Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ

    11 hours ago

    ಪಾವಗಡ :  ಈ ತಿಂಗಳ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ತಾಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಸೀಲ್ದಾರ್ ಡಿ. ಎನ್. ವರದರಾಜ ರವರು ಈ ತಿಂಗಳು 16 ರಂದು ಶನಿವಾರ ಶ್ರೀ ಕೃಷ್ಣಾಷ್ಟಮಿಯನ್ನು ಸರ್ಕಾರ ನಿಯಮದಂತೆ ತಾಲೂಕ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದು ಪಾವಗಡ ತಾಲ್ಲೂಕಿನ ಎಲ್ಲ ಯಾದವ ಮುಖಂಡರು ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ತಿಳಿಸಿದರು. ಪಾವಗಡ ತಾಲ್ಲೂಕಿನ ಯಾದವ ಸಂಘದ …

    The post ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ appeared first on ಸುವರ್ಣ ಪ್ರಗತಿ.



    ಪಾವಗಡ :  ಈ ತಿಂಗಳ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶುಕ್ರವಾರ ತಾಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವರ್ಗದಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಸಭೆ ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತಹಸೀಲ್ದಾರ್ ಡಿ. ಎನ್. ವರದರಾಜ ರವರು ಈ ತಿಂಗಳು 16 ರಂದು ಶನಿವಾರ ಶ್ರೀ ಕೃಷ್ಣಾಷ್ಟಮಿಯನ್ನು ಸರ್ಕಾರ ನಿಯಮದಂತೆ ತಾಲೂಕ್ ಕಚೇರಿಯಲ್ಲಿ ಆಚರಣೆ ಮಾಡುತ್ತಿದ್ದು ಪಾವಗಡ ತಾಲ್ಲೂಕಿನ ಎಲ್ಲ ಯಾದವ ಮುಖಂಡರು ಜನ್ಮಾಷ್ಟಮಿಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ತಿಳಿಸಿದರು.
    ಪಾವಗಡ ತಾಲ್ಲೂಕಿನ ಯಾದವ ಸಂಘದ ಅಧ್ಯಕ್ಷರಾದ ನರಸಿಂಹಪ್ಪ ಮಾತನಾಡಿ 16 ಶನಿವಾರದಂದು ಸರ್ಕಾರದ ನಿಯಮದಂತೆ ತಹಸಿಲ್ದಾರ್ ಕಚೇರಿಯಲ್ಲಿ ಆಚರಣೆ ಮಾಡಿ ಮತ್ತೆ 18 ರಂದು ಸೋಮವಾರ ರೊಪ್ಪ ಮತ್ತು ಪಾವಗಡ ಟೌನ್ ಎಲ್ಲಾ ಯಾದವ ಸಾಮಾಜಿಕ ವರ್ಗದವರು ಸೇರಿ ಆರತಿಗಳೊಂದಿಗೆ ಗುರುಭವನದಿಂದ ವೇಣುಗೋಪಾಲ್ ಸ್ವಾಮಿ ದೇವಸ್ಥಾನದವರೆಗೆ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ತೆರಳಿ ವೇಣುಗೋಪಾಲ ಸ್ವಾಮಿಗೆ ಆರತಿಗಳನ್ನು ಬೆಳಗಿ ಪೂಜೆಯನ್ನು ಮುಗಿಸಿಕೊಂಡು ಪ್ರಸಾದವನ್ನು ಸೇವಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಯಾದವ ಮುಖಂಡರಾದ ಮೈಲಾರ ರೆಡ್ಡಿ. ಬಲರಾಮ್ ರೆಡ್ಡಿ, ಬಾಲಕೃಷ್ಣ ರೈತ ಸಂಘದ ಪೂಜಾರಪ್ಪ, ಹನುಮಂತರೆಡ್ಡಿ, ಶಿವಕುಮಾರ್, ಶ್ರೀಧರ್, ಅನಿಲ್ ಈರಣ್ಣ, ಡಾಬಾ ಹರೀಶ, ಪಾಂಡು, ಗೋಪಾಲ್ ಇನ್ನ ಮುಂತಾದ ಯಾದವ ಮುಖಂಡರು ಹಾಜರಿದ್ದರು

    The post ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಯಾದವ ಮುಖಂಡರಿಂದ ಪೂರ್ವಭಾವಿ ಸಭೆ appeared first on ಸುವರ್ಣ ಪ್ರಗತಿ.

    Click here to Read More
    Previous Article
    ಶನಿಮಹಾದೇವರ ಭಕ್ತಿರಿಗೆ ವೈದ್ಯ ಡಾ.ಎಂ.ಹೆಚ್ ನಾರಾಯಣಪ್ಪರವರಿಂದ ಅನ್ನದಾಸೋಹ
    Next Article
    ಕುಣಿಗಲ್ : ದಾಖಲೆ ಇಲ್ಲದ ಟ್ರ್ಯಾಕ್ಟರ್ ಹಾಗೂ ಆಟೋ ಸೀಜ್ ಮಾಡಿದ ಆರ್.ಟಿ. ಓ ಅಧಿಕಾರಿ

    Related SuvarnaPragathi Updates:

    Are you sure? You want to delete this comment..! Remove Cancel

    Comments (0)

      Leave a comment