Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ಚೆಲ್ಲಾಟ ; ಟಿ.ಎಲ್.ಕೃಷ್ಣೇಗೌಡ

    2 weeks ago

    ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಜನರ ಹಾಗೂ ಯುವಕರ ಭಾವನೆಗಳೊಂದಿಗೆ ರಾಜಕೀಯ ಚಲ್ಲಾಟವಾಡುತ್ತಿವೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್‍ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಕೈಗಾರಿಕೆ ಸ್ಥಾಪನೆ ಸಂಬಂಧ ಆಡಿರುವುದು ರಾಜಕೀಯ ಪ್ರೇರಿತ ಮಾತುಗಳು. ಜಿಲ್ಲೆಯ ಜನರನ್ನು ಮಂಗ ಮಾಡಲು ರಾಜ್ಯ ಸರಕಾರ ಜಾಗ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದರು. ಮಂಡ್ಯ ಜಿಲ್ಲೆಯಲ್ಲಿ ಅತಿ […]

    The post ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ಚೆಲ್ಲಾಟ ; ಟಿ.ಎಲ್.ಕೃಷ್ಣೇಗೌಡ appeared first on nudikarnataka.



    ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜಿಲ್ಲೆಯ ಜನರ ಹಾಗೂ ಯುವಕರ ಭಾವನೆಗಳೊಂದಿಗೆ ರಾಜಕೀಯ ಚಲ್ಲಾಟವಾಡುತ್ತಿವೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ಜಿಲ್ಲಾ ಕಾರ್‍ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.

    ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಕೈಗಾರಿಕೆ ಸ್ಥಾಪನೆ ಸಂಬಂಧ ಆಡಿರುವುದು ರಾಜಕೀಯ ಪ್ರೇರಿತ ಮಾತುಗಳು. ಜಿಲ್ಲೆಯ ಜನರನ್ನು ಮಂಗ ಮಾಡಲು ರಾಜ್ಯ ಸರಕಾರ ಜಾಗ ಕೊಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಎಂದರು.

    ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಠಿಸುವ, ಆಧುನಿಕ ಮತ್ತು ಉನ್ನತ ತಂತ್ರಜ್ಞಾನ ತರುವ ಕೈಗಾರಿಕೆಗಳನ್ನು ಸಾರ್ವಜನಿಕ ವಲಯದಲ್ಲಿ ಸ್ಥಾಪಿಸಬೇಕಿದೆ. ಆದರೆ ರಾಜಕೀಯ ಪಕ್ಷಗಳು ಈ ವಿಚಾರ ರಾಜಕಾರಣ ಮಾಡುತ್ತಿವೆ. ಇವರ ಕೆಸರೆರೆಚಾಟ ನೋಡುತ್ತಿದ್ದರೆ, ಎರಡೂ ಪಕ್ಷಗಳಿಗೆ ಕೈಗಾರಿಕೆ ಸ್ಥಾಪಿಸುವ ಇಚ್ಛಾಸಕ್ತಿ ಇಲ್ಲದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.

    ಕೈಗಾರಿಕೆ ಸ್ಥಾಪನೆ ಸಂಬಂಧ ಕೇಂದ್ರ ಸಚಿವರು ರಾಜ್ಯ ಸರಕಾರಕ್ಕೆ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸಿಲ್ಲ. ಕೈಗಾರಿಕೆ ಸ್ಥಾಪಿಸುವ ಸಂಸ್ಥೆ, ಉತ್ಪಾದನೆಯ ಮಾಹಿತಿ, ಬಂಡವಾಳದ ಮೂಲ, ಎಷ್ಟು ಉದ್ಯೋಗ ಸೃಷ್ಠಿಯಾಗಲಿದೆ, ಭೂಮಿಯ ಅಗತ್ಯತೆ, ಕೆಐಎಡಿಬಿ ನಿವೇಶನಗಳಲ್ಲಿ ಕೈಗಾರಿಕೆ ತೆರೆಯುವುದ ಅಥವಾ ಹೊಸದಾಗಿ ಭೂಮಿ ಬೇಕಾ ? ಸಂಸ್ಥೆ ಹಾಗೂ ಕೇಂದ್ರ ಸರಕಾರದ ನಡುವೆಯ ಮಾತುಕತೆ, ಒಪ್ಪಂದಗಳೇನಿವೆ, ರಾಜ್ಯ ಸರಕಾರಕ್ಕೆ ಸಂಸ್ಥೆಯು ನೀಲಿ ನಕ್ಷೆ ಅಥವಾ ನಿರ್ದಿಷ್ಟ ಪ್ರಸ್ತಾವನೆ ಸಲ್ಲಿಸಿದೆಯೇ ಎಂಬ ಮಾಹಿತಿಯನ್ನು ಜಿಲ್ಲೆ ಜನರ ಮುಂದಿಡುವಂತೆ ಒತ್ತಾಯಿಸಿದರು.

    ಇತ್ತ ರಾಜ್ಯ ಸರಕಾರವೂ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅತ್ತ ಕೇಂದ್ರ ಸರಕಾರವು ಮನರೇಗಾದಲ್ಲಿ ಉದ್ಯೋಗದ ಗ್ಯಾರೆಂಟಿ ಕಸಿದಿದೆ. ಇದನ್ನು ಪ್ರಶ್ನಿಸದ ಕೇಂದ್ರ ಸಚಿವರು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಿ ಜಿಲ್ಲೆಯ ಯುವಕರಿಗೆ ಉದ್ಯೋಗ ಒದಗಿಸ ಮುಂದಾಗುವರೆ ಎಂದು ಪ್ರಶ್ನಿಸಿದರು.

    ಈ ನಡುವೆ ಕೇಂದ್ರ ಸರಕಾರವು ಸಾರಿಗೆ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಯತ್ನಿಸುತ್ತಿದೆ. ಪ್ರತಿ ವಿದ್ಯುತ್ ಬಸ್‌ಗೆ ೫೦ ಲಕ್ಷ ಸಬ್ಸಿಡಿ ಆಧಾರದಲ್ಲಿ ೪೦೦೦ ಬಸ್‌ಗೆ ೨೦೦೦ ಕೋಟಿ ರೂಗಳನ್ನು ಕುಮಾರಸ್ವಾಮಿ ಅವರ ಇಲಾಖೆಯ ಅಡಿಯಲ್ಲಿಯೇ ನೀಡಲಾಗುತ್ತಿದೆ. ಖಾಸಗಿ ಸಂಸ್ಥೆಗಳೇ ತಯಾರಿಸಿ, ಸಾರಿಗೆ ವ್ಯವಸ್ಥೆ ನಡೆಸುವ ಮೂಲಕ ಖಾಸಗೀಕರಣ ಮಾಡುವ ಹುನ್ನಾರ ಹೆಣೆಯಲಾಗಿದೆ ಎಂದು ಆರೋಪಿಸಿದರು.

    ಗೋಷ್ಠಿಯಲ್ಲಿ ಕಾರ್‍ಯದರ್ಶಿ ಎನ್.ಎಲ್.ಭರತ್‌ರಾಜ್, ಮಂಡಳಿ ಸದಸ್ಯ ಬಿ.ಹನುಮೇಶ್, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ಇದ್ದರು.

    The post ಕೈಗಾರಿಕೆ ಸ್ಥಾಪನೆ ವಿಚಾರದಲ್ಲಿ ಕಾಂಗ್ರೆಸ್ – ಜೆಡಿಎಸ್ ಚೆಲ್ಲಾಟ ; ಟಿ.ಎಲ್.ಕೃಷ್ಣೇಗೌಡ appeared first on nudikarnataka.

    Click here to Read More
    Previous Article
    ಮಂಡ್ಯ | ಕುರುಬರ ಸಂಘದ ಮಹಾಸಭೆಯ ತೀರ್ಮಾನವನ್ನು ಪ್ರಕಟಿಸಲಿ : ಬೀರೇಶ್
    Next Article
    ರಾಜ್ಯ ಸರ್ಕಾರ ಒಳಮೀಸಲಾತಿ ಗೊಂದಲ ಸರಿಪಡಿಸಲು ಒತ್ತಾಯ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment