಾರೆ. ಇವರಿಗೆ ಮುಂದೆ ಚುನಾವಣೆ ನಡೆಯಲಿದೆ ಎಂಬ ಭಯವಿದೆ. ಚುನಾವಣೆ ಎದುರಿಸಿದರೆ ಇವರಿಗೆ ಠೇವಣಿಯೂ ದೊರೆಯುವುದಿಲ್ಲ. ಅದಕ್ಕೆ ಹಿಂಬಾಗಿಲಿನಿಂದ ಅಧಿಕಾರದಲ್ಲಿ ಮುಂದುವರೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಅವರು ಸಂಘದ ಅಭಿವೃದ್ದಿ ಮಾಡುವುದೇ ಆದರೆ ಚುನಾವಣೆ ಗೆದ್ದು ಬಂದು ಮಾಡಲಿ ಎಂದು ಸವಾಲು ಹಾಕಿದರು.

    ಗೋಷ್ಠಿಯಲ್ಲಿ ಎಸ್.ಎಲ್.ಶಂಕರ್, ಲೋಕೇಶ್, ಬೀರೇಶ್, ಎಂ.ಭೀಮೇಶ್, ಎಸ್.ಸಿ.ಸ್ವಾಮಿ ಇದ್ದರು.

    The post ಮಂಡ್ಯ | ಕುರುಬರ ಸಂಘದ ಮಹಾಸಭೆಯ ತೀರ್ಮಾನವನ್ನು ಪ್ರಕಟಿಸಲಿ : ಬೀರೇಶ್ appeared first on nudikarnataka.

    Click here to Read More
    Previous Article
    ಮರ್ಯಾದೆಗೇಡು ಹತ್ಯೆ ಕಾಯ್ದೆ|ಮಾನ್ಯಪಾಟೀಲ್ ಹೆಸರಲ್ಲಿ ಜಾರಿಯಾಗಲಿ: ಬಸವರಾಜ್ ಸೂಳೆಬಾವಿ ಒತ್ತಾಯ
    Next Article
    ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ಚೆಲ್ಲಾಟ ; ಟಿ.ಎಲ್.ಕೃಷ್ಣೇಗೌಡ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment